Don't Miss!
- Automobiles ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- News ‘ಮೋದಿಯನ್ನು ಬಾಯಿಗೆ ಬಂದ ಹಾಗೆ ಬೈದ ದೇವೇಗೌಡ್ರು ಈಗ ಅಪ್ಪಿಕೊಳ್ಳುವುದು ಎಂದರೆ ಏನರ್ಥ?’
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾರಾದರೂ ಸಾಧುಕೋಕಿಲಾರನ್ನ ಹುಡುಕಿ ಕೊಡಿ !
ಸಾಧುಕೋಕಿಲಾರನ್ನ ಹುಡುಕಬೇಕಾಗಿದೆ. ಯಾಕಂದರೆ ಕನ್ನಡ ಸಿನಿಮಾರಂಗದ ಹೆಸರಾಂತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಸಾಧು ಅವರನ್ನ ಹುಡುಕುತ್ತಿದ್ದಾರೆ. ಯಾರಾದರೂ ಸಾಧುಕೋಕಿಲಾರನ್ನ ಹುಡುಕಿ ಕೊಡಿ ಎಂದು ಮೇಷ್ಟ್ರು ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ.
ನಟ, ನಿರ್ದೇಶಕ , ಸಂಗೀತ ನಿರ್ದೇಶಕ ಸಾಧುಕೋಕಿಲ ನಾಗತಿಹಳ್ಳಿ ಚಂದ್ರಶೇಖರ್ ಬರೆದಿರುವ ಒಂದು ಹಾಡನ್ನ ಅರ್ಧ ಹಾಡಿದ್ದಾರಂತೆ. ಮಿಕ್ಕ ಹಾಡನ್ನ ಅರ್ಧಗಂಟೇಲಿ ಬಂದು ಹಾಡುತ್ತೇನೆ ಎಂದು ಹೋದವರು ಇನ್ನು ಬಂದಿಲ್ಲವಂತೆ. ಹಾಗಾಗಿ "ಸ್ಟುಡಿಯೋಗೆ ಬಂದು ಎರಡುಸಾಲು ಅದ್ಭುತವಾಗಿ ಹಾಡಿ ಅರ್ಧ ಗಂಟೇಲಿ ಬರ್ತೀನಿ ಅಂತ ಯಾವುದೋ ರಾಜಕಾರಣಿಯ ಹಿಂದೆ ಹೋಗಿ ಒಂದು ವಾರವಾಯ್ತು. ದಯವಿಟ್ಟು ಯಾರಾದರೂ ಸಾಧುಕೋಕಿಲಾ ಹುಡುಕಿಕೊಡಿ. ಚರಣ ಬಾಕಿ ಇದೆ: ಎಂದು ಟ್ವಿಟ್ಟರ್ ನಲ್ಲಿ ವಿಡಿಯೋ ಸಮೇತ ಹಾಕಿದ್ದಾರೆ.
ಕಾಂಗ್ರೆಸ್ ಪ್ರಚಾರಕ್ಕಾಗಿ ರಸ್ತೆಗಿಳಿದರು ಸ್ಟಾರ್ ಕಲಾವಿದರು
ಮೇಷ್ಟ್ರು ತಿಳಿಸಿರುವಂತೆ ಸಾಧುಕೋಕಿಲ ಈ ಬಾರಿ ಕಾಂಗ್ರೆಸ್ ಪಕ್ಷದ ಪರವಾಗಿ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಆದ್ದರಿಂದ ಸಿನಿಮಾ ಕಾರ್ಯಕ್ರಮಗಳಿಗೆ ಸಿಗುತ್ತಿಲ್ಲ.
ಅಂದ್ಹಾಗೆ ಸಾಧುಕೋಕಿಲ ಹಾಡಬೇಕಿರುವ ಹಾಡು ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಸಿನಿಮಾಗೆ. ನವ ನಾಯಕ ವೈಭವ್ ಸಿನಿಮಾದಲ್ಲಿ ನಾಯಕನಾಗಿ ಅಭಿನಯ ಮಾಡುತ್ತಿದ್ದು ಮಾನ್ವಿತಾ ಹರೀಶ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ನಿರ್ದೇಶಕರು ಚುನಾವಣೆ ನಂತರ ಚಿತ್ರದ ಪ್ರಚಾರ ಆರಂಭ ಮಾಡಲಿದ್ದಾರೆ.
ಸ್ಟುಡಿಯೋಗೆ ಬಂದು ಎರಡುಸಾಲು ಅದ್ಭುತವಾಗಿ ಹಾಡಿ ಅರ್ಧಗಂಟೇಲಿ ಬರ್ತೀನಿ ಅಂತ ಯಾವುದೋ ರಾಜಕಾರಣಿಯ ಹಿಂದೆಹೋಗಿ ಒಂದು ವಾರವಾಯ್ತು. ದಯವಿಟ್ಟು ಯಾರಾದರೂ ಸಾಧುಕೋಕಿಲಾ ಹುಡುಕಿಕೊಡಿ. ಚರಣ ಬಾಕಿ ಇದೆ... pic.twitter.com/ecjeIIkMyV
— Chandru Nagathihalli (@NomadChandru) May 2, 2018