Don't Miss!
- News ಕಾಂಗ್ರೆಸ್ ಜನರಿಗೆ ಹೋಲ್ಸೆಲ್ ಮೋಸ ಮಾಡುತ್ತಿದೆ: ಮಾಜಿ ಸಿಎಂ
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆನೆ ಬರೋಕೆ ಇದೆ ನಾಲ್ಕು ತಿಂಗಳು, ನೆಮ್ಮದಿಯಾಗಿರಿ
ಸ್ಯಾಂಡಲ್ವುಡ್ನಲ್ಲಿ ಆನೆ ಅಂದ್ರೆ ಯಾರು ಅಂತ ಮತ್ತೆ ಹೇಳ್ಬೇಕಿಲ್ಲ ಅಲ್ವಾ? ಆನೆ ನಡೆದಿದ್ದೇ ಹಾದಿ ಅನ್ನೋ ಹಾಗೆ ಯಾವಾಗ ಬೇಕಾದ್ರೂ ಬರುವ, ಬಂದಾಗಲೆಲ್ಲ ಕೋಟಿ ಕೋಟಿ ಲೂಟಿ ಮಾಡಿಕೊಂಡು ಹೋಗೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೌದು ತಾನೆ?
ದರ್ಶನ್ ಸಿನಿಮಾ 'ಅಂಬರೀಷ'ದಲ್ಲಿ ಅಂಬಿಯನ್ನ ನೋಡಿ ಪರ್ವಾಗಿಲ್ಲ ಅಂದ ಅಭಿಮಾನಿಗಳು, ಈಗ ಐರಾವತದ ಅವತಾರದಲ್ಲಿ ನೋಡೋಕೆ ಕಾಯ್ತಿದ್ದಾರೆ. ಪುನೀತ್ ಪೊಲೀಸ್ ಪಾತ್ರ ಮಾಡಿದ್ದ ಚಿತ್ರಕ್ಕೆ ಸ್ಪರ್ಧಿಯಾಗಿ, ಐರಾವತ ಚಿತ್ರ ರಣವಿಕ್ರಮ ಜೊತೆ ರಿಲೀಸ್ ಆಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಹಾಗಾಗ್ಲಿಲ್ಲ.
ಐರಾವತ ಚಿತ್ರದ ನಿರ್ದೇಶಕ ಎ.ಪಿ. ಅರ್ಜುನ್ ನಾವು ಬೇರೆಯದ್ದೇ ಲೆವೆಲ್ನಲ್ಲಿ ಬರ್ತೀವಿ ಅಂತಿದ್ದಾರೆ. ಚಿತ್ರವನ್ನ ಲೇಟಾಗಿಯಾದ್ರೂ ಲೇಟೆಸ್ಟಾಗಿ ತರ್ಬೇಕು ಅಂದುಕೊಂಡಿದ್ದಾರೆ. ಹಾಗಾಗಿನೇ ಆಗಸ್ಟ್ ತಿಂಗಳಲ್ಲಿ ಚಿತ್ರ ಬರೋದು ಪಕ್ಕಾ ಅಂದಿದ್ದಾರೆ. [ಎಪಿ ಅರ್ಜುನ್ ಗೂಸಾ ತಿಂದದ್ದು ನಿಜಾನಾ?]
ಜುಲೈ ಕೊನೆಯ ವೇಳೆಗೆ ಚಿತ್ರವನ್ನು ತರೋಕೆ ಪ್ರಯತ್ನ ಮಾಡ್ತೀವಿ ಸಾಧ್ಯವಾಗದಿದ್ರೆ ಆಗಸ್ಟ್ ನಲ್ಲಿ ಗ್ಯಾರಂಟಿ ಅಂತಿದ್ದಾರೆ. ಹಾಗಾಗಿ ಹೊಸಬರ ಸಿನಿಮಾಗಳು, ಸಣ್ಣಪುಟ್ಟ ಸಿನಿಮಾಗಳು ಇನ್ನು ಮೂರು ತಿಂಗಳು ನೆಮ್ಮದಿಯಾಗಿ ಥಿಯೇಟರ್ಗಿಳಿಬಹುದು, ರನ್ನ ವಜ್ರಕಾಯ ಹೊರತಾಗಿ..
ಅಂದ ಹಾಗೆ, ಐರಾವತ ಈಗ 'ಮಿಸ್ಟರ್ ಐರಾವತ' ಆಗಿದೆ. ಈ ಚಿತ್ರಕ್ಕಾಗಿ ಮೊಟ್ಟಮೊದಲ ಬಾರಿಗೆ ದರ್ಶನ್ ಸಿಕ್ಸ್ ಪ್ಯಾಕ್ ಬಾಡಿ ತೋರಲು ಸಾಕಷ್ಟು ಕಸರತ್ತು ಮಾಡಿದ್ದಾರೆ. ಚಿತ್ರದ ಬಿಡುಗಡೆ ತಡವಾಗುತ್ತಿದ್ದುದಕ್ಕೆ ಅರ್ಜುನ್ ನೇ ಕಾರಣ ಅಂತ ಕೆಲವರು ಬೆರಳು ತೋರಿಸಿದ್ದರು. ಅದೇನೇ ಇರಲಿ, ದರ್ಶನ್ ಚಿತ್ರವೆಂದರೆ ಅಭಿಮಾನಿಗಳಿಗೆ ರಸದೌತಣವಂತೂ ಇದ್ದದ್ದೇ. ['ಐರಾವತ' ಚಿತ್ರದ ಟೈಟಲ್ ಚೇಂಜ್]
ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ದರ್ಶನ್ ಮಗ ವಿನೀತ್ ಕೂಡ ಪುಟ್ಟ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಮಿಸಸ್ ಐರಾವತವಾಗಿ ಬಾಂಬೆ ರಂಭೆ ಊರ್ವಶಿ ರೌಟೆಲಾ (ಚಿತ್ರಪಟ) ಮತ್ತು ಪ್ರಕಾಶ್ ರಾಜ್ ಕೂಡ ಅಭಿನಯಿಸುತ್ತಿದ್ದಾರೆ.