‘ಧೈರ್ಯಂ’ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಚಿತ್ರತಂಡದ ಹರ್ಷ
ಕಳೆದ ಶುಕ್ರವಾರ ರಿಲೀಸ್ ಆಗಿದ್ದ 'ಧೈರ್ಯಂ' ಸಿನಿಮಾಗೆ ದೊಡ್ಡ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾಗೆ ಸಿಕ್ಕಿರುವ ಈ ಪ್ರತಿಕ್ರಿಯೆ ಚಿತ್ರತಂಡಕ್ಕೆ ಸಂತೋಷ ತಂದಿದೆ. ಪಕ್ಕಾ ಕಮರ್ಷಿಯಲ್ ಎಂಟರ್ಟೈನರ್ ಆಗಿರುವ 'ಧೈರ್ಯಂ' ಸಿನಿಮಾವನ್ನು ವಿಮರ್ಶಕರು ಕೂಡ ಇಷ್ಟ ಪಟ್ಟಿದ್ದಾರೆ.
'ಧೈರ್ಯಂ' ಸಿನಿಮಾದ ಗೆಲುವಿನ ಸಂತಸವನ್ನು ಚಿತ್ರತಂಡ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದೊಂದಿಗೆ ಹಂಚಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ಶಿವ ತೇಜಸ್ 'ಚಿತ್ರಕ್ಕೆ ಶಿವಮೊಗ್ಗ, ದಾವಣಗೆರೆ, ಮೈಸೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ಒಳ್ಳೆಯ ಒಪನಿಂಗ್ ಪಡೆದುಕೊಂಡಿದೆ' ಅಂತ ಹೇಳಿದರು.

ಚಿತ್ರದ ನಾಯಕಿ ಅಧಿತಿ ಕೂಡ ಮೊದಲ ಸಿನಿಮಾಕ್ಕೆ ಸಿಕ್ಕ ರೆಸ್ಪಾನ್ಸ್ ಬಗ್ಗೆ ತುಂಬ ಖುಷಿ ಆಗಿದ್ದಾರೆ. 'ನನ್ನನ್ನು ನಾನು ತೆರೆ ಮೇಲೆ ನೋಡಿಕೊಂಡಿದ್ದು ತುಂಬ ಖುಷಿ ಆಯ್ತು' ಅಂತ ತಮ್ಮ ಸಂತೋಷವನ್ನು ಅಧಿತಿ ಹಂಚಿಕೊಂಡಿದ್ದಾರೆ.
More from Filmibeat
English summary
'Dhairyam' kannada movie Team Happy About The Audience Response.


Click it and Unblock the Notifications











