twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ 'ಒಡೆಯರ್' ಸಿನಿಮಾ ಲಾಂಚ್ ಗೆ ನಿಗದಿ ಆಯ್ತು ದಿನಾಂಕ

    By Naveen
    |

    Recommended Video

    ಸೆಟ್ಟೇರಿತು ದರ್ಶನ್ 52ನೇ ಸಿನಿಮಾ..!! | FIlmibeat Kannada

    ನಟ ದರ್ಶನ್ ಒಂದರ ನಂತರ ಒಂದರಂತೆ ಬೇರೆ ಬೇರೆ ಸಿನಿಮಾದ ಕೆಲಸದಲ್ಲಿ ತೊಡಗಿದ್ದಾರೆ. ದರ್ಶನ್ ಕೆರಿಯರ್ ನ ಮಹತ್ವದ ಸಿನಿಮಾ 'ಕುರುಕ್ಷೇತ್ರ'ದ ಶೂಟಿಂಗ್ ಹಾಗೂ ಡಬ್ಬಿಂಗ್ ಮುಗಿದಿದೆ. ಇದರ ಜೊತೆ ಜೊತೆಗೆ 'ಯಜಮಾನ' ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಬಿಜಿ ಇದ್ದಾರೆ.

    ಈ ಸಿನಿಮಾಗಳ ನಡುವೆ ಈಗ ದರ್ಶನ್ ಅವರ 52ನೇ ಸಿನಿಮಾ ಸೆಟ್ಟೇರುವ ಸಮಯ ಬಂದಿದೆ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ಮೂಲಕ ಸದ್ದು ಮಾಡಿರುವ 'ಒಡೆಯರ್' ಸಿನಿಮಾದ ಮುಹೂರ್ತಕ್ಕೆ ದಿನಾಂಕ ನಿಗದಿ ಆಗಿದೆ. ಅಂದಹಾಗೆ, ದರ್ಶನ್ ಅವರ 'ಒಡೆಯರ್' ಸಿನಿಮಾದ ಒಂದಷ್ಟು ವಿವರ ಮುಂದಿದೆ ಓದಿ...

    ದರ್ಶನ್ ಹೆಸರಿನಲ್ಲಿ ಸಿಎಂ ಕುಮಾರಸ್ವಾಮಿಗೆ ಅವಹೇಳನ ದರ್ಶನ್ ಹೆಸರಿನಲ್ಲಿ ಸಿಎಂ ಕುಮಾರಸ್ವಾಮಿಗೆ ಅವಹೇಳನ

    ಆಗಸ್ಟ್ ಗೆ ಲಾಂಚ್

    ಆಗಸ್ಟ್ ಗೆ ಲಾಂಚ್

    ನಟ ದರ್ಶನ್ ಅವರ 52ನೇ ಸಿನಿಮಾ 'ಒಡೆಯರ್' ಸಿನಿಮಾ ಆಗಸ್ಟ್ 16 ರಂದು ಲಾಂಚ್ ಆಗಲಿದೆಯಂತೆ. ಸ್ವಾತಂತ್ರ್ಯ ದಿನದ ಮುಂದಿನ ದಿನವೇ 'ಒಡೆಯರ್' ಸಿನಿಮಾ ಸೆಟ್ಟೆರಲಿದೆ. ಆಗಸ್ಟ್ 16 ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬ ಇದ್ದು ಅದೇ ದಿನ ಸಿನಿಮಾ ಪ್ರಾರಂಭ ಆಗಲಿದೆ.

    5 ವರ್ಷದ ಬಳಿಕ ಮತ್ತೆ ಒಂದಾದ ಹಿಟ್ ಜೋಡಿ

    5 ವರ್ಷದ ಬಳಿಕ ಮತ್ತೆ ಒಂದಾದ ಹಿಟ್ ಜೋಡಿ

    'ಒಡೆಯರ್' ಸಿನಿಮಾಗೆ ಎಂ ಡಿ ಶ್ರೀಧರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಪೋರ್ಕಿ' ಹಾಗೂ 'ಬುಲ್ ಬುಲ್' ಸಿನಿಮಾದ ನಂತರ ಮತ್ತೆ ಈ ಹಿಟ್ ಜೋಡಿ ಒಂದಾಗಿದೆ. ಐದು ವರ್ಷದ ನಂತರ ಮತ್ತೆ ದರ್ಶನ್ ಗೆ ಎಂ ಡಿ ಶ್ರೀಧರ್ ಆಕ್ಷನ್ ಕಟ್ ಹೇಳಲು ಸಿದ್ಧವಾಗಿದ್ದಾರೆ.

