twitter
    For Quick Alerts
    ALLOW NOTIFICATIONS  
    For Daily Alerts

    ಸಿದ್ಧಾರ್ಥ ಮಾಡಿದ್ದ ಸಹಾಯ ನೆನೆದ ನಾಗತಿಹಳ್ಳಿ ಚಂದ್ರಶೇಖರ್

    |

    ಕಾಫಿ ಕಿಂಗ್ ಸಿದ್ಧಾರ್ಥ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಹ ಸಿದ್ಧಾರ್ಥ ಸಹಾಯವನ್ನು ನೆನೆದಿದ್ದಾರೆ.

    ಟ್ವಿಟ್ಟರ್ ನಲ್ಲಿ ಸಿದ್ಧಾರ್ಥ ಬಗ್ಗೆ ಬರೆದುಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ''ಗೆಳೆಯರೇ, ಗೌತಮನ ಹೆಸರಿಟ್ಟುಕೊಂಡು ನೀವು ಹೀಗೆ ಮಾಡಬಹುದೇ? ಬದುಕಲು ನೂರು ದಾರಿಗಳಿರಲಿಲ್ಲವೇ?'' ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

    ರಾಜ್ ಕುಟುಂಬದ ಕಷ್ಟದ ದಿನದಲ್ಲಿ ಕೈ ಹಿಡಿದಿದ್ದ ಸಿದ್ಧಾರ್ಥ್ ರಾಜ್ ಕುಟುಂಬದ ಕಷ್ಟದ ದಿನದಲ್ಲಿ ಕೈ ಹಿಡಿದಿದ್ದ ಸಿದ್ಧಾರ್ಥ್

    ಸಿದ್ಧಾರ್ಥ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಕೂಡ ಒಮ್ಮೆ ಸಿದ್ಧಾರ್ಥ ಅವರ ಸಹಾಯ ಪಡೆದಿದ್ದರಂತೆ. 'ಅಮೃತಧಾರೆ' ಸಿನಿಮಾ ಚಿತ್ರೀಕರಣವನ್ನು ಗ್ಲೊಬಲ್ ವಿಲೇಜ್ ನಲ್ಲಿ ಮಾಡಬೇಕಾಗಿತ್ತು. ಆಗ ಅದರ ವ್ಯವಸ್ಥೆಯನ್ನು ಸಿದ್ದಾರ್ಥ ಮಾಡಿಕೊಟ್ಟಿದ್ದರು.

    Director Nagathihalli Chandrashekhar Condolences For Siddharth Death

    ಸಿನಿಮಾ ಚಿತ್ರೀಕರಣಕ್ಕಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದ ಸಿದ್ಧಾರ್ಥ ಅದಕ್ಕೆ ಯಾವುದೇ ಹಣ ತೆಗೆದುಕೊಳ್ಳಲಿಲ್ಲವಂತೆ. ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸಿನಿಮಾ ಮೇಲಿನ ಪ್ರೀತಿಯಿಂದ ಉಚಿತವಾಗಿ ಈ ಅವಕಾಶ ನೀಡಿದ್ದರಂತೆ.

    ಕಾಫಿ ಕಿಂಗ್ ಸಿದ್ಧಾರ್ಥ ನಿಧನಕ್ಕೆ ಕಂಬನಿ ಮಿಡಿದ ಸ್ಯಾಂಡಲ್ ವುಡ್ ಸ್ಟಾರ್ಸ್ ಕಾಫಿ ಕಿಂಗ್ ಸಿದ್ಧಾರ್ಥ ನಿಧನಕ್ಕೆ ಕಂಬನಿ ಮಿಡಿದ ಸ್ಯಾಂಡಲ್ ವುಡ್ ಸ್ಟಾರ್ಸ್

    ಈ ರೀತಿ ತಮಗೆ ಸಹಾಯ ಮಾಡಿದ್ದ ಸಿದ್ಧಾರ್ಥರನ್ನು ನಾಗತಿಹಳ್ಳಿ ಚಂದ್ರಶೇಖರ್ ನೆನಪು ಮಾಡಿಕೊಳ್ಳುವ ಮೂಲಕ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.

    English summary
    Kannada Director Nagathihalli Chandrashekhar condolences for cafe coffee day owner Siddharth death.
    Thursday, August 1, 2019, 12:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X