Don't Miss!
- News Rain Alert: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಈ ಜಿಲ್ಲೆಗಳಲ್ಲಿ ಭಾರಿ ಬಿಸಿಲು
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ 'ಫ್ಯಾಂಟಮ್' ಸಿನಿಮಾ 'ವಿಕ್ರಾಂತ್ ರೋಣ' ಆಗಿದ್ದೇಕೆ? ನಿರ್ದೇಶಕರು ಹೇಳಿದ್ದೇನು?
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆ ಫ್ಯಾಂಟಮ್ ಸಿನಿಮಾ ಈಗ ವಿಕ್ರಾಂತ್ ರೋಣ ಆಗ ಬದಲಾಗಿದೆ. ಇತ್ತೀಚಿಗಷ್ಟೆ ಚಿತ್ರದ ಟೈಟಲ್ ಬದಲಾದ ಬಗ್ಗೆ ಸಿನಿಮಾತಂಡ ಬಹಿರಂಗ ಪಡಿಸಿ, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಜನವರಿ 21ರಂದು ಚಿತ್ರದ ಬಗ್ಗೆ ದೊಡ್ಡ ಅನೌನ್ಸ್ ಮೆಂಟ್ ಇದೆ ಎಂದು ಹೇಳಿ, ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದ ಸಿನಿಮಾತಂಡ, 21ರಂದು ಸಿನಿಮಾದ ಟೈಟಲ್ ಫ್ಯಾಂಟಮ್ ಅಲ್ಲ ಇನ್ಮುಂದೆ ವಿಕ್ರಾಂತ್ ರೋಣ ಎಂದು ಬದಲಾವಣೆ ಮಾಡುವ ಅಚ್ಚರಿ ಮೂಡಿಸಿದರು. ಅಂದಹಾಗೆ ಫ್ಯಾಂಟಮ್ ಸಿನಿಮಾದ ಹೆಸರು ದಿಢೀರ್ ನೆ ವಿಕ್ರಾಂತ್ ರೋಣ ಎಂದು ಬದಲಾಗಲು ಕಾರಣವೇನು? ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಉತ್ತರ ನೀಡಿದ್ದಾರೆ.
ಕನ್ನಡ ಬಿಗ್ಬಾಸ್ 8 ಯಾವಾಗ? ಆಯೋಜರು ಕೊಟ್ಟರು ಅಧಿಕೃತ ಉತ್ತರ
ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್ ಪಾತ್ರದ ಹೆಸರು ಸಹ ವಿಕ್ರಾಂತ್ ರೋಣ. ಕಿಚ್ಚ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮತ್ತು ಪೋಸ್ಟರ್ ಗಳ ಮೂಲಕ ಗಮನ ಸೆಳೆಯುತ್ತಿರುವ ವಿಕ್ರಾಂತ್ ರೋಣ ಬಹುತೇಕ ಚಿತ್ರೀಕರಣ ಮುಗಿಸಿ, ಹಾಡಿನ ಚಿತ್ರೀಕರಣ ಬಾಕಿಯುಳಿಸಿಕೊಂಡಿದೆ.
ಟೈಟಲ್ ಬದಲಾದ ಬಗ್ಗೆ ಅನೂಪ್ ಭಂಡಾರಿ ಪ್ರತಿಕ್ರಿಯೆ
ಟೈಟಲ್ ಬದಲಾದ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ 'ಫ್ಯಾಂಟಮ್ ಈಗ ವಿಕ್ರಾಂತ್ ರೋಣ ಆಗಿದೆ. ಯಾಕೆ ಅಂತ ಸುಮಾರು ಜನಕ್ಕೆ ಪ್ರಶ್ನೆ ಕಾಡುತ್ತಿರಬಹುದು. ಆದರೆ ಅದಕ್ಕೆ ಕಾರಣ ನೀವೆ. ಮೊದಲನೇ ದಿನ ಶೂಟ್ ಮಾಡಿದಾಗ ಸುದೀಪ್, ವಿಕ್ರಾಂತ್ ರೋಣ ಕೆಲಸಕ್ಕೆ ಹಾಜರಾದ ಎಂದು ಅರ್ಧ ಮುಖ ಇರುವ ಫೋಟೋ ಹಂಚಿಕೊಂಡಿದ್ದರು. ಅವತ್ತಿನಿಂದ ಇವತ್ತಿನ ವರೆಗೂ ಫ್ಯಾಂಟಮ್ ಎಷ್ಟು ಸದ್ದು ಮಾಡಿದೆಯೋ ಅದಕ್ಕಿಂತ ಹೆಚ್ಚೇ ವಿಕ್ರಾಂತ್ ರೋಣ ಹೆಸರು ಸದ್ದು ಮಾಡಿದೆ.'
