Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇಘನಾ ರಾಜ್ 'ಸೀಮಂತ' ಬೆನ್ನಲ್ಲೆ ಅಭಿಮಾನಿಗಳಲ್ಲಿ ವಿನಂತಿ ಮಾಡಿದ ಧ್ರುವ ಸರ್ಜಾ
ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದ ಸರ್ಜಾ ಕುಟುಂಬದಲ್ಲಿ ಇತ್ತೀಚಿಗಷ್ಟೆ ಸಂಭ್ರಮ ನಡೆದಿತ್ತು. ಭಾನುವಾರ ಚಿರು ಪತ್ನಿ ಮೇಘನಾ ರಾಜ್ ಅವರ 'ಸೀಮಂತ' ಕಾರ್ಯಕ್ರಮ ಮಾಡಲಾಗಿತ್ತು. ಈ ಸಡಗರದಲ್ಲಿ ಇಡೀ ಕುಟುಂಬ ಭಾಗಿಯಾಗಿತ್ತು.
Recommended Video
ಇದೀಗ, ನಟ ಧ್ರು ಸರ್ಜಾ ತಮ್ಮ ಅಭಿಮಾನಿಗಳಲ್ಲಿ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. ಅಕ್ಟೋಬರ್ 6 ರಂದು ಧ್ರುವ ಅವರ ಹುಟ್ಟುಹಬ್ಬವಿದ್ದು, ತಮ್ಮ ನೆಚ್ಚಿನ ನಟನ ಜನುಮದಿನಕ್ಕೆ ಶುಭಕೋರಲು ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಮನೆ ಬಳಿ ಜಮಾಯಿಸುವ ಸಾಧ್ಯತೆ ಇದೆ. ಹಾಗಾಗಿ, ಒಂದು ದಿನ ಮುಂಚಿತವಾಗಿಯೇ ಧ್ರುವ ಸರ್ಜಾ ಅಭಿಮಾನಿಗಳಿಗೆ ''ದಯವಿಟ್ಟು ನೀವು ಇದ್ದ ಕಡೆಯಿಂದ ಶುಭಹಾರೈಸಿ'' ಎಂದು ಕೇಳಿಕೊಂಡಿದ್ದಾರೆ. ಮುಂದೆ ಓದಿ...
ಅಭಿಮಾನಿಗಳೇ ನಮ್ ಅನ್ನದಾತರು
''ಅಭಿಮಾನಿಗಳೇ ನಮ್ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನ ವರ್ಣನಾತೀತ. ಈ ವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ. ಎಲ್ಲೂ ಸಂಭ್ರಮವಿಲ್ಲ'' ಎಂದು ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ತಿಂಗಳ ಬಳಿಕ ಚಿತ್ರೀಕರಣಕ್ಕೆ ಹೊರಟ ಧ್ರುವ ಸರ್ಜಾ: ದುಬಾರಿ ಸೆಟ್ ನಲ್ಲಿ 'ಪೊಗರು' ಟೈಟಲ್ ಸಾಂಗ್ ಶೂಟಿಂಗ್
ನೀವು ಇದ್ದ ಕಡೆಯಿಂದಲೇ ಹಾರೈಸಿದ್ದಾರೆ
''ಅಭಿಮಾನಿಗಳನ್ನು ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ. ಜೈಆಂಜನೇಯ'' ಎಂದು ಧ್ರುವ ಸರ್ಜಾ ವಿನಂತಿಸಿಕೊಂಡಿದ್ದಾರೆ. ಧ್ರುವ ಅವರ ವಿನಂತಿಯನ್ನು ಅಭಿಮಾನಿಗಳು ಸಹ ಸ್ವಾಗತಿಸಿದ್ದಾರೆ.
ಚಿರು ಸರ್ಜಾ ಇಲ್ಲದ ನೋವು
ಧ್ರುವ ಸರ್ಜಾ ಅವರ ಸಹೋದರ ಚಿರಂಜೀವಿ ಸರ್ಜಾ ಜೂನ್ 7 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಸ್ಟಾರ್ ನಟನ ಅಕಾಲಿಕ ಸಾವು ಇಡೀ ಕುಟುಂಬ ಹಾಗೂ ಇಂಡಸ್ಟ್ರಿಗೆ ನೋವು ತಂದಿತ್ತು. ಇನ್ನೂ ಈ ನೋವಿನಿಂದ ಹೊರಬಾರದ ಧ್ರುವ ಸರ್ಜಾ ಈ ಸಮಯದಲ್ಲಿ ಹುಟ್ಟುಹಬ್ಬ ಆಚರಿಸುವುದು ಸೂಕ್ತವಲ್ಲ ಎಂದು ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ಮತ್ತೆ ವರ್ಕೌಟ್ ಶುರು: ಸಹಜ ಜೀವನಕ್ಕೆ ಮರಳಿದ ನಟ ಧ್ರುವ ಸರ್ಜಾ
ಕೊರೊನಾ ಹಾವಳಿಯೂ ಕಮ್ಮಿ ಆಗಿಲ್ಲ
ಈ ನಡುವೆ ಕೊರೊನಾ ವೈರಸ್ ಭೀತಿ ಸಹ ಕಡಿಮೆ ಆಗಿಲ್ಲ. ಹುಟ್ಟುಹಬ್ಬದ ಕಾರಣಕ್ಕಾಗಿ ಮನೆ ಬಳಿ ಅಭಿಮಾನಿಗಳು ಜಮಾಯಿಸಿದರೆ, ಅವರನ್ನು ನಿಯಂತ್ರಿಸುವುದು ಕಷ್ಟ. ಹೀಗಾಗಿ, ಈ ವರ್ಷ ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಇದ್ದಲ್ಲಿಯಿಂದಲೇ ಶುಭ ಕೋರುವುದು ಉತ್ತಮ.