Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾತ ಡಾ.ರಾಜ್ ಅಂತೆ 'ದಾರಿ ತಪ್ಪಿದ ಮಗ'ನಾದ ಮೊಮ್ಮಗ ಧೀರೇನ್.!
ಡಾ.ರಾಜ್ ಕುಮಾರ್ ಅವರ ಮೊಮ್ಮಗ... ನಟ ರಾಮ್ ಕುಮಾರ್ ಹಾಗೂ ಪೂರ್ಣಿಮ ಅವರ ಪುತ್ರ ಧೀರೇನ್ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿ ಬರುತ್ತಲೇ ಇದೆ.
ಧೀರೇನ್ ಚೊಚ್ಚಲ ಚಿತ್ರದ ಬಗ್ಗೆ ಆಗಾಗ ಸದ್ದು-ಸುದ್ದಿ ಆಗುತ್ತಲೇ ಇದೆ. ಬಣ್ಣದ ಪ್ರಪಂಚಕ್ಕೆ ಪದಾರ್ಪಣೆ ಮಾಡಲು ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದಾರೆ ಧೀರೇನ್.
ಚಿಕ್ಕಂದಿನಿಂದಲೂ ಸಿನಿಮಾ ಆಸಕ್ತಿ ಹೊಂದಿರುವ ಧೀರೇನ್ ನ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಲು ನಿರ್ಮಾಪಕ ಜಯಣ್ಣ ಸಿದ್ಧರಾಗಿದ್ದಾರೆ. ಧೀರೇನ್ ಗಾಗಿ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಇದೀಗ ಧೀರೇನ್ ಅಭಿನಯದ ಚೊಚ್ಚಲ ಚಿತ್ರದ ಟೈಟಲ್ ಫಿಕ್ಸ್ ಆಗಿದೆ. ಶೀರ್ಷಿಕೆ ಏನು ಗೊತ್ತಾ.? 'ದಾರಿ ತಪ್ಪಿದ ಮಗ'.! ಮುಂದೆ ಓದಿರಿ...
'ದಾರಿ ತಪ್ಪಿದ ಮಗ'
'ದಾರಿ ತಪ್ಪಿದ ಮಗ'... 1975 ರಲ್ಲಿ ಬಿಡುಗಡೆಗೊಂಡ ಸಿನಿಮಾ. ಪಿಕೆಟಿ ಶಿವರಾಮ್ ನಿರ್ಮಾಣ, ನಿರ್ದೇಶನದ ಈ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಡಬಲ್ ಆಕ್ಟಿಂಗ್ ಮಾಡಿದ್ದರು. ಅಂದಿಗೆ ಈ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಇದೀಗ ಇದೇ ಹೆಸರಿನ ಮತ್ತೊಂದು ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬರಲು ಸಜ್ಜಾಗಿದೆ.
ರಾಜ್ ಮೊಮ್ಮಗನ ಚೊಚ್ಚಲ ಸಿನಿಮಾದ ಬಗ್ಗೆ ಹೀಗೊಂದು ಹೊಸ ಸುದ್ದಿ
ತಾತನಂತೆ 'ದಾರಿ ತಪ್ಪಿದ ಮಗ'ನಾದ ಮೊಮ್ಮಗ
ಡಾ.ರಾಜ್ ಕುಮಾರ್ ಮೊಮ್ಮಗ ಧೀರೇನ್ ಅಭಿನಯದ ಚೊಚ್ಚಲ ಚಿತ್ರಕ್ಕೆ 'ದಾರಿ ತಪ್ಪಿದ ಮಗ' ಎಂಬ ಶೀರ್ಷಿಕೆ ಫಿಕ್ಸ್ ಆಗಿದೆ. ಈ ಚಿತ್ರದ ಸ್ಕ್ರಿಪ್ಟಿಂಗ್ ವರ್ಕ್ ಗೆ ಸದ್ಯ ಚಾಲನೆ ಕೊಡಲಾಗಿದೆ. ತಾತನಂತೆ ಮೊಮ್ಮಗ ಕೂಡ ನೆಗೆಟಿವ್ ಹಾಗೂ ಪಾಸಿಟಿವ್ ಪಾತ್ರದಲ್ಲಿ ಮಿನುಗಲಿದ್ದಾರೆ.
ರಾಜ್ ಮೊಮ್ಮಗ ಧೀರೇನ್ ಬಗ್ಗೆ ನಿಮಗೆ ತಿಳಿಯದ ಕುತೂಹಲಕಾರಿ ವಿಷಯ
ಅನಿಲ್ ಕುಮಾರ್ ನಿರ್ದೇಶನದ ಚಿತ್ರ
ಧೀರೇನ್ ಅಭಿನಯದ 'ದಾರಿ ತಪ್ಪಿದ ಮಗ' ಚಿತ್ರಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ. 'Rambo-2' ಚಿತ್ರದಿಂದ ಗುರುತಿಸಿಕೊಂಡಿರುವ ಡೈರೆಕ್ಟರ್ ಅನಿಲ್ ಕುಮಾರ್ ಸದ್ಯ ರಾಕಿಂಗ್ ಸ್ಟಾರ್ ಯಶ್ ಗಾಗಿ 'ಮೈ ನೇಮ್ ಈಸ್ ಕಿರಾತಕ' ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಅದು ಮುಗಿದ ಬಳಿಕ 'ದಾರಿ ತಪ್ಪಿದ ಮಗ' ಸೆಟ್ಟೇರಲಿದೆ.
ಬಂಡವಾಳ ಹಾಕಲು ಜಯಣ್ಣ ರೆಡಿ
ಡಾ.ರಾಜ್ ಕುಟುಂಬದ ಕುಡಿಯನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ನಿರ್ಮಾಪಕ ಜಯಣ್ಣ ರೆಡಿಯಿದ್ದಾರೆ. 'ದಾರಿ ತಪ್ಪಿದ ಮಗ' ಚಿತ್ರಕ್ಕೆ ಬಂಡವಾಳ ಹಾಕಲು ಜಯಣ್ಣ ಮುಂದೆ ಬಂದಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ, ಮುಂದಿನ ವರ್ಷಾರಂಭದ ಹೊತ್ತಿಗೆ ಚಿತ್ರ ಸೆಟ್ಟೇರಲಿದೆ.