Don't Miss!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾರಾದರೂ ಸಾಧುಕೋಕಿಲಾರನ್ನ ಹುಡುಕಿ ಕೊಡಿ !
ಸಾಧುಕೋಕಿಲಾರನ್ನ ಹುಡುಕಬೇಕಾಗಿದೆ. ಯಾಕಂದರೆ ಕನ್ನಡ ಸಿನಿಮಾರಂಗದ ಹೆಸರಾಂತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಸಾಧು ಅವರನ್ನ ಹುಡುಕುತ್ತಿದ್ದಾರೆ. ಯಾರಾದರೂ ಸಾಧುಕೋಕಿಲಾರನ್ನ ಹುಡುಕಿ ಕೊಡಿ ಎಂದು ಮೇಷ್ಟ್ರು ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ.
ನಟ, ನಿರ್ದೇಶಕ , ಸಂಗೀತ ನಿರ್ದೇಶಕ ಸಾಧುಕೋಕಿಲ ನಾಗತಿಹಳ್ಳಿ ಚಂದ್ರಶೇಖರ್ ಬರೆದಿರುವ ಒಂದು ಹಾಡನ್ನ ಅರ್ಧ ಹಾಡಿದ್ದಾರಂತೆ. ಮಿಕ್ಕ ಹಾಡನ್ನ ಅರ್ಧಗಂಟೇಲಿ ಬಂದು ಹಾಡುತ್ತೇನೆ ಎಂದು ಹೋದವರು ಇನ್ನು ಬಂದಿಲ್ಲವಂತೆ. ಹಾಗಾಗಿ "ಸ್ಟುಡಿಯೋಗೆ ಬಂದು ಎರಡುಸಾಲು ಅದ್ಭುತವಾಗಿ ಹಾಡಿ ಅರ್ಧ ಗಂಟೇಲಿ ಬರ್ತೀನಿ ಅಂತ ಯಾವುದೋ ರಾಜಕಾರಣಿಯ ಹಿಂದೆ ಹೋಗಿ ಒಂದು ವಾರವಾಯ್ತು. ದಯವಿಟ್ಟು ಯಾರಾದರೂ ಸಾಧುಕೋಕಿಲಾ ಹುಡುಕಿಕೊಡಿ. ಚರಣ ಬಾಕಿ ಇದೆ: ಎಂದು ಟ್ವಿಟ್ಟರ್ ನಲ್ಲಿ ವಿಡಿಯೋ ಸಮೇತ ಹಾಕಿದ್ದಾರೆ.
ಕಾಂಗ್ರೆಸ್ ಪ್ರಚಾರಕ್ಕಾಗಿ ರಸ್ತೆಗಿಳಿದರು ಸ್ಟಾರ್ ಕಲಾವಿದರು
ಮೇಷ್ಟ್ರು ತಿಳಿಸಿರುವಂತೆ ಸಾಧುಕೋಕಿಲ ಈ ಬಾರಿ ಕಾಂಗ್ರೆಸ್ ಪಕ್ಷದ ಪರವಾಗಿ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಆದ್ದರಿಂದ ಸಿನಿಮಾ ಕಾರ್ಯಕ್ರಮಗಳಿಗೆ ಸಿಗುತ್ತಿಲ್ಲ.
ಅಂದ್ಹಾಗೆ ಸಾಧುಕೋಕಿಲ ಹಾಡಬೇಕಿರುವ ಹಾಡು ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಸಿನಿಮಾಗೆ. ನವ ನಾಯಕ ವೈಭವ್ ಸಿನಿಮಾದಲ್ಲಿ ನಾಯಕನಾಗಿ ಅಭಿನಯ ಮಾಡುತ್ತಿದ್ದು ಮಾನ್ವಿತಾ ಹರೀಶ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ನಿರ್ದೇಶಕರು ಚುನಾವಣೆ ನಂತರ ಚಿತ್ರದ ಪ್ರಚಾರ ಆರಂಭ ಮಾಡಲಿದ್ದಾರೆ.
ಸ್ಟುಡಿಯೋಗೆ ಬಂದು ಎರಡುಸಾಲು ಅದ್ಭುತವಾಗಿ ಹಾಡಿ ಅರ್ಧಗಂಟೇಲಿ ಬರ್ತೀನಿ ಅಂತ ಯಾವುದೋ ರಾಜಕಾರಣಿಯ ಹಿಂದೆಹೋಗಿ ಒಂದು ವಾರವಾಯ್ತು. ದಯವಿಟ್ಟು ಯಾರಾದರೂ ಸಾಧುಕೋಕಿಲಾ ಹುಡುಕಿಕೊಡಿ. ಚರಣ ಬಾಕಿ ಇದೆ... pic.twitter.com/ecjeIIkMyV
— Chandru Nagathihalli (@NomadChandru) May 2, 2018