Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಕೆಲಸ ಶುರು ಮಾಡಿದ 'ಟಗರು' ಡಾಲಿ ಧನಂಜಯ್
ನಟ ಧನಂಜಯ್ ಸದ್ಯ ಶಿವರಾಜ್ ಕುಮಾರ್ ಜೊತೆಗೆ 'ಟಗರು' ಸಿನಿಮಾದಲ್ಲಿ ನಟಿಸಿದ್ದಾರೆ. 'ಟಗರು' ಸಿನಿಮಾದ ಅವರ ಡಾಲಿ ಪಾತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. 'ಟಗರು' ಸಿನಿಮಾದ ಆ ಪಾತ್ರವನ್ನು ತೆರೆ ಮೇಲೆ ನೋಡುವುದಕ್ಕೆ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ನಟನಾಗಿದ್ದ ಧನಂಜಯ್ 'ಟಗರು' ಸಿನಿಮಾದಲ್ಲಿ ನೆಗೆಟಿವ್ ಶೇಡ್ ಪಾತ್ರವನ್ನು ಮಾಡಿದ್ದಾರೆ. ಇದರ ಜೊತೆಗೆ ಈಗ ಇನ್ನೊಂದು ಸಾಹಸಕ್ಕೆ ಧನಂಜಯ್ ಕೈ ಹಾಕಿದ್ದಾರೆ. ನಾಯಕ ಮಾತ್ರವಲ್ಲದೆ ಧನಂಜಯ್ ಈಗ ಒಬ್ಬ ಚಿತ್ರಸಾಹಿತಿ ಆಗಿದ್ದಾರೆ. ರಘು ದೀಕ್ಷಿತ್ ಸಂಗೀತದ ಒಂದು ಹೊಸ ಸಿನಿಮಾಗಾಗಿ 'ಟಗರು' ಡಾಲಿ ಪೆನ್ ಹಿಡಿದಿದ್ದಾರೆ. ತಾನು ಒಬ್ಬ ಹೀರೋ ಅಷ್ಟೇ ಅಲ್ಲದೆ ಒಬ್ಬ ಒಳ್ಳೆಯ ರೈಟರ್ ಎಂದು ಈ ಮೂಲಕ ಸಾಬೀತು ಮಾಡುವುದಕ್ಕೆ ಹೊರಟಿದ್ದಾರೆ. ಮುಂದೆ ಓದಿ...
'ಆರ್ಕೆಸ್ಟ್ರ'
ರಘು ದೀಕ್ಷಿತ್ ಅವರ ಸಹ ನಿರ್ಮಾಣದಲ್ಲಿ 'ಆರ್ಕೆಸ್ಟ್ರ' ಎಂಬ ಹೊಸ ಸಿನಿಮಾ ಬರುತ್ತಿದೆ. ಈ ಸಿನಿಮಾದಲ್ಲಿ ರಘು ದೀಕ್ಷಿತ್ ಅವರ ಸಂಗೀತಕ್ಕೆ ಧನಂಜಯ್ ಸಾಹಿತ್ಯ ಬರೆದಿದ್ದಾರೆ.
ಒಂಬತ್ತು ಹಾಡುಗಳು
ವಿಶೇಷ ಅಂದರೆ ಈ ಸಿನಿಮಾದ 9 ಹಾಡುಗಳನ್ನು ಧನಂಜಯ್ ಬರೆದಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು 11 ಹಾಡುಗಳಿವೆ. ಮೊದಲ ಬಾರಿ ಸಾಹಿತ್ಯ ಬರೆಯುವುದಕ್ಕೆ ಹೊರಟು ಒಂದೇ ಚಿತ್ರದಲ್ಲಿ 9 ಹಾಡು ಬರೆದ ಧನಂಜಯ್ ಪ್ರಯತ್ನ ಮೆಚ್ಚಬೇಕಾಗಿದೆ.
ಬರವಣಿಗೆಯ ಅನುಭವ
ಧನಂಜಯ್ ರಂಗಭೂಮಿಯಿಂದ ಬಂದಿರುವ ಕಲಾವಿದ. ಅಲ್ಲಿ ಅವರಿಗೆ ಬರವಣಿಗೆಯ ಅನುಭವ ಇದ್ದು, ಅದೇ ಕಾರಣದಿಂದ ಧನಂಜಯ್ ಕೈ ನಲ್ಲಿ ನಿರ್ದೇಶಕರು ಚಿತ್ರದ ಹಾಡುಗಳನ್ನು ಬರೆಸಿದ್ದಾರೆ.
ಧನಂಜಯ್ ಗೆ 'ಕೇಡಿ' ಎಂದ ಪ್ರಣಿತಾ: ಮೇಘನಾ, ಸಂಗೀತಾ ಫುಲ್ ಹ್ಯಾಪಿ
ಸುನೀಲ್ ಮೈಸೂರು ನಿರ್ದೇಶನ
ಸುನೀಲ್ ಮೈಸೂರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಮ್ಯೂಸಿಕಲ್ ಸಿನಿಮಾವಾಗಿದೆ. ಚಿತ್ರದ ಕಥೆ ಮೈಸೂರಿನ 'ಆರ್ಕೆಸ್ಟ್ರ' ಸಂಸ್ಕೃತಿಯ ಬಗ್ಗೆ ಇದೆ.