Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ನಿರ್ದೇಶಕರ ಗುಂಪುಗಾರಿಕೆ: ದಯಾಳ್ ಪದ್ಮನಾಭನ್ ಅಸಮಾಧಾನ
ನಿರ್ದೇಶಕ ದಯಾಳ್ ಪದ್ಮನಾಭನ್ ಫೇಸ್ಬುಕ್ ಪೋಸ್ಟ್ ಹಾಕಿದ್ದು, ಲೂಸಿಯಾ ಪವನ್ ಕುಮಾರ್ ವಿರುದ್ಧ ಹಾಗೂ ಇನ್ನೂ ಕೆಲವು ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Recommended Video
ದಯಾಳ್ ಪದ್ಮನಾಭನ್ ಅವರು ಪವನ್ ಕುಮಾರ್ ಪ್ರಾರಂಭಿಸಿರುವ ಸಿನಿಮಾ ತಂತ್ರಜ್ಞರ ಒಕ್ಕೂಟ, ಎಫ್ಯುಸಿ ಸದಸ್ಯರಾಗಲು ಅರ್ಜಿ ಹಾಕಿದ್ದರಂತೆ ಆದರೆ ಅವರ ಅರ್ಜಿ ತಿರಸ್ಕರಿಸಲಾಗಿದೆ ಇದು ದಯಾಳ್ ಸಿಟ್ಟಿಗೆ ಕಾರಣ.
ಪವನ್ ಕುಮಾರ್ ಕಳಿಸಿರುವ ಇ-ಮೇಲ್ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ದಯಾಳ್ ಪದ್ಮನಾಭನ್, ಎಫ್ಯುಸಿಯ ಮೆಂಬರ್ಶಿಪ್ ಕೊಡದೇ ಇರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
ಜೂನ್ ಮೊದಲ ವಾರದಲ್ಲಿ ಅರ್ಜಿ ಹಾಕಿದ್ದರು
'ನಾನು ಜೂನ್ ಮೊದಲ ವಾರದಲ್ಲಿ ಎಫ್ಯುಸಿ ಮೆಂಬರ್ಶಿಪ್ ಗಾಗಿ ಅರ್ಜಿ ಸಲ್ಲಿಸಿದ್ದೆ, ಆದರೆ ನಾನು ಈ ವರೆಗೆ ಮಾಡಿರುವ ಕಾರ್ಯ ಎಫ್ಯುಸಿ ಅಲ್ಲಿನ ಕೆಲವರಿಗೆ ಇಷ್ಟವಾಗಿಲ್ಲವೆಂದು ಕಾಣುತ್ತದೆ, ನನಗೆ ಮೆಂಬರ್ ಆಗಲು ಅವಕಾಶ ನೀಡಿಲ್ಲ' ಎಂದಿದ್ದಾರೆ.
ಜೂನ್ 16 ರಂದು ಪವನ್ ಕುಮಾರ್ ಇ-ಮೇಲ್
ಜೂನ್ 16 ರಂದು ಪವನ್ ಕುಮಾರ್ ಒಂದು ಇ-ಮೇಲ್ ಕಳಿಸಿರುವುದು ಬಿಟ್ಟರೆ ನನಗೆ ಇನ್ನಾವುದೇ ಪ್ರತಿಕ್ರಿಯೆ ಈವರೆಗೆ ಬಂದಿಲ್ಲ. ನಾನು ಸಿನಿಮಾ ಮಾಡಿ ಇವರನ್ನು ಮೆಚ್ಚಿಸುವುದಕ್ಕಿಂತ ಇನ್ನೂ ಸಾಕಷ್ಟು ಬೇರೆ ಕಾರ್ಯಗಳನ್ನು ನನಗೆ ಮಾಡಲಿಕ್ಕಿದೆ' ಎಂದು ಸಹ ದಯಾಳ್ ಹೇಳಿದ್ದಾರೆ.
'ನಿರ್ದೇಶಕರ ಗುಂಪುಗಾರಿಕೆ ಬಹಿರಂಗಪಡಿಸಿದ್ದೇನೆ'
ಕಮೆಂಟ್ ಒಂದಕ್ಕೆ ಉತ್ತರಿಸುತ್ತಾ, 'ಅಲ್ಲಿನವರ (ಎಫ್ಯುಸಿ) ಗ್ರೂಪಿಸಂ (ಗುಂಪುಗಾರಿಕೆ)ಯನ್ನು ಬಹಿರಂಗಪಡಿಸಲೆಂದು ನಾನು ಈ ಪೋಸ್ಟ್ ಅನ್ನು ಹಾಕಿದ್ದೇನೆ ಎಂದು ಸಹ ದಯಾಳ್ ಪದ್ಮನಾಭನ್ ಹೇಳಿದ್ದಾರೆ.
ಪವನ್ ಕುಮಾರ್ ಹೇಳಿರುವುದೇನು?
ಯಾವ ನಿರ್ದೇಶಕರು ಎಫ್ಯುಸಿ ಯ ಭಾಗವಾಗಬೇಕು ಎಂಬುದನ್ನು ಎಫ್ಯುಸಿ ಸದಸ್ಯರು ನಿರ್ಣಯಿಸುತ್ತಾರೆ. 70% ಗೂ ಹೆಚ್ಚು ಮಂದಿ ನಿರ್ದೇಶಕರೊಬ್ಬರು ಗುಂಪಿನ ಸದಸ್ಯರಾಗಬಹುದು ಎಂದು ಮತಚಲಾಯಿಸಿದರೆ ಮಾತ್ರವೇ ಅವರು ಗುಂಪಿನ ಸದಸ್ಯರಾಗುವುದು ಸಾಧ್ಯ ಪವನ್ ಕುಮಾರ್ ಕಳಿಸಿರುವ ಮೇಲ್ನಲ್ಲಿ ಹೇಳಲಾಗಿದೆ. ಅದರ ಸ್ಕ್ರೀನ್ ಶಾಟ್ ಅನ್ನು ದಯಾಳ್ ಹಂಚಿಕೊಂಡಿದ್ದಾರೆ.