Don't Miss!
- News Survey: 543ರಲ್ಲಿ ಕೇವಲ 109 ಸ್ಥಾನಕ್ಕೆ ತೃಪ್ತಿ ಪಡಬೇಕಾ ಇಂಡಿಯಾ ಮೈತ್ರಿಕೂಟ!?
- Finance ಬೆಂಗಳೂರು ಪ್ರವಾಸೋದ್ಯಮಕ್ಕಾಗಿ ವಿಶೇಷ ಆಟೋ ಸೇವೆ ಆರಂಭ, ವಿವರ
- Sports IPL 2024: ಐಪಿಎಲ್ ಮಾತ್ರವಲ್ಲ, ಟಿ20 ಕ್ರಿಕೆಟ್ನಲ್ಲೇ ಇತಿಹಾಸ ಬರೆದ RCB vs SRH ಪಂದ್ಯ!
- Lifestyle ಕೊಟ್ಟಿಗೆಯಲ್ಲಿ ಸಿಕ್ಕಿಬಿತ್ತು ಮೈ ನಡುಗಿಸುವಷ್ಟು ದೈತ್ಯಾಕಾರದ ಹೆಬ್ಬಾವು...!
- Automobiles ಸೆಮಿಕಂಡಕ್ಟರ್ ಪೂರೈಸಲು ಟಾಟಾದೊಂದಿಗೆ ಟೆಸ್ಲಾ ಒಪ್ಪಂದ.. ಕೆಲವೇ ದಿನದಲ್ಲಿ ಮೊದಲ ಶೋರೂಂ ಆರಂಭ?
- Technology Oppo: ಒಪ್ಪೋ A3 ಪ್ರೊ ಸ್ಮಾರ್ಟ್ಫೋನ್ ಲಾಂಚ್! 67W ಫಾಸ್ಟ್ ಚಾರ್ಜಿಂಗ್ ಸೌಲಭ್ಯ... ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂ.ಚಿರು ಆಗಮನದ ಬಗ್ಗೆ ನಟ ಧ್ರುವ ಸರ್ಜಾ ಪ್ರತಿಕ್ರಿಯೆ
ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜೂ.ಚಿರು ಆಗಮನದಿಂದ ಇಡೀ ಕುಟುಂಬ ಸಂತಸದಲ್ಲಿ ಮುಳುಗಿದೆ. ಚಿರಂಜೀವಿ ಸರ್ಜಾ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆಗೆ ಮಗು ಆಗಮಿಸಿದ ಖುಷಿಯನ್ನು ಕುಟುಂಬದವರು ಆಸ್ಪತ್ರೆಯಲ್ಲೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
Recommended Video
ಅತ್ತಿಗೆಗೆ ಮಗು ಆಗಿದೆ ಎನ್ನುವ ಸುದ್ದಿ ಗೊತ್ತಾಗುತ್ತಿದಂತೆ ಆಸ್ಪತ್ಪೆಗೆ ಬಂದ ಧ್ರುವ ಅಣ್ಣ ಮಗುವನ್ನು ಕೈಯಲ್ಲಿ ಹಿಡಿದು ಸಂತೋಷ ಪಟ್ಟಿದ್ದಾರೆ. ಬಹುದಿನಗಳ ಬಳಿಕ ಧ್ರುವ ಮುಖದಲ್ಲಿ ನಗು, ಸಂತಸ ನೋಡಿ ಅಭಿಮಾನಿಗಳ ಸಹ ಖುಷಿ ಪಡುತ್ತಿದ್ದಾರೆ. ಮನೆಗೆ ಮಗು ಆಗಮಿಸಿದ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಧ್ರುವ ಅಣ್ಣನ ಜೊತೆ ಇದ್ದ ಹಾಗೆ ಫೀಲ್ ಆಯ್ತು ಎಂದಿದ್ದಾರೆ. ಮುಂದೆ ಓದಿ...
ಧ್ರುವ ಸರ್ಜಾ ಮೊದಲ ಬಾರಿಗೆ ಪ್ರತಿಕ್ರಿಯೆ
ಮನೆಗೆ ಜೂ.ಚಿರು ಆಗಮಿಸಿದ ಬಗ್ಗೆ ನಟ ಧ್ರುವ ಸರ್ಜಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಅಣ್ಣನಿಗೆ ಅತ್ತಿಗೆಗೆ ಗಂಡು ಮಗುವಾಗಿದೆ. ಅತ್ತಿಗೆ, ಮಗು ಇಬ್ಬರೂ ಸಹ ಆರಾಮಾಗಿದ್ದಾರೆ. ಎಲ್ಲರೂ ಅವರಿಗೆ ಆಶೀರ್ವಾದ ಮಾಡಬೇಕೆಂದು ಕರ್ನಾಟಕದ ಜನತೆಯಲ್ಲಿ ಕೇಳಿಕೊಳ್ಳುತ್ತೇನೆ. ಖುಷಿ ಹೆಚ್ಚಾಗಿದ್ದರಿಂದ ಮಗುವನ್ನು ಕೈಯಲ್ಲಿ ಹಿಡಿದ ತಕ್ಷಣದ ಅನುಭವ ಹೇಗಾಯಿತು ಎಂದು ಹೇಳಲು ಸಾಧ್ಯವಾಗಲ್ಲ. ಆ ಫೀಲ್ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ ರಾಜ್
ನಮ್ಮಣ್ಣನ ಜೊತೆ ಇದ್ದ ಫೀಲ್ ಆಯ್ತು
ಇನ್ನೂ ಬೆಳ್ಳಿ ತೊಟ್ಟಿಲು ಖರೀದಿಸಿದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಯಾರಿಗೂ ಗೊತ್ತಾಗಬಾರದು ಎಂದುಕೊಂಡಿದೆ. ಆದರೆ ಮಾಧ್ಯಮಗಳ ಮೂಲಕ ವೈರಲ್ ಆಯಿತು ಎಂದಿದ್ದಾರೆ. ಮಗುವನ್ನು ಮೊದಲು ಕೈಯಲ್ಲಿ ಹಿಡಿದಾಗ ನಮ್ಮಣ್ಣನ ಜೊತೆ ಇದ್ದ ಫೀಲ್ ಆಯ್ತು ಎಂದು ಸಂತಸ ವ್ಯಕ್ತಪಡಿಸಿದರು.
ಚಿರುಗೆ ರೇಗಿಸುತ್ತಿದ್ದ ವಿಚಾರ ಹಂಚಿಕೊಂಡ ಧ್ರುವ
ನಾನು ಅಣ್ಣನಿಗೆ ರೇಗಿಸುತ್ತಿದ್ದೆ, ಮಕ್ಕಳಾಗುತ್ತೆ ಎಲ್ಲಾ ಓಕೆ, ನಿನ್ನನ್ನು ಶಾಲೆಯಲ್ಲಿ ಫೋಷಕರ ಮೀಟಿಂಗ್ ಕರೆಯುತ್ತಾರಲ್ಲ. ಶಾಲೆಯಲ್ಲಿ ನಿನ್ನ ಮೇಲೆ ಹೆಚ್ಚು ದೂರುಗಳಿದ್ದವು. ಇನ್ನು ನಿನ್ನ ಮಕ್ಕಳದು ಬೇಜಾನ್ ಇರುತ್ತೆ ಮಚಾ ಎಂದಿದ್ದೆ. ಅವನು ನನಗೆ ಮಗಾನೇ ಆಗೋದು, ಅವನದ್ದು ಸಹ ಶಾಲೆಯಲ್ಲಿ ಬೇಜಾನ್ ದೂರುಗಳಿರುತ್ತವೆ ಎಂದು ಹೇಳಿದ್ದ ವಿಚಾರ ಈಗ ನೆನಪಾಗುತ್ತಿದೆ ಎಂದು ಧ್ರುವ ಹೇಳಿದ್ದಾರೆ.
ಚಿರು ತಾಯಿ ಅಮ್ಮಾಜಿ ಪ್ರತಿಕ್ರಿಯೆ
ಮೊಮ್ಮೊಗ ಹುಟ್ಟಿದ ಸಂತಸವನ್ನು ಚಿರಂಜೀವಿ ಸರ್ಜಾ ತಾಯಿ ಅಮ್ಮಾಜಿ ಮಾಧ್ಯಮದವರ ಜೊತೆ ಹಂಚಿಕೊಂಡಿದ್ದಾರೆ. ತುಂಬಾ ಸಂತೋಷವಾಗುತ್ತಿದೆ. ಮತ್ತೆ ಚಿರಂಜೀವಿಯನ್ನು ನೋಡ್ತಾ ಇದ್ದೀವಿ ನಾವು. ಇಷ್ಟು ದಿವಸ ನೋವು ತಿನ್ನುತ್ತಾ ಇದ್ವಿ. ಇವತ್ತು ಸಂತೋಷ ಆಗಿದೆ. ಚಿರು ಹುಟ್ಟಿದ್ದು ಇದೇ ತಿಂಗಳು. ಅವರ ಎಂಗೇಜ್ ಮೆಂಟ್ ದಿನ ಇವತ್ತು. ಚಿರುನೇ ವಾಪಸ್ ಬಂದ್ಬಿಟ್ಟ" ಎಂದಿದ್ದಾರೆ.