    ಹೋಟೆಲ್ ಸೆಕ್ಯೂರಿಟಿಗೆ ಗೌರವ ನೀಡಿದ ದಾಸನ ದೊಡ್ಡತನಕ್ಕೆ ಮೆಚ್ಚುಗೆ ಹೋಟೆಲ್ ಸೆಕ್ಯೂರಿಟಿಗೆ ಗೌರವ ನೀಡಿದ ದಾಸನ ದೊಡ್ಡತನಕ್ಕೆ ಮೆಚ್ಚುಗೆ

    ಪವನ್ ಒಡೆಯರ್ ಬದಲು ಎಂ ಡಿ ಶ್ರೀಧರ್

    ಪವನ್ ಒಡೆಯರ್ ಬದಲು ಎಂ ಡಿ ಶ್ರೀಧರ್

    ಈ ಹಿಂದೆ 'ಒಡೆಯರ್' ಸಿನಿಮಾಗೆ ಪವನ್ ಒಡೆಯರ್ ನಿರ್ದೇಶನ ಮಾಡಬೇಕಿತ್ತು. ಆದರೆ ಈಗ ಚಿತ್ರಕ್ಕೆ ಎಂ ಡಿ ಶ್ರೀಧರ್ ಎಂಟ್ರಿ ಆಗಿದೆ. ಅತ್ತ ಪವನ್ ಒಡೆಯರ್ ಪುನೀತ್ ರಾಜ್ ಕುಮಾರ್ ಜೊತೆಗೆ 'ನಟ ಸಾರ್ವಭೌಮ' ಚಿತ್ರದಲ್ಲಿ ಬಿಜಿ ಇದ್ದಾರೆ. ಇತ್ತ ದರ್ಶನ್ ಇಮೇಜ್ ಗೆ ತಕ್ಕಂತೆ ಸಿನಿಮಾ ಮಾಡಲು ಎಂ ಡಿ ಶ್ರೀಧರ್ ತಯಾರಾಗಿದ್ದಾರೆ.

    ಹೀರೋಯಿನ್ ಆಯ್ಕೆ ಆಗಿಲ್ಲ

    ಹೀರೋಯಿನ್ ಆಯ್ಕೆ ಆಗಿಲ್ಲ

    ದರ್ಶನ್ ಅವರ ಜೊತೆಗೆ 'ಒಡೆಯರ್' ಸಿನಿಮಾದಲ್ಲಿ ಯಾರು ನಟಿಸುತ್ತಾರೆ ಎಂಬುದು ಇನ್ನು ಗೊತ್ತಿಲ್ಲ. ಚಿತ್ರದ ನಾಯಕಿಯ ಆಯ್ಕೆ ಸದ್ಯದವರೆಗೆ ಆಗಿಲ್ಲ. ಜೊತೆಗೆ ಉಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ಪ್ರಾರಂಭ ಆಗಿಲ್ಲ.

    'ಕುರುಕ್ಷೇತ್ರ' ನಂತರ

    'ಕುರುಕ್ಷೇತ್ರ' ನಂತರ

    ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ' ಚಿತ್ರದ ಡಬ್ಬಿಂಗ್ ಕೆಲಸ ಸಹ ಇದೀಗ ಮುಗಿದಿದೆ. ಈ ಸಿನಿಮಾ ಮುಂದಿನ ತಿಂಗಳ ಕೊನೆಗೆ ಅಥವಾ ಆಗಸ್ಟ್ ಶುರುವಿನಲ್ಲಿ ಬಿಡುಗಡೆಯಾಗಬಹುದು. ಸೋ, 'ಕುರುಕ್ಷೇತ್ರ' ಚಿತ್ರದ ಬಳಿಕ 'ಒಡೆಯರ್' ಸಿನಿಮಾ ಲಾಂಚ್ ಆಗಲಿದೆ.

    English summary
    Challenging Star Darshan's 'Wadeyar' kannada movie will launch in August. The movie is directed by MD Sridhar and producing by Sandesh Nagaraj.
    Wednesday, June 13, 2018, 11:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X