Don't Miss!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- News ಗೃಹ ಸಚಿವ ಡಾ. ಜಿ ಪರಮೇಶ್ವರ್ ರಾಜೀನಾಮೆಗೆ ಆಗ್ರಹ: ಕಾರಣವೇನು?
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಿಖಿಲ್ ಎಲ್ಲಿದ್ದೀಯಪ್ಪ...' ಯಾರಿಗೆ ಸಿಗಲಿದೆ ಈ ಟೈಟಲ್?
Recommended Video
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ 'ನಿಖಿಲ್ ಎಲ್ಲಿದ್ದೀಯಪ್ಪ....' ಎಂಬ ವಿಡಿಯೋವೊಂದು ವೈರಲ್ ಆಗಿತ್ತು. ಜಾಗ್ವಾರ್ ಚಿತ್ರದ ಆಡಿಯೋ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ ತಮ್ಮ ಮಗನನ್ನು ವೇದಿಕೆಗೆ ಕರೆಯುವಾಗ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಕೇಳಿದ್ದರು. ಅದಕ್ಕೆ ಜನರ ಮಧ್ಯೆ ನಿಂತಿದ್ದ ನಿಖಿಲ್ ಕೂಡ 'ನಿಮ್ಮನ್ನ ಪ್ರೀತ್ಸೋ ಜನಗಳ ಮಧ್ಯೆ ಇದ್ದೀನಪ್ಪಾ' ಎಂದು ಉತ್ತರಿಸಿದ್ದರು.
ಈ ವಿಡಿಯೋ ಇತ್ತೀಚಿನ ದಿನದಲ್ಲಿ ದೊಡ್ಡ ಸದ್ದು ಮಾಡಿತ್ತು. ಇದೀಗ, ಇದೇ ಶೀರ್ಷಿಕೆಯಲ್ಲಿ ಸಿನಿಮಾ ಮಾಡಬೇಕು ಎಂಬ ಆಸೆಯಿಂದ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರು ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ.
ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಖಿಲ್ ಹೇಳಿದ್ದು ಹೀಗೆ
ಹೌದು, ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಟೈಟಲ್ ಕೊಡಿ ಎಂದು ಹಲವು ಸಿನಿಮಾ ಮಂದಿ ಮನವಿ ಮಾಡಿಕೊಂಡಿದ್ದಾರೆ, ಇದಷ್ಟೆ ಅಲ್ಲದೇ, ಮಂಡ್ಯ ಚುನಾವಣೆಯಲ್ಲಿ ಸದ್ದು ಮಾಡಿದ ಇನ್ನು ಕೆಲವು ಪದಗಳಿಗಾಗಿ ಸಿನಿಮಾ ಮಂದಿ ಮುಗಿಬಿದ್ದಿದ್ದಾರೆ ಎನ್ನಲಾಗಿದೆ. ಹಾಗಿದ್ರೆ, ಈ ಟೈಟಲ್ ಯಾರಿಗೆ ಸಿಗುತ್ತೆ? ಮುಂದೆ ಓದಿ....
ಈ ಟೈಟಲ್ ಗೆ ಅತಿ ಹೆಚ್ಚು ಮನವಿ
'ನಿಖಿಲ್ ಎಲ್ಲಿದ್ದೀಯಪ್ಪ....'ಈ ಟೈಟಲ್ ಬೇಕು ಎಂದು ಹಲವು ನಿರ್ದೇಶಕ, ನಿರ್ಮಾಪಕರು ವಾಣಿಜ್ಯ ಮಂಡಳಿಯಲ್ಲಿ ಮನವಿ ಮಾಡಿದ್ದಾರೆ. ಆದ್ರೆ, ಈ ಟೈಟಲ್ ಸಿಗೋದು ಕಷ್ಟ ಎಂದು ತಿಳಿದು ಬಂದಿದೆ. ಇದು ರಾಜಕೀಯ ವಿಷ್ಯ ಮತ್ತು ನಿಖಿಲ್ ಕುಮಾರ್ ಕೂಡ ಸಿನಿಮಾರಂಗದವರು, ಅವರ ತಂದೆ ಕೂಡ ನಿರ್ಮಾಪಕರು. ಈ ಟೈಟಲ್ ಕೊಟ್ರೆ ಮುಂದಿನ ದಿನದಲ್ಲಿ ಸಮಸ್ಯೆಯಾಗಬಹುದು ಎಂಬ ಅರಿವು ಫಿಲಂ ಚೇಂಬರ್ ಗೂ ಇದೆ. ಹಾಗಾಗಿ, ಶೀರ್ಷಿಕೆ ಕೊಡಲು ನಿರಾಕರಿಸಲಾಗಿದೆಯಂತೆ.
ಸುಮಲತಾ ಸ್ಪರ್ಧೆಯಿಂದ ಚಿತ್ರರಂಗ ಇಬ್ಭಾಗ ಆಯ್ತಾ.? ಅಂಬಿ ಪತ್ನಿ ಹೇಳಿದ್ದೇನು?
