Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶಿವನಂದಿ' ಟೈಟಲ್ ರಿಜಿಸ್ಟರ್ ಮಾಡಿಸಿದ ದಿನಕರ್ ತೂಗುದೀಪ್
Recommended Video
ಶಿವನಂದಿ 'ಯಜಮಾನ' ಸಿನಿಮಾದ ಟೈಟಲ್ ಸಾಂಗ್. ಈ ಸಿನಿಮಾದಲ್ಲಿ ನಾಯಕ ನಟ ದರ್ಶನ್ ತಯಾರು ಮಾಡುವ ಎಣ್ಣೆಯ ಹೆಸರು ಬ್ಯಾಂಡ್ ಶಿವನಂದಿ.
ಈ ಕಾರಣಗಳಿಂದ 'ಯಜಮಾನ' ಸಿನಿಮಾದಲ್ಲಿ ಶಿವನಂದಿ ಎನ್ನುವ ಹೆಸರು ಬಹಳ ಪ್ರಾಮುಖ್ಯತೆ ಹೊಂದಿತ್ತು. ಈಗ ಈ ಹೆಸರು ಸಿನಿಮಾದ ಟೈಟಲ್ ಆಗುತ್ತಿದೆ. ನಿರ್ದೇಶಕ ದಿನಕರ್ ತೂಗುದೀಪ್ ಈ ಟೈಟಲ್ ಮೇಲೆ ಆಸಕ್ತಿ ತೋರಿದ್ದಾರೆ.
'ಯಜಮಾನ' ಚಿತ್ರದ ನೆನಪಿನ ಕಾಣಿಕೆ ಪಡೆದ ದರ್ಶನ್ ಪುತ್ರ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶಿವನಂದಿ ಟೈಟಲ್ ಅನ್ನು ದಿನಕರ್ ನೊಂದಣಿ ಮಾಡಿಸಿದ್ದಾರೆ. ದರ್ಶನ್ ಸಹೋದರನೇ ಈ ಹೆಸರಿನ ವಾರಸ್ದಾರ ಆಗಿದ್ದಾರೆ. ಟೈಟಲ್ ರಿಜಿಸ್ಟರ್ ಮಾಡಿಸಿದ ಮೇಲೆ ದಿನಕರ್ ಇದೇ ಹೆಸರಿನ ಸಿನಿಮಾ ಕೂಡ ಮಾಡಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.
'ಶಿವನಂದಿ' ಹೆಸರು ಸೂಟ್ ಆಗುವುದು ದರ್ಶನ್ ಗೆ. ಹಾಗಿದ್ದ ಮೇಲೆ ದಿನಕರ್ ಈ ಸಿನಿಮಾವನ್ನು ದರ್ಶನ್ ಅವರಿಗೆನೇ ಮಾಡಬಹುದು. ದರ್ಶನ್ ಗೆ ದಿನಕರ್ ಮತ್ತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹಿಂದೆಯಿಂದ ಇದೆ. ಆ ಚಿತ್ರಕ್ಕೆ 'ಸರ್ವಾಂತರ್ಯಾಮಿ' ಎನ್ನುವ ಹೆಸರು ಸಹ ಫಿಕ್ಸ್ ಆಗಿತ್ತು.
Yajamana Review : ಮನೆಗೆ ಯಜಮಾನ.. ಮಾರ್ಕೆಟ್ ಗೆ ಸುಲ್ತಾನ..
ಆದರೆ, ಈಗ ಚಿತ್ರದ ಹೆಸರು 'ಶಿವನಂದಿ' ಯಾಗಿ ಬದಲಾಗುತ್ತದೆಯೇ ತಿಳಿದಿಲ್ಲ. ಅಥವಾ ದಿನಕರ್ 'ಶಿವನಂದಿ' ಹೆಸರಿನಲ್ಲಿ ಬೇರೆ ಸಿನಿಮಾ ಮಾಡಬಹುದು. ಏನೇ ಆಗಿದ್ದರೂ ದರ್ಶನ್ ಸಹೋದರನೇ 'ಶಿವನಂದಿ' ಟೈಟಲ್ ಗೆ ಯಜಮಾನನಾಗಿದ್ದಾರೆ.