Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾದಲ್ಲಿ ಈ ಡೈಲಾಗ್ ಬಳಸಿದ್ದಕ್ಕೆ ಮಣಿರತ್ನಂಗೆ ಬಾಂಬ್ ಕರೆ.!
ಮಣಿರತ್ನಂ ನಿರ್ದೇಶನದಲ್ಲಿ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ 'ಚೆಕ್ಕ ಚಿವಂದ ವಾನಂ' ಚಿತ್ರದ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಬಾಕ್ಸ್ ಅಫೀಸ್ ನಲ್ಲೂ ಭರ್ಜರಿ ಗಳಿಕೆ ಕಾಣುತ್ತಿದೆ. ಈ ಮಧ್ಯೆ ನಿರ್ದೇಶಕ ಮಣಿರತ್ನಂ ಅವರಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ.
ಚೆನ್ನೈನ ಅಭಿರಾಂಪುರದಲ್ಲಿರುವ ಮಣಿರತ್ನಂ ಅವರ ಕಚೇರಿಗೆ ಕಿಡಿಗೇಡಿಗಳು ಕರೆ ಮಾಡಿದ್ದು, 'ಚೆಕ್ಕ ಚಿವಂದ ವಾನಂ' ಚಿತ್ರದಲ್ಲಿ ಬಳಸಲಾಗಿರುವ ಸಂಭಾಷಣೆಯೊಂದನ್ನ ಸಿನಿಮಾದಿಂದ ತೆಗೆಯಿರಿ, ಇಲ್ಲವಾದಲ್ಲಿ ಬಾಂಬ್ ಹಾಕ್ತೀವಿ ಎಂದು ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.
ಮತ್ತೆ ಕನ್ನಡ ಸಿನಿಮಾ ಮಾಡ್ತಾರಾ ನಿರ್ದೇಶಕ ಮಣಿರತ್ನಂ.?
ಮಣಿರತ್ನಂ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ದಾವಿಸಿದ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದ್ದು, ಮಣಿರತ್ನಂ ಅವರಿಗೆ ಭದ್ರತೆ ಒದಗಿಸಲಾಗಿದೆಯಂತೆ.
ಈ ಹಿಂದೆ ಮಣಿರತ್ನಂ ಅವರು ವಿವಾದಾತ್ಮಕ ಸಂಭಾಷಣೆಯನ್ನ ಚಿತ್ರದಿಂದ ತೆಗೆಯಬೇಕೆಂದು ಕೆಲವು ಸಮುದಾಯಗಳು ಬೇಡಿಕೆಯಿಟ್ಟಿತ್ತಂತೆ. ಇದನ್ನ ಗಮನಿಸಿದ ಪೊಲೀಸರು ಅವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮಣಿರತ್ನಂ - ಸುಹಾಸಿನಿ ದಂಪತಿಗೆ ಈ ದಿನ ಮರೆಯಲಾಗದ ಸುದಿನ
ಅಂದ್ಹಾಗೆ, 'ಚೆಕ್ಕ ಚಿವಂದ ವಾನಂ' ಸಿನಿಮಾ ಗ್ಯಾಂಗ್ ಸ್ಟರ್ ಕುರಿತಾದ ಚಿತ್ರವಾಗಿದ್ದು, ಅಂಡರ್ ವರ್ಲ್ಡ್ ಕಥೆಯನ್ನ ಒಳಗೊಂಡಿದೆ. ಅರವಿಂದ ಸ್ವಾಮಿ, ಸಿಂಬು, ವಿಜಯ್ ಸೇತುಪತಿ, ಅರುಣ್ ವಿಜಯ್, ಜ್ಯೋತಿಕಾ, ಅಧಿತಿ ರಾವ್ ಹೈದರಿ, ದಯನ್ ಈರಪ್ಪ ಅಂತಹ ಬಹುದೊಡ್ಡ ತಾರಬಳ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಸೆಪ್ಟೆಂಬರ್ 29 ರಂದು ಈ ಸಿನಿಮಾ ರಿಲೀಸ್ ಆಗಿತ್ತು.