Don't Miss!
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನ್ನ ಸಿನಿಮಾದಲ್ಲಿ 'ಹಾರ್ ಜನ' ಹೀರೋಗಳು ಇರೋಲ್ಲ - ಗುರುಪ್ರಸಾದ್
Recommended Video
ನಿರ್ದೇಶಕ ಜೋಗಿ ಪ್ರೇಮ್ ಬಗ್ಗೆ ಮತ್ತೊಬ್ಬ ನಿರ್ದೇಶಕ ಗುರು ಪ್ರಸಾದ್ ಚೇಷ್ಟೆ ಮಾಡಿದ್ದಾರೆ. ''ನಮ್ಮ ಸಿನಿಮಾದಲ್ಲಿ ಹಾರ್ ಜನ ಹೀರೋಗಳು ಇರುವುದಿಲ್ಲ.'' ಎನ್ನುವ ಮೂಲಕ ಪ್ರೇಮ್ ಕಾಲು ಎಳೆದಿದ್ದಾರೆ.
ಆರು ಹೀರೋಗಳ ಸಿನಿಮಾ ಮಾಡುತ್ತೇನೆ ಎಂದಿದ್ದ ಪ್ರೇಮ್ ಟ್ರೋಲ್ ಆಗಿದ್ದರು. ಇದೀಗ ನಿರ್ದೇಶಕ ಗುರು ಪ್ರಸಾದ್ ತಮ್ಮ ಮಾತುಗಳ ಮೂಲಕ ಕಿಂಡಲ್ ಮಾಡಿದ್ದಾರೆ. 'ರಂಗನಾಯಕ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೇಮ್ ಬಗ್ಗೆ ಗುರುಪ್ರಸಾದ್ ಮಾತನಾಡಿದ್ದಾರೆ.
ಬಿಲ್ಡಪ್ ಬೇಡ, ನಿರ್ದೇಶಕರಿಗೆ ಮೂಗುದಾರ ಹಾಕಬೇಡಿ: ನಾಯಕರಿಗೆ ಜಗ್ಗೇಶ್ ಮನವಿ
ಚಿತ್ರದ ಬಗ್ಗೆ ವಿವರ ನೀಡುತ್ತಿದ್ದ ಗುರುಪ್ರಸಾದ್ ''ನಮ್ಮ ಸಿನಿಮಾದಲ್ಲಿ ನೂರು ಜನ ರಂಗಭೂಮಿ ಕಲಾವಿದರು ಇರುತ್ತಾರೆ. ಹಾರ್ ಜನ ಹೀರೋಗಳು ಇರುವುದಿಲ್ಲ'' ಎಂದು ಹೇಳಿದ್ದಾರೆ. 'ರಂಗನಾಯಕ' ಸಿನಿಮಾದಲ್ಲಿ ನೂರು ಜನ ರಂಗಭೂಮಿ ಕಲಾವಿದರನ್ನು ಪರಿಚಯ ಮಾಡುವ ಉದ್ದೇಶ ಗುರುಪ್ರಸಾದ್ ಹೊಂದಿದ್ದಾರೆ.
'ಎದ್ದೇಳು ಮಂಜುನಾಥ' ಚಿತ್ರದಲ್ಲಿ ಒಂದು ಡೈಲಾಗ್ ಇದೆ. ''ಉಪೇಂದ್ರ ಅವ್ರಿಗೆ ಕ್ಯಾಪಸಿಟಿ ಇತ್ತ ಎರಡು ಮಾಡಿ (ನಟನೆ ಮತ್ತು ನಿರ್ದೇಶನ) ಜಯಿಸಿಕೊಂಡರು. ನಮ್ ಹುಡುಗ ನೋಡಿ ಎರಡು ಮಾಡ್ತಿನಿ ಅಂತ ಹೋಗಿ ಎರಡು ವರ್ಷ ಆಯ್ತು ಇಚೆ ಬರೋಕೆ.
ಗುರುಪ್ರಸಾದ್ ಬರೆದ ಈ ಸಂಭಾಷಣೆ ನಿರ್ದೇಶಕ ಪ್ರೇಮ್ ಗೆ ಹೋಲಿಕೆ ಆಗುತ್ತಿತ್ತು. ಪ್ರೇಮ್ ಅದೇ ಸಮಯದಲ್ಲಿ 'ಪ್ರೀತಿ ಏಕೆ ಭೂಮಿ ಮೇಲಿದೆ'ದ ನಟನೆ ಮತ್ತು ನಿರ್ದೇಶನ ಮಾಡಿದ್ದರು.
ಅ, ಬ, ಪ, ಮ.... ಈ ಅಕ್ಷರಗಳಲ್ಲಿದೆ ಸ್ಟಾರ್ ನಿರ್ದೇಶಕರ ಶಕ್ತಿ
'ಮಠ', 'ಎದ್ದೇಳು ಮಂಜುನಾಥ' ನಂತರ ಮೂರನೇ ಬಾರಿಗೆ ನಟ ಜಗ್ಗೇಶ್ ಹಾಗೂ ನಿರ್ದೇಶಕ ಗುರುಪ್ರಸಾದ್ 'ರಂಗನಾಯಕ' ಚಿತ್ರಕ್ಕಾಗಿ ಒಂದಾಗಿದ್ದಾರೆ.