Don't Miss!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- News ಡಿಕೆ ಸುರೇಶ್ ನಿದ್ದೆಗೆಡಿಸಿದ ಡಾಕ್ಟರ್; ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ: ಭವಿಷ್ಯ ನುಡಿದ ಸಿದ್ದರಾಮ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೊರೆಗಳ ದರ್ಪಕ್ಕೆ ಜ್ವಾಲಾಮುಖಿಯಾದ 'ಡಾಲಿ'
ಕನ್ನಡ ಸಿನಿಮಾರಂಗದ ಸ್ಪೆಷಲ್ ಸ್ಟಾರ್ ಡಾಲಿ ಧನಂಜಯ ಟಾಲಿವುಡ್ ಸಿನಿಮಾರಂಗಕ್ಕೆ ಕಾಲಿಟ್ಟಾಗಿದೆ. 'ಟಗರು' ಚಿತ್ರದಲ್ಲಿನ ಡಾಲಿ ಪಾತ್ರದ ಅಭಿನಯವನ್ನು ಕಂಡು ರಾಮ್ ಗೋಪಾಲ್ ವರ್ಮ ಧನಂಜಯ ಅವರನ್ನು ತೆಲುಗು ಸಿನಿಮಾರಂಗಕ್ಕೆ ಪರಿಚಯಿಸುತ್ತಿದ್ದಾರೆ.
ರಾಮ್ ಗೋಪಾಲ್ ವರ್ಮ ಸಿನಿಮಾಗಳಲ್ಲಿ ಸಹಾಯಕ ನಿರ್ದೆಶಕನಾಗಿ ಕೆಲಸ ಮಾಡಿದ್ದ ಸಿದ್ದಾರ್ಥ್ ಧನಂಜಯ ಅಭಿನಯದ ಚೊಚ್ಚಲ ತೆಲುಗು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಾಲಿ ತೆಲುಗು ಸಿನಿಮಾಗಾಗಿ ಮಾಡಿರುವ ಫಸ್ಟ್ ಲುಕ್ ನೋಡಿ ಕನ್ನಡ ಸಿನಿಮಾರಂಗವರು ಹಾಗೂ ಅಭಿಮಾನಿಗಳು ಖುಷಿ ಆಗಿದ್ದಾರೆ.
'ಭೈರವ-ಗೀತಾ' ಚಿತ್ರಕ್ಕಾಗಿ ಧನಂಜಯ ಈಗಾಗಲೇ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ್ದು ಚಿತ್ರತಂಡ ಅಧಿಕೃತವಾಗಿ ಇಂದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. 'ಭೈರವ-ಗೀತಾ' ಚಿತ್ರದ ಮೋಷನ್ ಪೋಸ್ಟರ್ ವಿಶೇಷವೇನು? ಚಿತ್ರೀಕರಣ ಆರಂಭ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ . ಮುಂದೆ ಓದಿ
|
ಭೈರವ-ಗೀತಾ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ
ಧನಂಜಯ ಅಭಿನಯದ ತೆಲುಗಿನ ಭೈರವ-ಗೀತಾ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ಎರಡು ದಿನಗಳ ಹಿಂದೆಯಷ್ಟೇ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ ಆರ್ ಜಿ ವಿ ಇಂದು ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ದೊರೆಗಳ ದರ್ಪಕ್ಕೆ ಜ್ವಾಲಾಮುಖಿ
ದೊರೆಗಳ ದರ್ಪ ಜ್ವಾಲೆಯಾದಾಗ.. ದಣಿದವರ ಧೈರ್ಯ ಜ್ವಾಲಾಮುಖಿಯಾಗುತ್ತದೆ... ಎನ್ನುವ ಸಾಲಿಗಳನ್ನ ಭೈರವ-ಗೀತಾ ಚಿತ್ರದ ಮೋಷನ್ ಪೋಸ್ಟರ್ ನಲ್ಲಿ ಬಳಸಿಕೊಳ್ಳಲಾಗಿದೆ.
ಇಂಪ್ರೆಸ್ ಮಾಡುತ್ತಿದೆ ಹಿನ್ನಲೆ ಸಂಗೀತ
ಸದ್ಯ ಬಿಡುಗಡೆ ಆಗಿರುವ ಮೋಷನ್ ಪೋಸ್ಟರ್ ನಲ್ಲಿ ಈ ಹಿಂದಿನ ಆರ್ ಜಿ ವಿ ಸಿನಿಮಾಗಳ ರೀತಿಯಲ್ಲಿ ಹಿನ್ನಲೆ ಸಂಗೀತ ಗಮನ ಸೆಳೆಯುತ್ತಿದೆ. ಧನಂಜಯ ಲುಕ್ ಕಣ್ಣುಗಳನ್ನ ಸೆಳೆದರೆ ಹಿನ್ನಲೆ ಸಂಗೀತ ಚಿತ್ರದ ಬಗ್ಗೆ ಕುತೂಹಲ ಮೂಡಿಸುವಂತಿದೆ.
ಚಿತ್ರೀಕರಣದಲ್ಲಿ ಧನಂಜಯ
ನಟ ಧನಂಜಯ ಈಗಾಗಲೇ 'ಭೈರವ-ಗೀತಾ' ಚಿತ್ರದ ಶೂಟಿಂಗ್ ನಲ್ಲಿ ಭಾಗಿ ಆಗಿದ್ದಾರೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು ಕನ್ನಡದ ಸಂಭಾಷಣೆ ಬರೆಯುವ ಜವಾಬ್ದಾರಿ ಟಗರು ಖ್ಯಾತಿಯ ಮಾಸ್ತಿ ವಹಿಸಿಕೊಂಡಿದ್ದಾರೆ.