Don't Miss!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪ್ಪು ಫೋಟೊಗೆ ಮಗುವಿನ ಮುತ್ತು: ಚೆಂದದ ವಿಡಿಯೋ ಹಂಚಿಕೊಂಡ ನಿರ್ದೇಶಕ
ಪುನೀತ್ ರಾಜ್ ಕುಮಾರ್ ಅವರನ್ನು ಇಷ್ಟಪಡದವರು ಯಾರು? ಚಿಕ್ಕ ಮಕ್ಕಳಿಂದ ವೃದ್ಧರವರೆಗೂ ಪುನೀತ್ ಅವರಿಗೆ ಅಭಿಮಾನಿಗಳಿದ್ದಾರೆ. ಬಾಲನಟನಾಗಿ ನಟಿಸುವಾಗಿನಿಂದಲೂ ಅವರನ್ನು ಇಷ್ಟಪಟ್ಟವರಿದ್ದಾರೆ. ಅದರಲ್ಲಿಯೂ ಪುಟಾಣಿಗಳಿಗೆ ಪುನೀತ್ ಎಂದರೆ ಅಚ್ಚುಮೆಚ್ಚು.
Recommended Video
ಅದನ್ನು ಸಾಬೀತುಪಡಿಸುವ ವಿಡಿಯೋವೊಂದನ್ನು ನಿರ್ದೇಶಕ ಗಿರಿರಾಜ್ ಬಿ.ಎಂ. ಹಂಚಿಕೊಂಡಿದ್ದಾರೆ. ಗಿರಿರಾಜ್ ನಿರ್ದೇಶನದಲ್ಲಿ ಪುನೀತ್ 'ಮೈತ್ರಿ' ಚಿತ್ರದಲ್ಲಿ ನಟಿಸಿದ್ದರು. ನಾಲ್ಕು ವರ್ಷಗಳ ಹಿಂದೆ ಪುನೀತ್ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಸ್ಮರಣೀಯ ಘಟನೆಯನ್ನು ಗಿರಿರಾಜ್ ತಿಳಿಸಿದ್ದಾರೆ. ಸದಾ ಕ್ರಿಯಾಶೀಲನಾಗಿರುವ ಮಗ ಕಬೀರನ ಅನೇಕ ವಿಡಿಯೋ ಹಾಗೂ ಫೋಟೊಗಳನ್ನು ಗಿರಿರಾಜ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಅವುಗಳಲ್ಲಿ ಈ ವಿಡಿಯೋ ಬಹಳ ಅಪರೂಪದ್ದೆನಿಸಿದೆ. ಮುಂದೆ ಓದಿ...
ಅಪ್ಪು ಫೋಟೊಕ್ಕೆ ಮುತ್ತು
ರಾಜ್ ಕುಮಾರ್ ಅವರು ಪುನೀತ್ ಅವರನ್ನು ಎತ್ತಿಕೊಂಡು ಕುಳಿತಿದ್ದ ಫೋಟೊವನ್ನು ತೋರಿಸಿ ಇವರು ಯಾರು? ಎಂದು ಗಿರಿರಾಜ್ ಮಗ ಕಬೀರನನ್ನು ಕೇಳಿದಾಗ ಆತ ಫೋಟೊದೆಡೆಗೆ ಓಡಿ ಪುನೀತ್ ಅವರ ಫೋಟೊಕ್ಕೆ ಮುತ್ತು ನೀಡಿದ್ದಾನೆ.
ಪುನೀತ್ ರಾಜ್ಕುಮಾರ್ ನಿರ್ಮಾಣದ 'ಲಾ' ಸಿನಿಮಾ ಬಗ್ಗೆ ಹೊಸ ಅಪ್ಡೇಟ್
ಪುಟಾಣಿ ಪುನೀತ್ ಚಿತ್ರ
ಅಲ್ಲಿದ್ದವರು ಮತ್ತೊಂದು ಎಂದಾಗ ಅಪ್ಪು ಚಿತ್ರಕ್ಕೆ ಇನ್ನೊಮ್ಮೆ ಮುತ್ತು ನೀಡಿದ್ದಾನೆ. ರಾಜ್ ಕುಮಾರ್ ಅವರ ತೋಳಲ್ಲಿ ಕುಳಿತಿದ್ದ ಪುಟಾಣಿ ಪುನೀತ್ ಫೋಟೊ, ನಿರ್ದೇಶಕ ಗಿರಿರಾಜ್ ಅವರ ಮುದ್ದು ಪುಟಾಣಿಯನ್ನು ಆಕರ್ಷಿಸಿದ್ದು ವಿಶೇಷ.
ದೇವರೂ ಒಂದು ಮಗುವಾದ ಘಳಿಗೆ
ನಾಲ್ಕು ವರ್ಷದ ಹಿಂದೆ ಅಪ್ಪು ಸರ್ ನ ಭೇಟಿಯಾಗಲು ಹೋಗಿದ್ವಿ. ಅಲ್ಲಿದ್ದ ಫೋಟೊ ತೋರಿಸಿ ಇವರು ಯಾರು ಹೇಳು ಅಂತ ಕೇಳಿದಾಗ ಇವನಿಗೇನನಿಸ್ತೊ ಸುಮ್ಮನೆ ಹೋಗಿ ಮುತ್ತು ಕೊಡಲು ಶುರು ಮಾಡಿದ. ಮಕ್ಕಳು ದೇವರು. ದೇವರೂ ಒಂದು ಮಗುವಾದ ಘಳಿಗೆ ಎಂದು ಗಿರಿರಾಜ್ ಬರೆದುಕೊಂಡಿದ್ದಾರೆ.
'ಕೆಲವರ ಬಗ್ಗೆ ಇಂಟ್ರೊಡಕ್ಷನ್ ಬೇಡ, ಇನ್ಫಾರ್ಮೇಷನ್ ಸಾಕು': ಪವರ್ ಸ್ಟಾರ್ ಖದರ್
ಕಬೀರನ ಜನ್ಮದಿನ
ಮಗ ಕಬೀರನ ಹುಟ್ಟು ಹಬ್ಬದ ದಿನವಾದ ಶುಕ್ರವಾರ ಗಿರಿರಾಜ್ ಈ ಹೃದಯಸ್ಪರ್ಶಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಮಗನ ಜನ್ಮದಿನಕ್ಕೆ ಗಿರಿರಾಜ್ ಮತ್ತು ಮನೆಯವರು ವಿಶೇಷ ಕೇಕ್ ತಯಾರಿಸಿದ್ದಾರೆ. ಕಾರ್ ಆಕೃತಿಯ ಕೇಕ್ ಕತ್ತರಿಸುವ ಮೂಲಕ ಕಬೀರನ ಹುಟ್ಟುಹಬ್ಬ ಆಚರಿಸಿದ್ದಾರೆ.