twitter
    For Quick Alerts
    ALLOW NOTIFICATIONS  
    For Daily Alerts

    ದಿನಕರ್ ದಂಪತಿಯ ಈ ಬಾರಿಯ ವಿವಾಹ ವಾರ್ಷಿಕೋತ್ಸವ ತುಂಬ ವಿಶೇಷ

    By Naveen
    |

    Recommended Video

    ದಿನಕರ್ ಜೀವನದ ವಿಶೇಷ ದಿನ ಇಂದು..! | Filmibeat Kannada

    ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರ ಹಾಗೂ ದರ್ಶನ್ ಅವರ ಸಹೋದರ ನಿರ್ದೇಶಕ ದಿನಕರ್ ತೂಗುದೀಪ್ ಜೀವನದಲ್ಲಿ ಇಂದು ಮರೆಯಲಾಗದ ದಿನ. ಕಾರಣ, ಇಂದು ದಿನಕರ್ ಹಾಗೂ ಮಾನಸ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ.

    2008 ಆಗಸ್ಟ್ 21 ರಂದು ದಿನಕರ್ ಮಾನಸ ಅವರ ಕೈ ಹಿಡಿದಿದ್ದರು. ಇಂದಿಗೆ ಈ ಜೋಡಿ ಹತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವದ ಆಚರಿಸುತ್ತಿದ್ದಾರೆ. ಈ ಜೋಡಿಗೆ ಇಬ್ಬರು ಮಕ್ಕಳಿದ್ದು, ಅವರದ್ದು ಸ್ವೀಟ್ ಫ್ಯಾಮಿಲಿಯಾಗಿದೆ. ಈ ಕುಟುಂಬಕ್ಕೆ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.

    Dinakar Toogudeepa and Manasas 10th wedding anniversary

    ದರ್ಶನ್ ಸಹೋದರ ದಿನಕರ್ ದಂಪತಿಗೆ ಇಂದು ಮರೆಯಲಾಗದ ದಿನ ದರ್ಶನ್ ಸಹೋದರ ದಿನಕರ್ ದಂಪತಿಗೆ ಇಂದು ಮರೆಯಲಾಗದ ದಿನ

    ಈ ವರ್ಷ ಈ ಜೋಡಿಯ ವಿವಾಹ ವಾರ್ಷಿಕೋತ್ಸವ ತುಂಬಾನೇ ವಿಶೇಷವಾಗಿದೆ. ಏಕೆಂದರೆ, ಇವರಿಬ್ಬರ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. 'ಲೈಫ್ ಜೊತೆ ಒಂದ್ ಸೆಲ್ಫಿ' ಸಿನಿಮಾದ ಕಥೆಯನ್ನು ಮಾನಸ ಅವರು ಬರೆದಿದ್ದು, ಅದನ್ನು ದಿನಕರ್ ನಿರ್ದೇಶನ ಮಾಡಿದ್ದಾರೆ.

    Dinakar Toogudeepa and Manasas 10th wedding anniversary

    ಇದೇ ಕಾರಣಕ್ಕೆ ನೋಡಿ 'ತೂಗುದೀಪ ಮನೆತನ'ಕ್ಕೆ ಇಷ್ಟೊಂದು ಗೌರವ ಇರುವುದು! ಇದೇ ಕಾರಣಕ್ಕೆ ನೋಡಿ 'ತೂಗುದೀಪ ಮನೆತನ'ಕ್ಕೆ ಇಷ್ಟೊಂದು ಗೌರವ ಇರುವುದು!

    2011ರಲ್ಲಿ ಬಂದ 'ಸಾರಥಿ' ಸಿನಿಮಾ ದಿನಕರ್ ನಿರ್ದೇಶನದ ಕೊನೆಯ ಸಿನಿಮಾ ಆಗಿತ್ತು. ಆದರೆ ಇದೀಗ ಏಳು ವರ್ಷಗಳ ನಂತರ ಮತ್ತೆ ದಿನಕರ್ ಡೈರೆಕ್ಷನ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್ ಹಾಗೂ ಹರಿಪ್ರಿಯಾ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ.

    English summary
    Kannada Director Dinakar Toogudeepa and his wife Manasa celebrating 10th years wedding anniversary today (August 21st).
    Tuesday, August 21, 2018, 14:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X