twitter
    For Quick Alerts
    ALLOW NOTIFICATIONS  
    For Daily Alerts

    'ಸಿಂಧೂರ ಲಕ್ಷ್ಮಣ'ನಾಗಿ ಅಬ್ಬರಿಸಲಿದ್ದಾರೆ ದರ್ಶನ್: ಮತ್ತೆ ಒಂದಾಗುತ್ತಿದೆ 'ರಾಬರ್ಟ್' ಟೀಂ

    By ಫಿಲ್ಮ್ ಡೆಸ್ಕ್
    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.

    Recommended Video

    Ambareesh memorial:ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಬಿಎಸ್‌ವೈ ಅಸ್ತು |Kanteerava Studio |Filmibeat Kannada

    ರಾಬರ್ಟ್ ಮುಗಿಯುತ್ತಿದ್ದಂತೆ ದರ್ಶನ್ ಮದಕರಿ ನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಚಿತ್ರೀಕರಣ ಸಹ ಪ್ರಾರಂಭವಾಗಿತ್ತು. ಆದರೆ ಆಗಲೆ ಕೊರೊನಾ ವಕ್ಕರಿಸಿಕೊಂಡ ಪರಿಣಾಮ ಚಿತ್ರೀಕರಣ ಸಹ ಸ್ಥಗಿತಗೊಂಡಿದೆ. ಆದರೆ ಆಗಲೆ ದರ್ಶನ್ ಕಡೆಯಿಂದ ಮತ್ತೊಂದು ಸುದ್ದಿ ಜೋರಾಗಿ ಕೇಳಿಬರುತ್ತಿದೆ. ದರ್ಶನ್ ಮತ್ತೊಂದು ಐತಿಹಾಸಿಕ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಇದು ದರ್ಶನ್ ಅವರ ಕನಸಿನ ಸಿನಿಮಾ ಸಿನಿಮಾದ ಎಂದು ಹೇಳಲಾಗುತ್ತಿದೆ. ಅದೆ ಸಿಂಧೂರ ಲಕ್ಷ್ಣಣ ಸಿನಿಮಾ. ಮುಂದೆ ಓದಿ...

    ಆತ್ಮೀಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ದರ್ಶನ್ಆತ್ಮೀಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ದರ್ಶನ್

    ಸಿಂಧೂರ ಲಕ್ಷ್ಮಣನಾಗಿ ಅಬ್ಬರಿಸಲಿದ್ದಾರೆ ದರ್ಶನ್

    ಸಿಂಧೂರ ಲಕ್ಷ್ಮಣನಾಗಿ ಅಬ್ಬರಿಸಲಿದ್ದಾರೆ ದರ್ಶನ್

    ದರ್ಶನ್, ಸ್ವತಂತ್ರ ಹೋರಾಟಗಾರ ಸಿಂಧೂರ ಲಕ್ಷ್ಮಣನಾಗಿ ತೆರೆಮೇಲೆ ಬರಲಿದ್ದಾರೆ. ಸಿಂಧೂರ ಲಕ್ಷ್ಮಣನ ಪಾತ್ರ ಮಾಡಬೇಕು ಎನ್ನುವುದು ದರ್ಶನ್ ಅವರ ದೊಡ್ಡ ಕನಸಂತೆ. ಅವರ ಆಸೆಯನ್ನು ನಿರ್ದೇಶಕ ತರುಣ್ ಸುಧೀರ್ ಬಳಿ ಹೇಳಿಕೊಂಡಿದ್ದಾರೆ. ದರ್ಶನ್ ಕನಸಿನ ಸಿನಿಮಾಗೆ ತರುಣ್ ಕೂಡ ಜೈ ಎಂದಿದ್ದಾರೆ.

