Just In
Don't Miss!
- News
ಕೋವಿಶೀಲ್ಡ್ 2 ಲಸಿಕೆಗಳ ನಡುವಿನ ವ್ಯತ್ಯಾಸ 28 ದಿನಗಳಿಗಿಂತ ಹೆಚ್ಚಿದ್ದರೆ ಪರಿಣಾಮಕಾರಿ
- Automobiles
ಸ್ಯಾಮ್ಸಂಗ್ ಕಂಪನಿಯ ಡಿಜಿಟಲ್ ಫೀಚರ್'ನೊಂದಿಗೆ ಮತ್ತಷ್ಟು ಸ್ಮಾರ್ಟ್ ಆಗಲಿವೆ ಈ ಕಂಪನಿಯ ಕಾರುಗಳು
- Sports
ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ನಿಧನ
- Lifestyle
ದಾಂಪತಿ ಹೀಗೆ ವರ್ತಿಸಿದರೆ ಆ ಸಂಬಂಧ ಪ್ರಬುದ್ಧವಾಗಿರುತ್ತೆ
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಿಷಬ್ ಶೆಟ್ಟಿಯ ಹೊಸ ಸಿನಿಮಾದಿಂದ ಹೊರನಡೆದ ನಿರ್ದೇಶಕ
ನಟ ರಿಷಬ್ ಶೆಟ್ಟಿ ನಟಿಸುತ್ತಿರುವ ಹೊಸ ಸಿನಿಮಾ 'ಹರಿಕತೆ ಅಲ್ಲ ಗಿರಿಕತೆ' ಸಿನಿಮಾದ ನಿರ್ದೇಶಕ ಗಿರಿಶ್ ಕೃಷ್ಣ ಹಠಾತ್ತನೆ ಚಿತ್ರತಂಡದಿಂದ ಹೊರನಡೆದಿದ್ದಾರೆ.
ಗಿರಿಶ್ ಕೃಷ್ಣ, ಯಾವುದೇ ಅಸಮಾಧಾನದ ಕಾರಣದಿಂದ ಚಿತ್ರವನ್ನು ತ್ಯಜಿಸಿಲ್ಲ, ಬದಲಿಗೆ ಅವರಿಗೆ ಆರೋಗ್ಯ ಸಮಸ್ಯೆ ಎದುರಾದ ಕಾರಣ ಗಿರಿಶ್ ಅವರು ಸಿನಿಮಾದಿಂದ ದೂರ ಉಳಿದಿದ್ದಾರೆ. ಅವರ ಸ್ಥಾನವನ್ನು ಇಬ್ಬರು ಹೊಸ ನಿರ್ದೇಶಕರು ತುಂಬುತ್ತಿದ್ದಾರೆ.
ಕರಣ್ ಅನಂತ್ ಮತ್ತು ಅನಿರುದ್ ಮಹೇಶ್ ಅವರುಗಳು ಗಿರಿಶ್ ಕೃಷ್ಣ ಸ್ಥಾನಕ್ಕೆ ಬಂದಿದ್ದು, 'ಹರಿ ಕತೆ ಅಲ್ಲ ಗಿತಿಕತೆ' ಸಿನಿಮಾವನ್ನು ದಡ ತಲುಪಿಸಲಿದ್ದಾರೆ.
ಗಿರಿಶ್ ಕೃಷ್ಣ, ಸಿನಿಮಾ ಚಿತ್ರೀಕರಣದ ಆರಂಭದಲ್ಲಿಯೇ ಅನಾರೋಗ್ಯಕ್ಕೆ ಒಳಗಾದರಂತೆ, 'ನನ್ನ ಆರೋಗ್ಯ ಸುಧಾರಿಸುವವರೆಗೆ ಕಾಯುತ್ತೇವೆ ಎಂದು ಚಿತ್ರತಂಡ ಹೇಳಿತು, ಆದರೆ ನನಗೆ ಅದು ಇಷ್ಟವಿರಲಿಲ್ಲ, ಹಾಗಾಗಿ ಅವರಿಗೆ ಸಿನಿಮಾ ಚಿತ್ರೀಕರಣ ಮುಂದುವರೆಸುವಂತೆ ಹೇಳಿದ್ದೇನೆ' ಎಂದಿದ್ದಾರೆ ಗಿರಿ ಕೃಷ್ಣ.
ರಿಷಬ್ ಶೆಟ್ಟಿ ಸಹ ಈ ಬಗ್ಗೆ ಮಾತನಾಡಿದ್ದು, 'ನಟ-ನಟಿಯರ ಡೇಟ್ಸ್ಗಳು ಬುಕ್ ಆಗಿಬಿಟ್ಟಿದ್ದವು ಹಾಗಾಗಿ ಚಿತ್ರೀಕರಣ ಮುಂದುವರೆಸಲೇ ಬೇಕಾಯಿತು. ಗಿರಿ ಪ್ರತಿಭಾವಂತ ನಿರ್ದೇಶಕ ಅವರೊಂದಿಗೆ ಮುಂದೆ ಮತ್ತೆ ಕೆಲಸ ಮಾಡುವ ಇರಾದೆ ಇದೆ. ಗಿರಿ ಸ್ಥಾನವನ್ನು ಈಗ ಕರಣ್-ಅನಿರುದ್ ತುಂಬಲಿದ್ದಾರೆ ಎಂದಿದ್ದಾರೆ.
ಕಾಮಿಡಿ-ಡ್ರಾಮಾ ಸಿನಿಮಾ ಆಗಿರುವ ಹರಿ ಕತೆ ಅಲ್ಲ ಗಿರಿ ಕತೆ ಸಿನಿಮಾದಲ್ಲಿ ರಿಷಬ್ ನಾಯಕನಟರಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ.