Don't Miss!
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಷ್ಟಕ್ಕೂ, 'ಕುರುಕ್ಷೇತ್ರ' ಚಿತ್ರದ ಕಥೆ ಏನು.?
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50ನೇ ಚಿತ್ರಕ್ಕೆ 'ಕುರುಕ್ಷೇತ್ರ' ಅಂತ ಶೀರ್ಷಿಕೆ ಫಿಕ್ಸ್ ಆಗಿದೆ. 'ಕುರುಕ್ಷೇತ್ರ'... ಹೆಸರಿಗೆ ತಕ್ಕ ಹಾಗೆ ಇದು ಮಹಾಭಾರತದ ಕುರುಕ್ಷೇತ್ರ ಯುದ್ಧದ ಸುತ್ತ ಹೆಣೆದಿರುವ ಕಥೆ. ಸಿನಿಮಾದಲ್ಲಿ ದರ್ಶನ್ ದುರ್ಯೋಧನ ಪಾತ್ರದಲ್ಲಿ ಮಿಂಚಲಿರುವುದರಿಂದ, ಇದು ದುರ್ಯೋಧನನ ದೃಷ್ಟಿಕೋನದ 'ಕುರುಕ್ಷೇತ್ರ' ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೆ..... 'ಮಹಾಭಾರತ'ವೆಂಬ ಮಹಾಕಾವ್ಯದಲ್ಲಿ 'ಕುರುಕ್ಷೇತ್ರ' ಅಧ್ಯಾಯ ಬಹಳ ವಿಸ್ತಾರವಾದುದು. ಅದನ್ನೆಲ್ಲವನ್ನ ತೆರೆಮೇಲೆ ಕಟ್ಟಿಕೊಡುವಲ್ಲಿ ಚಿತ್ರತಂಡ ಯಶಸ್ವಿ ಆಗಬಹುದೇ.? 'ಕುರುಕ್ಷೇತ್ರ' ಚಿತ್ರದಲ್ಲಿ ಯಾವೆಲ್ಲ ಪರ್ವಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂಬುದರ ಬಗ್ಗೆ ನಿರ್ದೇಶಕ ನಾಗಣ್ಣ ವಿವರಿಸಿದ್ದಾರೆ. ಮುಂದೆ ಓದಿರಿ....
'ಕುರುಕ್ಷೇತ್ರ' ಚಿತ್ರದ ಕಥೆ ಏನು.?
ಕುರುಕ್ಷೇತ್ರದ ಮೊದಲು ಮತ್ತು ನಂತರದ ಕಥೆಯನ್ನ 'ಕುರುಕ್ಷೇತ್ರ' ಸಿನಿಮಾದಲ್ಲಿ ಹೇಳಲಿದ್ದಾರಂತೆ ನಿರ್ದೇಶಕ ನಾಗಣ್ಣ.
ಯಾರೂ ನಿರೀಕ್ಷೆ ಮಾಡದ ನಟ ಈಗ ದರ್ಶನ್ 'ಕುರುಕ್ಷೇತ್ರ'ದಲ್ಲಿ ಭೀಮ.!
ಸಿನಿಮಾದ ಹೈಲೈಟ್ಸ್ ಏನು.?
'ಕುರುಕ್ಷೇತ್ರ' ಯುದ್ಧ ಯಾಕೆ ಅನಿವಾರ್ಯವಾಯಿತು, ಯುದ್ಧ ಹೇಗೆ ನಡೆಯಿತು, ಯುದ್ಧದ ಬಳಿಕ ಏನಾಯಿತು ಎನ್ನುವುದೇ 'ಕುರುಕ್ಷೇತ್ರ' ಚಿತ್ರದ ಹೈಲೈಟ್.
ಬಿಗ್ ಬ್ರೇಕಿಂಗ್: 'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರಂತೆ.!
ನಮ್ಮ ಕಥೆಗೆ ಚೌಕಟ್ಟು ಇದೆ
''ಕುರುಕ್ಷೇತ್ರ'ವನ್ನು ಎಲ್ಲಿಂದ ಬೇಕಿದ್ದರೂ ಆರಂಭಿಸಬಹುದು. ದ್ರೌಪದಿಯ ಶಪಥದಿಂದ, ಶ್ರೀಕೃಷ್ಣನ ಸಂಧಾನದಿಂದ, ಪಾಂಡವರ ವನವಾಸದಿಂದ - ಹೀಗೆ ಎಲ್ಲಿಂದ ಶುರು ಮಾಡಿದರೂ ಕತೆ ಕುರುಕ್ಷೇತ್ರಕ್ಕೆ ಬಂದು ನಿಲ್ಲುತ್ತದೆ. ಹೀಗಾಗಿ, ನಮ್ಮ ಕಥೆ ಇಷ್ಟೇ ಎಂದು ನಾವು ಒಂದು ಚೌಕಟ್ಟು ಹಾಕಿಕೊಂಡಿದ್ದೇವೆ'' ಎಂದು ವಿವರಿಸುತ್ತಾರೆ ನಿರ್ದೇಶಕ ನಾಗಣ್ಣ.
'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ರೆಜಿನಾ ನಿರ್ವಹಿಸುವ ಪಾತ್ರವೇನು.?
ಆಗಸ್ಟ್ 6 ರಂದು ಅದ್ಧೂರಿ ಮುಹೂರ್ತ
'ಕುರುಕ್ಷೇತ್ರ' ಚಿತ್ರದ ಮುಹೂರ್ತ ಆಗಸ್ಟ್ 6 ರಂದು ಅದ್ಧೂರಿಯಾಗಿ ನೆರವೇರಲಿದೆ. ಅಂದೇ, ದುರ್ಯೋಧನನ ಫಸ್ಟ್ ಲುಕ್ ಬಿಡುಗಡೆ ಆಗಲಿದೆ.