Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಕೆಲಸ ಶುರು ಮಾಡಿದ 'ಟಗರು' ಡಾಲಿ ಧನಂಜಯ್
ನಟ ಧನಂಜಯ್ ಸದ್ಯ ಶಿವರಾಜ್ ಕುಮಾರ್ ಜೊತೆಗೆ 'ಟಗರು' ಸಿನಿಮಾದಲ್ಲಿ ನಟಿಸಿದ್ದಾರೆ. 'ಟಗರು' ಸಿನಿಮಾದ ಅವರ ಡಾಲಿ ಪಾತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. 'ಟಗರು' ಸಿನಿಮಾದ ಆ ಪಾತ್ರವನ್ನು ತೆರೆ ಮೇಲೆ ನೋಡುವುದಕ್ಕೆ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ನಟನಾಗಿದ್ದ ಧನಂಜಯ್ 'ಟಗರು' ಸಿನಿಮಾದಲ್ಲಿ ನೆಗೆಟಿವ್ ಶೇಡ್ ಪಾತ್ರವನ್ನು ಮಾಡಿದ್ದಾರೆ. ಇದರ ಜೊತೆಗೆ ಈಗ ಇನ್ನೊಂದು ಸಾಹಸಕ್ಕೆ ಧನಂಜಯ್ ಕೈ ಹಾಕಿದ್ದಾರೆ. ನಾಯಕ ಮಾತ್ರವಲ್ಲದೆ ಧನಂಜಯ್ ಈಗ ಒಬ್ಬ ಚಿತ್ರಸಾಹಿತಿ ಆಗಿದ್ದಾರೆ. ರಘು ದೀಕ್ಷಿತ್ ಸಂಗೀತದ ಒಂದು ಹೊಸ ಸಿನಿಮಾಗಾಗಿ 'ಟಗರು' ಡಾಲಿ ಪೆನ್ ಹಿಡಿದಿದ್ದಾರೆ. ತಾನು ಒಬ್ಬ ಹೀರೋ ಅಷ್ಟೇ ಅಲ್ಲದೆ ಒಬ್ಬ ಒಳ್ಳೆಯ ರೈಟರ್ ಎಂದು ಈ ಮೂಲಕ ಸಾಬೀತು ಮಾಡುವುದಕ್ಕೆ ಹೊರಟಿದ್ದಾರೆ. ಮುಂದೆ ಓದಿ...
'ಆರ್ಕೆಸ್ಟ್ರ'
ರಘು ದೀಕ್ಷಿತ್ ಅವರ ಸಹ ನಿರ್ಮಾಣದಲ್ಲಿ 'ಆರ್ಕೆಸ್ಟ್ರ' ಎಂಬ ಹೊಸ ಸಿನಿಮಾ ಬರುತ್ತಿದೆ. ಈ ಸಿನಿಮಾದಲ್ಲಿ ರಘು ದೀಕ್ಷಿತ್ ಅವರ ಸಂಗೀತಕ್ಕೆ ಧನಂಜಯ್ ಸಾಹಿತ್ಯ ಬರೆದಿದ್ದಾರೆ.
ಒಂಬತ್ತು ಹಾಡುಗಳು
ವಿಶೇಷ ಅಂದರೆ ಈ ಸಿನಿಮಾದ 9 ಹಾಡುಗಳನ್ನು ಧನಂಜಯ್ ಬರೆದಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು 11 ಹಾಡುಗಳಿವೆ. ಮೊದಲ ಬಾರಿ ಸಾಹಿತ್ಯ ಬರೆಯುವುದಕ್ಕೆ ಹೊರಟು ಒಂದೇ ಚಿತ್ರದಲ್ಲಿ 9 ಹಾಡು ಬರೆದ ಧನಂಜಯ್ ಪ್ರಯತ್ನ ಮೆಚ್ಚಬೇಕಾಗಿದೆ.
ಬರವಣಿಗೆಯ ಅನುಭವ
ಧನಂಜಯ್ ರಂಗಭೂಮಿಯಿಂದ ಬಂದಿರುವ ಕಲಾವಿದ. ಅಲ್ಲಿ ಅವರಿಗೆ ಬರವಣಿಗೆಯ ಅನುಭವ ಇದ್ದು, ಅದೇ ಕಾರಣದಿಂದ ಧನಂಜಯ್ ಕೈ ನಲ್ಲಿ ನಿರ್ದೇಶಕರು ಚಿತ್ರದ ಹಾಡುಗಳನ್ನು ಬರೆಸಿದ್ದಾರೆ.
ಧನಂಜಯ್ ಗೆ 'ಕೇಡಿ' ಎಂದ ಪ್ರಣಿತಾ: ಮೇಘನಾ, ಸಂಗೀತಾ ಫುಲ್ ಹ್ಯಾಪಿ
ಸುನೀಲ್ ಮೈಸೂರು ನಿರ್ದೇಶನ
ಸುನೀಲ್ ಮೈಸೂರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಮ್ಯೂಸಿಕಲ್ ಸಿನಿಮಾವಾಗಿದೆ. ಚಿತ್ರದ ಕಥೆ ಮೈಸೂರಿನ 'ಆರ್ಕೆಸ್ಟ್ರ' ಸಂಸ್ಕೃತಿಯ ಬಗ್ಗೆ ಇದೆ.