'ಒಡೆಯ'ನಾದ ದರ್ಶನ್ ಗೆ ಬಲ ನೀಡಿದ ಅಂಬಿ
Recommended Video

ನಟ ದರ್ಶನ್ ಇಂದಿನಿಂದ 'ಒಡೆಯ'ನಾಗಿದ್ದಾರೆ. ಅರ್ಥಾತ್ ಡಿ ಬಾಸ್ ಅವರ ಹೊಸ ಸಿನಿಮಾ ಇಂದು ಲಾಂಚ್ ಆಗಿದೆ. ದರ್ಶನ್ ಅವರ ಈ ಚಿತ್ರಕ್ಕೆ ನಟ ಅಂಬರೀಶ್ ಸಾಥ್ ನೀಡಿದ್ದಾರೆ. ಈ ಚಿತ್ರಕ್ಕೆ ಮೊದಲು 'ಒಡೆಯರ್' ಎಂಬ ಹೆಸರು ಇದ್ದು, ಬಳಿಕ 'ಒಡೆಯ' ಎಂದು ಅದನ್ನು ಬದಲಿಸಲಾಗಿತ್ತು.
'ಒಡೆಯ' ದರ್ಶನ್ ನಟನೆಯ 52ನೇ ಸಿನಿಮಾವಾಗಿದೆ. ಈ ಚಿತ್ರದ ಮುಹೂರ್ತ ಇಂದು ಮೈಸೂರಿನಲ್ಲಿ ನಡೆದಿದೆ. ಈ ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಸಿನಿಮಾ ಮುಹೂರ್ತ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ನಟ ಅಂಬರೀಶ್ ಭಾಗಿಯಾಗಿದ್ದು, ದರ್ಶನ್ ಚಿತ್ರಕ್ಕೆ ಶುಭ ಕೋರಿದ್ದಾರೆ.
ನಿರ್ಮಾಪಕ ಸಂದೇಶ್ ನಾಗರಾಜ್ ಅವರು ನಟ ದರ್ಶನ್ ಹಾಗೂ ಅಂಬರೀಶ್ ಇಬ್ಬರಿಗೂ ಆಪ್ತರು. ಈ ಹಿಂದೆ ದರ್ಶನ್ ಅವರ 'ಐರಾವತ' ಸಿನಿಮಾಗೆ ಬಂಡವಾಳ ಹಾಕಿದ್ದ ಅವರು ಈಗ ಮತ್ತೆ ದಾಸ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ, ಅಂಬರೀಶ್ ಅವರ ಮಗನ ಚೊಚ್ಚಲ ಚಿತ್ರ 'ಅಮರ್' ಕೂಡ ಸಂದೇಶ್ ನಾಗರಾಜ್ ಅವರ ಬ್ಯಾನರ್ ನಲ್ಲಿ ಬರುತ್ತಿದೆ.

ಇನ್ನು 'ಒಡೆಯ' ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಎಂ.ಡಿ.ಶ್ರೀಧರ್ ನಟ ದರ್ಶನ್ ಜೊತೆಗೆ 'ಬುಲ್ ಬುಲ್' ಸಿನಿಮಾವನ್ನು ಮಾಡಿದ್ದರು. ಈ ಚಿತ್ರದ ಯಶಸ್ಸಿನ ಬಳಿಕ ಮತ್ತೆ ಈ ಜೋಡಿ ಒಂದಾಗಿದೆ.

'ಕುರುಕ್ಷೇತ್ರ', 'ಯಜಮಾನ', 'ಒಡೆಯ' ಸದ್ಯ ದರ್ಶನ್ ಅವರ ಮುಂದಿನ ಚಿತ್ರಗಳಾಗಿವೆ. ಇದರ ಜೊತೆಗೆ ತರುಣ್ ಸುಧೀರ್ ಅವರ ನಿರ್ದೇಶನದ ಚಿತ್ರದಲ್ಲಿ ಸಹ ದರ್ಶನ್ ನಟಿಸುತ್ತಾರೆ.


Click it and Unblock the Notifications











