Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಶ್ವವಿಖ್ಯಾತ ಅರ್ನಾಲ್ಡ್ ಜತೆ ವೇದಿಕೆ ಹಂಚಿಕೊಂಡಿದ್ರು ಅಪ್ಪು; ಹೆಮ್ಮೆ ಚಿತ್ರಗಳನ್ನು ಹಂಚಿಕೊಂಡ ಧೀರೇನ್
ಪುನೀತ್ ರಾಜ್ ಕುಮಾರ್ ಕರ್ನಾಟಕ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿಯೂ ಜನಪ್ರಿಯತೆಯನ್ನು ಹೊಂದಿದ್ದರು. ಅಲ್ಲಿನ ಹಲವು ಕಾರ್ಯಕ್ರಮಗಳಿಗೆ ಪುನೀತ್ ರಾಜ್ ಕುಮಾರ್ ಮುಖ್ಯ ಅತಿಥಿಗಳಾಗಿ ತೆರಳಿದ ಹಲವಾರು ಉದಾಹರಣೆಗಳಿವೆ. ಅದೇ ರೀತಿ ಶಂಕರ್ ನಿರ್ದೇಶನದ ಹಾಗೂ ಚಿಯಾನ್ ವಿಕ್ರಮ್ ನಟನೆಯ 'ಐ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೂ ಸಹ ಕನ್ನಡ ಚಲನಚಿತ್ರ ರಂಗದಿಂದ ತೆರಳಿದ್ದ ಏಕೈಕ ನಟನೆಂದರೆ ಅದು ಪುನೀತ್ ರಾಜ್ ಕುಮಾರ್.
ಸೂಪರ್
ಸ್ಟಾರ್
ರಜನೀಕಾಂತ್
ಹಾಗೂ
ಪುನೀತ್
ರಾಜ್
ಕುಮಾರ್
ಅವರನ್ನು
ಈ
ಕಾರ್ಯಕ್ರಮಕ್ಕೆ
ಅತಿಥಿಗಳನ್ನಾಗಿ
ಕರೆಸಲಾಗಿತ್ತು.
ಹಾಗೂ
ಇದೇ
ಕಾರ್ಯಕ್ರಮಕ್ಕೆ
ನಟ,
ರಾಜಕಾರಣಿ
ಹಾಗೂ
ಬಾಡಿ
ಬಿಲ್ಡರ್
ಅರ್ನಾಲ್ಡ್
ಶ್ವಾರ್ಜಿನೆಗ್ಗರ್
ಕೂಡ
ಅತಿಥಿಯಾಗಿ
ಆಗಮಿಸಿದ್ದರು.
ಈ
ವೇಳೆ
ರಜನಿಕಾಂತ್
ಹಾಗೂ
ಪುನೀತ್
ರಾಜ್
ಕುಮಾರ್
ಅವರನ್ನು
ವಿಶೇಷವಾಗಿ
ಭೇಟಿ
ಮಾಡಿದ್ದ
ಅರ್ನಾಲ್ಡ್
ಅಪ್ಪು
ಅವರ
ಕೈ
ಕುಲುಕಿ
ಮಾತನಾಡಿಸಿದ್ದರು
ಮತ್ತು
ಇಬ್ಬರು
ಸಹ
ಒಂದೇ
ವೇದಿಕೆಯನ್ನು
ಹಂಚಿಕೊಂಡಿದ್ದರು.
ಇದು
ಅಪ್ಪು
ಅವರಿಗೆ
ಇದ್ದ
ನೇಮ್
&
ಫೇಮ್ಗೆ
ಹಿಡಿದ
ಕೈಗನ್ನಡಿಯಾಗಿತ್ತು.
ಹೀಗೆ ಅರ್ನಾಲ್ಡ್ ಮತ್ತು ಪುನೀತ್ ರಾಜ್ ಕುಮಾರ್ ಭೇಟಿಯಾಗಿದ್ದ ಸಂದರ್ಭದ ಚಿತ್ರಗಳನ್ನು ಇದೀಗ ಧೀರೇನ್ ರಾಮ್ ಕುಮಾರ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇತ್ತೀಚಿಗಷ್ಟೆ ಪೊನ್ನಿಯನ್ ಸೆಲ್ವನ್ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾಗ ಚಿತ್ರದ ನಟ ಚಿಯಾನ್ ವಿಕ್ರಂ ಕೂಡ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದ್ದರು. ತಮ್ಮ ಐ ಚಿತ್ರದ ಆಡಿಯೋ ಬಿಡುಗಡೆಗೆ ಪುನೀತ್ ರಾಜ್ ಕುಮಾರ್ ಅತಿಥಿಗಳಾಗಿ ಆಗಮಿಸಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದ ವಿಕ್ರಂ ಎಂಥ ಅದ್ಬುತ ವ್ಯಕ್ತಿ ಎಂದು ಅಪ್ಪು ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದರು.