Don't Miss!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- News ಡಾ.ಮಂಜುನಾಥ್ ಅವರಿಗೆ ಕೇಂದ್ರ ಸಚಿವ ಸ್ಥಾನ: ಸುಳಿವು ಕೊಟ್ಟ ಹೆಚ್ ಡಿ ದೇವೇಗೌಡ
- Automobiles Maruti Suzuki: 1 ವರ್ಷದಲ್ಲಿಯೇ ಹೊಸ ದಾಖಲೆ.. 134,735 ಫ್ರಾಂಕ್ಸ್ ಕಾರುಗಳು ಮಾರಾಟ, ಬೆಲೆ ರೂ.7.51 ಲಕ್ಷ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಶ್ ಮಗನ ಚಿತ್ರಕ್ಕೆ ವಿಶ್ ಮಾಡಿದ ದರ್ಶನ್
ರೆಬಲ್ ಸ್ಟಾರ್ ಅಂಬರೀಶ್ ಅವರ ಮಗನ ಚೊಚ್ಚಲ ಸಿನಿಮಾ 'ಅಮರ್' ಅದ್ಧೂರಿಯಾಗಿ ಸೆಟ್ಟೇರಿದೆ. ಬಹಳ ವಿಶೇಷತೆಗಳಿಂದ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭಕೋರಿದ್ದಾರೆ.
ಮುಹೂರ್ತ ಸಮಾರಂಭದಲ್ಲಿ ಬಹುಶಃ ದರ್ಶನ್ ಅವರ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, 'ಯಜಮಾನ' ಶೂಟಿಂಗ್ ನಲ್ಲಿ ದರ್ಶನ್ ಬ್ಯುಸಿ ಇದ್ದಾರೆ. ಹೀಗಿದ್ದರೂ, ಅಭಿಷೇಕ್ ಗೆ ಮತ್ತು ಚಿತ್ರತಂಡಕ್ಕೆ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.
''ನಮ್ಮೆಲ್ಲರ ಪ್ರೀತಿಯ ಅಂಬಿ ಅಪ್ಪಾಜಿ ರವರ ಪುತ್ರ ಅಭಿ ಇಂದು 'ಅಮರ್' ಚಿತ್ರದ ಮುಹೂರ್ತದ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಈ ಹುಡುಗನ ಮೇಲಿರಲಿ. ಚಿತ್ರವು ಭರ್ಜರಿ ಯಶಸ್ಸು ಗಳಿಸಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.
ಅಂಬಿ ಪುತ್ರನ ಚಿತ್ರಕ್ಕಾಗಿ ಬರ್ತಾರೆ ಭಾರತದ ಸೂಪರ್ ಸ್ಟಾರ್ಸ್.!
ಅಂದ್ಹಾಗೆ, ಅಭಿಷೇಕ್ ಅವರ 'ಅಮರ್' ಸಿನಿಮಾ ದರ್ಶನ್ ಗೂ ತುಂಬಾ ಹತ್ತಿರದ ನಂಟು. ಯಾಕಂದ್ರೆ, ಇದು ಅಂಬರೀಶ್ ಅವರ ಮಗನ ಸಿನಿಮಾ. ಅಂಬರೀಶ್ ಅಂದ್ರೆ ದರ್ಶನ್ ಗೆ ದೊಡ್ಡ ಅಭಿಮಾನ. ಮತ್ತೊಂದೆಡೆ ಈ ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂದೇಶ ನಾಗರಾಜ್. ಇವರು ಕೂಡ ಡಿ ಬಾಸ್ ಗೆ ತುಂಬ ಆತ್ಮೀಯರು. ಹೀಗಾಗಿ, 'ಅಮರ್' ಚಿತ್ರದ ಮೇಲೆ ದರ್ಶನ್ ಅವರಿಗೂ ಕಾಳಜಿ ಹೆಚ್ಚಿದೆ ಅಂದ್ರೆ ತಪ್ಪಾಗಲಾರದು.
ಸಂದರ್ಶನ : ಜನರ ನಿರೀಕ್ಷೆ ಈಡೇರಿಸಲಿಲ್ಲ ಅಂದ್ರೆ ನಾವು ಮಾಡೋದೆ ವೇಸ್ಟ್
ಇನ್ನು 'ಅಮರ್' ಚಿತ್ರದಲ್ಲಿ ದರ್ಶನ್ ಏನಾದರೂ ಅಭಿನಯಿಸಬಹುದಾ ಎಂಬ ಕುತೂಹಲವನ್ನ ತಳ್ಳಿಹಾಕುವಂತಿಲ್ಲ. ಯಾಕಂದ್ರೆ, ಈಗಾಗಲೇ ನಿರ್ದೇಶಕ ನಾಗಶೇಖರ್, ಚಿತ್ರದ ಒಂದು ಹಾಡಿಗೆ ಭಾರತೀಯ ಸೂಪರ್ ಸ್ಟಾರ್ ಗಳನ್ನ ಕರೆತರುವ ಯೋಚನೆಯಲ್ಲಿದ್ದಾರೆ. ಅಂತಹದ್ರಲ್ಲಿ, ಸ್ಯಾಂಡಲ್ ವುಡ್ ನಟರನ್ನ ಬಿಡ್ತಾರಾ ಎಂಬ ಅನುಮಾನ. ಅಷ್ಟೇ ಅಲ್ಲದೆ, ಅಂಬರೀಶ್ ಅವರು ಒಂದುಸ ಮಾತು ಹೇಳಿದ್ರೆ, ಖಂಡಿತಾ ಇಲ್ಲ ಎನ್ನಲ್ಲ ದಾಸ.