    ಮತ್ತೆ ಒಂದಾದ ರಾಬರ್ಟ್ ಟೀಂ

    ಮತ್ತೆ ಒಂದಾದ ರಾಬರ್ಟ್ ಟೀಂ

    ರಾಬರ್ಟ್ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಸಿಂಧೂರ ಲಕ್ಷ್ಮಣ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಸಿನಿಮಾ ಮಾಡುವ ದರ್ಶನ್ ಆಸೆಗೆ ನಿರ್ಮಾಪಕ ಉಮಾಪತಿ ಸಹ ಸಾಥ್ ನೀಡಿದ್ದು, ಬಂಡವಾಳ ಹೂಡಲು ಸಜ್ಜಾಗಿದ್ದಾರೆ. ಈಗಾಗಲೆ ಸಿಂಧೂರ ಲಕ್ಷ್ಮಣ ಟೈಟಲ್ ಉಮಾಪತಿ ಅವರ ಬ್ಯಾನರ್ ನಡಿ ರಿಜಿಸ್ಟರ್ ಮಾಡಿಸಿದ್ದಾರೆ. ಅಲ್ಲದೆ ನಿರ್ದೇಶಕ ತರುಣ್ ಸುಧೀರ್ ನಿರ್ದೇಶನ ಮಾಡಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

    ಕೆಂಪೇಗೌಡರ ಜಯಂತಿ ಶುಭಾಶಯ ಕೋರಿದ ದರ್ಶನ್ ಮಾಡಿದರೊಂದು ಯಡವಟ್ಟುಕೆಂಪೇಗೌಡರ ಜಯಂತಿ ಶುಭಾಶಯ ಕೋರಿದ ದರ್ಶನ್ ಮಾಡಿದರೊಂದು ಯಡವಟ್ಟು

    ಯಾರು ಸಿಂಧೂರ ಲಕ್ಷ್ಮಣ?

    ಯಾರು ಸಿಂಧೂರ ಲಕ್ಷ್ಮಣ?

    ಶೌರ್ಯ ಮತ್ತು ಸಾಹಸಕ್ಕೆ ಹೆಸರುವಾಸಿಯಾಗಿದ್ದ ವೀರ ಸೇನಾನಿ ಸಿಂಧೂರ ಲಕ್ಷ್ಮಣನ ಬಗ್ಗೆ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದವರಿಗೆ ಚನ್ನಾಗಿ ಗೊತ್ತಿರುತ್ತೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗ ಸಿಂದೂರಿನಲ್ಲಿ ಜನಿಸಿದ ಸ್ವಾತಂತ್ರ ಹೋರಾಟಗಾರ ಲಕ್ಷ್ಮಣನ. ತನ್ನದೇ ಆದ ಒಂದು ತಂಡ ಕಟ್ಟಿಕೊಂಡು ಬ್ರಿಟಿಷ್ ಕಚೇರಿಗಳನ್ನು ಲೂಟಿ ಮಾಡಿ ಅದನ್ನು ಬಡವರಿಗೆ ಹಂಚುತ್ತಿದ್ದ. 1920ರಲ್ಲಿ ಅಸಹಕಾರ ಚಳುವಳಿ ಪ್ರಾರಂಭವಾದಾಗ ಲಕ್ಷ್ಮಣ ತನ್ನದೆ ಆದ ರೀತಿಯಲ್ಲಿ ಸ್ವತಂತ್ರ ಹೋರಾಟದಲ್ಲಿ ತೊಡಗಿಕೊಂಡಿದ್ದನಂತೆ. ಆದರೆ ಬ್ರಿಟಿಷರು ಹೊಂಚು ಹಾಕಿ ರಾತ್ರಿ ಊಟ ಮಾಡುವಾಗ ಮೋಸದಿಂದ ಲಕ್ಷ್ಮಣನನ್ನು ಕೊಂದರು. ಕೇವಲ 24 ನೆ ವಯಸ್ಸಿನಲ್ಲಿ ಮಡಿದ ಈ ಸ್ವಾತಂತ್ರ ಹೋರಾಟಗಾರನ ಕುರಿತು ಹಲವಾರು ನಾಟಕ ಮತ್ತು ಜಾನಪದ ಸಾಹಿತ್ಯಗಳು ಮೂಡಿ ಬಂದಿವೆ.

