Don't Miss!
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇವರೇ ಭಕ್ತನಿಗೆ ಕಾಲ್ ಮಾಡಿ ಮಾತನಾಡಿದರು; ನಿರ್ದೇಶಕ ಮಂಸೋರೆ
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸಾರಥ್ಯದಲ್ಲಿ ಮೂಡಿಬಂದ ಆಕ್ಟ್ 1978 ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾ ಲಾಕ್ ಡೌನ್ ಬಳಿಕ ರಿಲೀಸ್ ಆದ ಮೊದಲ ಸಿನಿಮಾ ಆಕ್ಟ್ 1978 ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ನಿರೀಕ್ಷೆಗೂ ಮೀರಿ ವ್ಯಕ್ತವಾದ ಪ್ರತಿಕ್ರಿಯೆಗೆ ಇಡೀ ಸಿನಿಮಾತಂಡ ಸಂತಸ ಪಟ್ಟಿದೆ. ಕೊರೊನಾ ಕಾಲದಲ್ಲೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಅನೇಕರು ಹಾಡಿ ಹೊಗಳುತ್ತಿದ್ದಾರೆ.
ಈ ಸಿನಿಮಾವನ್ನು ಟೀಕೆ ಮಾಡೋಕೆ ಆಗತ್ತಾ? 'ಆಕ್ಟ್ 1978' ಸಿನಿಮಾದ ಬಗ್ಗೆ ಹಂಸಲೇಖ ಮಾತು
ವಿಶೇಷ ಎಂದರೆ ಆಕ್ಟ್ 1978 ಸಿನಿಮಾವನ್ನು ನಾದಬ್ರಹ್ಮ ಹಂಸಲೇಖ ಸಹ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿ ಹೊರಬರುತ್ತಿದ್ದಂತೆ ವಿಡಿಯೋ ಮೂಲಕ ವಿಮರ್ಶೆ ಮಾಡಿ ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲ ನಿರ್ದೇಶಕ ಮಂಸೋರೆ ಅವರಿಗೆ ಖುದ್ದಿ ಹಂಸಲೇಖ ಅವರೇ ಕಾಲ್ ಮಾಡಿ ಹಾಡಿಹೊಗಳಿದ್ದಾರೆ.
ಈ ಬಗ್ಗೆ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 'ದೇವರೇ ಭಕ್ತನಿಗೆ ಕಾಲ್ ಮಾಡಿ ಮಾತನಾಡಿದರು, ಮೊದಲಿಗೆ ಸಿನೆಮಾ ಬಗ್ಗೆ ನಾನ್ ಸ್ಟಾಪ್ ಮೆಚ್ಚುಗೆಯ ಮಾತನಾಡಿ ಕೊನೆಯಲ್ಲಿ ಹೆಸರು ಹೇಳಿದರು. ಆ ಕ್ಷಣ ಮಾತುಗಳೇ ಹೊರಡದಾಯಿತು. ಥ್ಯಾಂಕ್ಯೂ ಹಂಸಲೇಖ ಸರ್' ಎಂದು ಬರೆದುಕೊಂಡಿದ್ದಾರೆ.
Recommended Video
ಏನ್ ಸಿನಿಮಾ ರೀ ಅದು? ಅದನ್ನೇನು ಟೀಕೆ ಮಾಡೋಕೆ ಆಗತ್ತಾ? ಒಂದು ಅದ್ಭುತವಾದ ಕಥೆಯುಳ್ಳ ಕನ್ನಡದ ಸಿನಿಮಾ' ಎಂದಿದ್ದಾರೆ ಹಂಸಲೇಖ. ವಿಷಯ ನೋಡಿ ಮುಖಕ್ಕೆ ರಾಚಿದಂತಾಯಿತು 'ನಿರ್ದೇಶಕ ಮಂಸೋರೆ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ನನಗೆ ಅವರು ಯಾರೆಂದು ಗೊತ್ತಿಲ್ಲ. ಆರಂಭದಿಂದ ಕೊನೆವರೆಗೂ ನಾನು ಕಣ್ಣಿನಿಂದ ಸಿನಿಮಾ ನೋಡಿಲ್ಲ. ಹೃದಯದಿಂದ ನೋಡಿದೆ. ಅದ್ಭುತವಾದ ಥೀಮ್, ಅದ್ಭುತವಾದ ಚಿತ್ರಕಥೆ ಇದರಲ್ಲಿ ಇದೆ' ಎಂದು ಹೇಳಿದ್ದಾರೆ.