ಬಿಗ್ ಬಾಸ್ ಕನ್ನಡ ಸೀಸನ್ 8: ಪ್ರೋಮೋ ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್, ಫೋಟೋ ವೈರಲ್
ವಿಕ್ರಾಂತ್ ರೋಣ ಎಲ್ಲಿಂದನೋ ತೆಗೆದುಕೊಂಡ ಹೆಸರಿಲ್ಲ
'ವಿಕ್ರಾಂತ್ ರೋಣ ಎಲ್ಲಿಂದನೋ ತೆಗೆದುಕೊಂಡ ಹೆಸರಿಲ್ಲ. ಇದು ನಮ್ಮ ಸಿನಿಮಾದ ಹೀರೋ, ನಿಮ್ಮ ಹೀರೋ ಹೆಸರು. ನೀವೆಲ್ಲ ಮನಸಾರೆ ಇಷ್ಟ ಪಟ್ಟ ವಿಕ್ರಾಂತ್ ರೋಣ ಹೆಸರನ್ನು ಇಡೀ ಪ್ರಪಂಚಕ್ಕೆ ವಿಕ್ರಾಂತ್ ರೋಣ ಹೆಸರಲ್ಲೇ ಪರಿಚಯ ಮಾಡೋಣ ಅಂತ' ಎಂದು ಅನೂಪ್ ಭಂಡಾರಿ ಸಿನಿಮಾ ಟೈಟಲ್ ಬದಲಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Recommended Video
ಜನವರಿ 31ಕ್ಕೆ ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ
ಅಂದಹಾಗೆ ಟೈಟಲ್ ಬದಲಾದ ಸಂತಸ ಒಂದೆಡೆಯಾದರೆ, ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ ಟೈಟಲ್ ಲೋಗೋ ಅನಾವರಣಗೊಳಿಸಲು ಸಿನಿಮಾತಂಡ ಪ್ಲಾನ್ ಮಾಡಿದೆ. ಜನವರಿ 31 ರಂದು ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ ಹೆಸರು ರಾರಾಜಿಸಲಿದೆ.
ಬುರ್ಜ್ ಖಲೀಫ ಮೇಲೆ ಕನ್ನಡದ ಮೊದಲ ನಟನ ಹೆಸರು
ಸಿನಿಮಾ ಜಗತ್ತಿನಲ್ಲಿ ಕಿಚ್ಚ ಸುದೀಪ್ 25 ವರ್ಷಗಳನ್ನು ಪೂರೈಸಿರುವ ಖುಷಿ ಹಿನ್ನೆಲೆ, ಪ್ರಪಂಚದ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫದ ಮೇಲೆ ಸುದೀಪ್ ಅವರ ಫೋಟೋ ಮತ್ತು ವಿಕ್ರಾಂತ್ ರೋಣ ಟೈಟಲ್ ಅನಾವರಣವಾಗಲಿದೆ. ಕನ್ನಡದ ಮೊದಲ ನಟನ ಫೋಟೋ ಮತ್ತು ಸಿನಿಮಾದ ಟೈಟಲ್ ಬುರ್ಜ್ ಖಲೀಫ ಮೇಲೆ ರಾರಾಜಿಸುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್, ಶಾರೂಖ್ ಖಾನ್ ಅಂತಹ ಕೆಲವೇ ನಟರ ಫೋಟೋಗಳು ಈ ಬುರ್ಜ್ ಖಲೀಫ ಕಟ್ಟಡದ ಮೇಲೆ ಪ್ರದರ್ಶನವಾಗಿದೆ. ಈಗ ಸುದೀಪ್ ಅವರ ಫೋಟೋ ಪ್ರದರ್ಶನವಾಗುತ್ತಿದ್ದು, ಕನ್ನಡದ ಮೊದಲ ನಟ ಎನಿಸಿಕೊಳ್ಳುತ್ತಿದ್ದಾರೆ.