    ನಟ ದರ್ಶನ್ ಪತ್ನಿಗೆ ಕೊರೊನಾ ಪಾಸಿಟಿವ್ ವದಂತಿ: ವಿಜಯಲಕ್ಷ್ಮಿ ಹೇಳಿದ್ದೇನು?ನಟ ದರ್ಶನ್ ಪತ್ನಿಗೆ ಕೊರೊನಾ ಪಾಸಿಟಿವ್ ವದಂತಿ: ವಿಜಯಲಕ್ಷ್ಮಿ ಹೇಳಿದ್ದೇನು?

    ಈಗಾಗಲೆ ಕನ್ನಡದಲ್ಲಿ ಬಂದಿದೆ ಸಿಂಧೂರ ಲಕ್ಷ್ಮಣ ಸಿನಿಮಾ

    ಈಗಾಗಲೆ ಕನ್ನಡದಲ್ಲಿ ಬಂದಿದೆ ಸಿಂಧೂರ ಲಕ್ಷ್ಮಣ ಸಿನಿಮಾ

    ವೀರ ಸಿಂಧೂರ ಲಕ್ಷ್ಮಣ ಎನ್ನುವ ಹೆಸರಿನಲ್ಲಿ ಈಗಾಗಲೆ ಕನ್ನಡದಲ್ಲಿ ಬಂದಿದೆ. 1977ರಲ್ಲಿ ಸಿನಿಮಾ ರಿಲೀಸ್ ಆಗಿದೆ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಸಿನಿಮಾದಲ್ಲಿ ವಜ್ರಮುನಿ, ಕೆ.ಎಸ್ ಅಶ್ವಥ್, ಮಂಜುಳ ಸೇರಿದ್ದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ವಿಶೇಷ ಅಂದರೆ ನಿರ್ದೇಶಕ ತರುಣ್ ಸುಧೀರ್ ತಂದೆ ಸುಧೀರ್ ಕೂಡ ಅಭಿನಯಿಸಿದ್ದಾರೆ.

    ಯಾವಾಗ ಸೆಟ್ಟೇರಲಿದೆ ಸಿನಿಮಾ?

    ಯಾವಾಗ ಸೆಟ್ಟೇರಲಿದೆ ಸಿನಿಮಾ?

    ಸಂಗೋಳ್ಳಿ ರಾಯಣ್ಣ, ಮದಕರಿ ನಾಯಕ ಎರಡು ಸ್ವತಂತ್ರ ಹೋರಾಟಗಾರರ ಸಿನಿಮಾ ಮತ್ತು ಪೌರಾಣಿಕ ಕುರುಕ್ಷೇತ್ರ ಸಿನಿಮಾಗಳಲ್ಲಿ ಅಭಿನಯಿಸುವ ದರ್ಶನ್ ಮತ್ತೊಂದು ಪ್ರಯೋಗಿಕ ಸಿನಿಮಾ ಮಾಡಲು ಮುಂದಾಗಿರುವುದು ಅಭಿಮಾನಿಗಳ ಸಂತಸ ತಂದಿದೆ. ಸದ್ಯ ರಾಬರ್ಟ್ ರಿಲೀಸ್ ಮತ್ತು ರಾಜವೀರ ಮದಕರಿ ನಾಯಕ ಸಿನಿಮಾ ಸಾಲಿನಲ್ಲಿ ಇರುವುದರಿಂದ ಸಿಂಧೂರ ಲಕ್ಷ್ಮಣ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.

    English summary
    Actor Darshan will play Sindoora lakshmana role in his next.
    Monday, June 29, 2020, 14:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X