Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ನಿಯಂತ್ರಣಕ್ಕೆ 'ದಕ್ಷ' ಮೂಲಕ ಕರ್ನಾಟಕಕ್ಕೆ ನೆರವಾದ ನಟ ಅಜಿತ್
ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಸದ್ಯ ಸರ್ಕಾರ ಸೋಂಕು ನಿಯಂತ್ರಣಕ್ಕೆ ಹೊಸ ಮಾರ್ಗ ಅನುಸರಿಸಿದ್ದು, ತಮಿಳು ನಟ ಅಜಿತ್ ಕೂಡ ಕೈಜೋಡಿಸಿದ್ದಾರೆ.
Recommended Video
ದಕ್ಷ ಎನ್ನುವ ಡ್ರೋನ್ ಮೂಲಕ ತಮಿಳುನಾಡಿನಲ್ಲಿ ಕೊರೊನಾ ಸೋಂಕು ನಿವಾರಕಗಳನ್ನು ಸಿಂಪಡಿಲಾಗುತ್ತಿದೆ. ಈ ದಕ್ಷ ಯೋಜನೆಯ ಯಶಸ್ಸಿನ ಹಿಂದೆ ನಟ ಅಜಿತ್ ಅವರ ಪಾತ್ರವೂ ಇದೆ. ಅಜಿತ್ ಮಾರ್ಗದರ್ಶನದಲ್ಲಿ ತಯಾರಾದ ಸುಧಾರಿತ ದಕ್ಷ ಡ್ರೋನ್ ಗಳನ್ನು ಬಳಸಿಕೊಂಡು ಕರ್ನಾಟಕದಲ್ಲೂ ಸ್ಯಾನಿಟೈಸ್ ಸಿಂಪಡನೆ ಮಾಡಲು ಸರ್ಕಾರ ಮುಂದಾಗಿದೆ.
ವಿಡಿಯೋ ವೈರಲ್: ಆಸ್ಪತ್ರೆಯಲ್ಲಿ ನಟ ತಲಾ ಅಜಿತ್ ದಂಪತಿ, ಅಭಿಮಾನಿಗಳಲ್ಲಿ ಆತಂಕ
ಈ ಡ್ರೋನ್ ಆರು ಗಂಟೆಗೂ ಹೆಚ್ಚು ಸಮಯ ನಿರಂತರ ಹಾರಾಟ ನಡೆಸಿ ದಾಖಲೆ ನಿರ್ಮಿಸಿವೆ. 2018ರಲ್ಲಿ ಮದ್ರಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಜಿತ್ ಅವರನ್ನು ಸಿಸ್ಟಮ್ ಸಲಹೇಗಾರ ಮತ್ತು ಪರಿಕ್ಷಾರ್ಥ ಚಾಲಕರಾಗಿ ಅಜಿತ್ ನೇಮಕಮಾಡಲಾಗಿದೆ.
ಅಜಿತ್ ಅವರನ್ನು ಮತ್ತು ದಕ್ಷ ಡ್ರೋನ್ ಗಳ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಕೂಡ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಲಿದ್ದಾರೆ. "ಸೋಂಕು ನಿವಾರಕ ಡ್ರೋನ್ ಗಳ ಮೂಲಕ ಕೊರೊನಾ ವಿರುದ್ಧ ಸ್ಯಾನಿಟೈಸ್ ಸಿಂಪಡನೆ ಮಾಡಲಾಗುತ್ತೆ. ದೊಡ್ಡ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದ ನಟ ಅಜಿತ್ ಮತ್ತು ಅವರ ತಂಡಕ್ಕೆ ಅಭಿನಂದನೆಗಳು" ಎಂದಿದ್ದಾರೆ.