ಜೋಡೆತ್ತು, ಕಳ್ಳೆತ್ತು ಟೈಟಲ್ ಮೇಲೂ ಕಣ್ಣು
ಬರಿ ನಿಖಿಲ್ ಎಲ್ಲಿದ್ದೀಯಪ್ಪ ಮಾತ್ರವಲ್ಲ. ಜೋಡೆತ್ತು ಎಂಬ ಟೈಟಲ್ ಗಾಗಿಯೂ ಮನವಿ ಮಾಡಲಾಗಿದೆ ಎಂಬ ವಿಷ್ಯ ಹೊರಬಿದ್ದಿದೆ. ಆರಂಭದಲ್ಲಿ ನಟ ದರ್ಶನ್ ನಾನು ಮತ್ತು ಯಶ್ ಜೋಡೆತ್ತುಗಳು ಎಂದು ಹೇಳಿದ್ರು. ನಂತರ ಕುಮಾರಸ್ವಾಮಿ ಅವರು ಕಳ್ಳೆತ್ತು, ನಿಜವಾದ ಜೋಡೆತ್ತು ನಾನು ಮತ್ತು ಡಿಕೆ ಶಿವಕುಮಾರ್ ಎಂದರು. ತದನಂತರ ಜೋಡೆತ್ತು ಮತ್ತು ಕಳ್ಳೆತ್ತು ಪದ ರಾಜಕೀಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು. ಹಾಗಾಗಿ, ಈ ಎರಡು ಪದಗಳ ಮೇಲೆ ಕೂಡ ಸಿನಿಮಾ ಮಂದಿ ಕಣ್ಣಾಕಿದ್ದಾರಂತೆ.
ನಮ್ಮ ಜೋಡೆತ್ತುಗಳ ಎದುರು ಯಾವ ಎತ್ತುಗಳು ಗೆಲ್ಲುತ್ತೆ ನೋಡೋಣ: ಸುಮಲತಾ
'ಮಂಡ್ಯದ ಹೆಣ್ಣು' ಬೇಕಂತೆ
ಮಂಡ್ಯದ ಗಂಡು ಎಂದು ಈಗಾಗಲೇ ಅಂಬರೀಶ್ ಅಭಿನಯದಲ್ಲಿ ಸಿನಿಮಾ ಬಂದಿದೆ. ಈಗ ಮಂಡ್ಯ ರಾಜಕಾರಣಕ್ಕೆ ಅಂಬರೀಶ್ ಪತ್ನಿ ಧುಮುಕಿದ್ದಾರೆ. ಹಾಗಾಗಿ, ಮಂಡ್ಯದ ಹೆಣ್ಣು ಸುಮಲತಾ ಎಂದು ಹೇಳಲಾಗ್ತಿದೆ. ಈ ಹಿನ್ನೆಲೆ 'ಮಂಡ್ಯದ ಹೆಣ್ಣು' ಟೈಟಲ್ ನಲ್ಲೂ ಸಿನಿಮಾ ಮಾಡಬಹುದು ಎಂಬ ಲೆಕ್ಕಾಚಾರಕ್ಕೆ ಸಿನಿಮೇಕರ್ಸ್ ಬಂದಿದ್ದಾರೆ.
'ಡಿ ಬಾಸ್' ಒಬ್ಬರೇ ಯಾಕೆ ಸಿಎಂಗೆ ಟಾರ್ಗೆಟ್, ಅದರ ಹಿಂದಿರುವ ಕಾರಣಗಳೇ ಬೇರೆ.!
ಈ ಟೈಟಲ್ ಗಳು ಸಿಗೋದು ಕಷ್ಟ
ಸುಮಲತಾ ಅಂಬರೀಶ್ ಮತ್ತು ಕುಮಾರಸ್ವಾಮಿ ಕುಟುಂಬಗಳಿಗೂ ಸಿನಿಮಾ ಇಂಡಸ್ಟ್ರಿಗೂ ಆತ್ಮೀಯ ಸಂಬಂಧವಿದೆ. ಹಾಗಾಗಿ, ನಿಖಿಲ್ ಎಲ್ಲಿದ್ದೀಯಪ್ಪ, ಜೋಡೆತ್ತು, ಕಳ್ಳೆತ್ತು, ಮಂಡ್ಯದ ಹೆಣ್ಣು ಸುಮಲತಾ ಇಂತಹ ಟೈಟಲ್ ಗಳನ್ನ ಸದ್ಯಕ್ಕೆ ಯಾರಿಗೂ ಕೊಡಬಾರದು ಎಂಬ ನಿಲುವಿಗೆ ಫಿಲಂ ಚೇಂಬರ್ ಬಂದಿದೆ ಎನ್ನಲಾಗಿದೆ. ಈ ಟೈಟಲ್ ಕೊಟ್ರೆ ಅದು ಮುಂದಿನ ದಿನದಲ್ಲಿ ವಿವಾದಕ್ಕೆ, ಕಲಹಕ್ಕೆ ದಾರಿ ಮಾಡಿಕೊಡುತ್ತೆ ಎಂಬ ಜಾಗರೂಕತೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ.