Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧ್ರುವನಿಗೆ ಆಕ್ಷನ್ ಕಟ್ ಹೇಳಲು ಸಜ್ಜಾದ ಅಭಿಮಾನಿ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಐದನೇ ಸಿನಿಮಾ ಅನೌನ್ಸ್ ಆಗಿದೆ. ಸ್ಯಾಂಡಲ್ ವುಡ್ ಗೆ 'ಅಯೋಗ್ಯ'ನನ್ನ ಕರೆತಂದಿರುವ ನಿರ್ದೇಶಕ ಮಹೇಶ್ ಕುಮಾರ್ ಆಕ್ಷನ್ ಕಟ್ ನಲ್ಲಿ ಧ್ರುವ ಅಭಿನಯಿಸಲು ಓಕೆ ಎಂದಿದ್ದಾರೆ. ಭರ್ಜರಿ ಶತದಿನೋತ್ಸವದ ಖುಷಿಯಲ್ಲಿ ಈ ವಿಚಾರವನ್ನ ಖುದ್ದು ಆಕ್ಷನ್ ಪ್ರಿನ್ಸ್ ಹೇಳಿಕೊಂಡಿದ್ದಾರೆ.
ಅಯೋಗ್ಯ ಸಿನಿಮಾದಲ್ಲಿ ಬ್ಯುಸಿ ಆಗಿರುವ ನಿರ್ದೇಶಕ ಮಹೇಶ್ ಕುಮಾರ್ ಮುಂದಿನ ವರ್ಷ ಧ್ರುವ ಸರ್ಜಾ ಅಭಿನಯಿಸಲಿರುವ ಚಿತ್ರದ ಕೆಲಸವನ್ನ ಶುರು ಮಾಡಲಿದ್ದಾರೆ. ಚಿತ್ರಕ್ಕೆ 'ಮದಗಜ' ಎಂದು ಟೈಟಲ್ ಇಡಬೇಕೆಂದು ನಿರ್ಧಾರ ಮಾಡಿದ್ದಾರೆ.
ಭರ್ಜರಿ ಯಶಸ್ಸಿನಲ್ಲಿ ಹೊಸ ಚಿತ್ರಗಳನ್ನ ಅನೌನ್ಸ್ ಮಾಡಿದ ಆಕ್ಷನ್ ಪ್ರಿನ್ಸ್:
ಮಹೇಶ್ ನಿರ್ದೇಶನದ ಚಿತ್ರವನ್ನ ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಅಥವಾ ಉದಯ್ ಕೆ ಮೆಹ್ತಾ ಇಬ್ಬರಲ್ಲಿ ಯಾರಾದರೂ ಒಬ್ಬರು ನಿರ್ಮಾಣ ಮಾಡುವ ಸಾಧ್ಯತೆಗಳಿದೆ.
ಧ್ರುವ ಅಭಿಮಾನಿ ಆಗಿರುವ ಮಹೇಶ್ ಮೂರು ವರ್ಷದ ಹಿಂದೆಯೇ ಧ್ರುವ ಸರ್ಜಾ ಅವರಿಗೆ ಸಿನಿಮಾ ನಿರ್ದೇಶನ ಮಾಡಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಚಿತ್ರದಲ್ಲಿ ಯಾರಿಗೂ ಡೋಂಟ್ ಕೇರ್ ಮಾಡದ ಪಾತ್ರದಲ್ಲಿ ಆಕ್ಷನ್ ಪ್ರಿನ್ಸ್ ಅಭಿನಯಿಸಲಿದ್ದಾರೆ.
ಹ್ಯಾಟ್ರಿಕ್ ಹಿಟ್ ಮೂಲಕ ಶತದಿನೋತ್ಸವ ಪೂರೈಸಿದ 'ಭರ್ಜರಿ'ಯ ಧ್ರುವ ಸರ್ಜಾ
ಸದ್ಯ ಒನ್ ಲೈನ್ ಸ್ಟೋರಿ ಮಾಡಿಕೊಂಡಿರುವ 'ಮದಗಜ' ಚಿತ್ರಕ್ಕೆ ಕೀರ್ತಿ ಸುರೇಶ್ ರನ್ನ ನಾಯಕಿಯಾಗಿ ಕರೆಸುವ ಪ್ಲಾನ್ ಇದೆಯಂತೆ. ಒಟ್ಟಾರೆ ಪೊಗರು ಚಿತ್ರದ ನಂತದ ಧ್ರುವ ಸರ್ಜಾ ಮಹೇಶ್ ಡೈರೆಕ್ಷನ್ ನಲ್ಲಿ ಅಭಿನಯಿಸುವುದು ಗ್ಯಾರೆಂಟಿ ಆಗಿದೆ.