Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪತ್ತೆದಾರ ಸಾಹಸಸಿಂಹ ಇನ್ನೊಂದು ರಹಸ್ಯ ಭೇದಿಸಬೇಕಾಗಿದೆ!
ಪತ್ತೆದಾರಿ ಕಥೆಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರನ್ನೂ ಆದಿಯಿಂದ ಅಂತ್ಯದವರೆಗೂ ಓದಿಸಿಕೊಂಡು ಹೋಗುವ ಶಕ್ತಿ ಆ ಪುಸ್ತಕಗಳಿಗಿದೆ. ಅದರಲ್ಲೂ ನಮ್ಮ ನೆಚ್ಚಿನ ನಾಯಕನಟರ ಪತ್ತೆದಾರಿ ಕಥೆಗಳು ಕಾಮಿಕ್ ರೂಪದಲ್ಲಿ ಬಂದರೆ ಹೇಗೆ? ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ಸಂಗತಿ ಇನ್ನೇನು ಇರಲಿಕ್ಕೆ ಸಾಧ್ಯ.
ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಕಾಮಿಕ್ ಸರಣಿಯ ಎರಡನೇ ಪುಸ್ತಕ ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಡಾ.ವಿಷ್ಣುವರ್ಧನ್ ಅವರ ಈ ಬಾರಿಯ ವಾರ್ಷಿಕ ಪುಣ್ಯ ಸ್ಮರಣೆಯಲ್ಲಿ (ಡಿಸೆಂಬರ್ 30) 'ಪತ್ತೇದಾರ ಸಾಹಸಸಿಂಹ - ಅರಣ್ಯದಲ್ಲಿ ಸಾಹಸ' ಕಾಮಿಕ್ ಸರಣಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. [ಕಾಮಿಕ್ ಸ್ಟ್ರಿಪ್ ನಲ್ಲಿ ಮತ್ತೆ ಹುಟ್ಟಿಬಂದ ವಿಷ್ಣುವರ್ಧನ್]
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹೊರತಂದಿರುವ 'ಪತ್ತೆದಾರ ಸಾಹಸಸಿಂಹ - ಅರಣ್ಯದಲ್ಲಿ ಸಾಹಸ' (Detective Sahasasimha - The Jungle Adventure) ಕಾಮಿಕ್ ಸರಣಿಯ ಎರಡನೇ ಭಾಗಕ್ಕೂ ನಾಡಿನಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ನಟ ಅನಿರುದ್ಧ್.
ಈ ಕಾಮಿಕ್ ಸರಣಿಯ ಬಹುತೇಕ ಕಂತುಗಳು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ಆಗಿದೆ. ಈ ಮೂಲಕ ಮಕ್ಕಳಿಗೆ ಮನರಂಜನೆ ಜೊತೆಗೆ ಶಿಕ್ಷಣ ನೀಡುವುದೇ ಆಗಿದೆ ಎನ್ನುತ್ತಾರೆ ಅನಿರುದ್ಧ್. ಇನ್ನೇಕೆ ತಡ ನಡುರಾತ್ರಿಯ ದರೋಡೆಗಳು ಮತ್ತು ಕಾಣೆಯಾದ ನಾಯಿಗಳ ನಿಗೂಢವನ್ನು ಬಯಲು ಮಾಡಲು ಸಾಹಸಸಿಂಹ ಅವರು ಅರಣ್ಯದ ಮಧ್ಯೆ ನಡೆಸುವ ಶೋಧದಲ್ಲಿ ನೀವೂ ಭಾಗಿಯಾಗಿ. (ಫಿಲ್ಮಿಬೀಟ್ ಕನ್ನಡ)