Don't Miss!
- Sports BCCI Central Contract: ಶ್ರೇಯಸ್, ಇಶಾನ್ ಕಡೆಗಣನೆ: ಯುವ ಆಟಗಾರರಿಗೆ ಮಣೆ
- News ಬೆಂಗಳೂರು ಬೆಳ್ಳಂದೂರು ಶಾಲಾ ಆವರಣದಲ್ಲಿ ಸ್ಪೋಟಕ ಪತ್ತೆ, ಮಕ್ಕಳು ಪೋಷಕರಲ್ಲಿ ಆತಂಕ
- Finance ಬಯೋಕಾನ್ ರಾಜಕೀಯ ದೇಣಿಗೆ ನೀಡಿಲ್ಲ ಎಂದ ಕಿರಣ್ ಮಜುಂದಾರ್ ಶಾ: ಹಾಗಿದ್ರೆ 6 ಕೋಟಿ ರೂ. ಯಾರದ್ದು?
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಸೆ ಈಡೇರುವ ಮುನ್ನವೇ ವಿಜಯ್ ಹೋಗಿಬಿಟ್ಟ: ನಾಗತಿಹಳ್ಳಿ ಚಂದ್ರಶೇಖರ್
''ಸಂಚಾರಿ ವಿಜಯ್ ಜೊತೆ ಸಿನಿಮಾ ಮಾಡುವ ಆಸೆಯಿತ್ತು. ಕತೆ ಚರ್ಚೆಯ ಹಂತದಲ್ಲಿರುವಾಗಲೇ ವಿಜಯ್ ಹೋಗಿಬಿಟ್ಟ. ಸಿನಿಮಾ ಮಾಡಬೇಕೆಂಬ ಆಸೆ ಹಾಗೆಯೇ ಉಳಿಯಿತು'' ಎಂದಿದ್ದಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.
ರಂಗಚಂದಿರ ತಂಡದವರಿಂದ ಇಂದು ಟೌನ್ಹಾಲ್ ಬಳಿ ಆಯೋಜಿಸಲಾಗಿದ್ದ ಸಂಚಾರಿ ವಿಜಯ್ಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾವುಕರಾಗಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ''ಚಿಮ್ಮುವ ಕಾರಂಜಿಯೊಂದು ಥಟ್ಟನೆ ಬತ್ತಿದಂತೆ, ಹೂವೊಂದನ್ನು ಹೊಸಕಿಹಾಕಿದಂತೆ ಆಗಿಬಿಟ್ಟಿದೆ. ಒಳ್ಳೆಯ ಮರಗಳಿಗೆ ದೇವರು ಕೊಡಲಿ ಹಾಕುತ್ತಾನಂತೆ ದೇವರಿದ್ದಾನೊ ಇಲ್ಲವೋ ತಿಳಿಯೆ ಆದರೆ ಸಂಚಾರಿ ವಿಜಯ್ ವಿಷಯದಲ್ಲಿ ಇದು ನಿಜವಾಗಿಬಿಟ್ಟಿದೆ' ಎಂದು ಬೇಸರ ವ್ಯಕ್ತಪಡಿಸಿದರು ನಾಗತಿಹಳ್ಳಿ ಚಂದ್ರಶೇಖರ್.
''ನಂದಿ ಹೋದ ನನ್ನ ಕಿರಿಯ ಗೆಳೆಯನ ನೆನಪಿನಲ್ಲಿ ನಾವು ರಂಗಭೂಮಿಯ ಗೆಳೆಯರೆಲ್ಲ ಸೇರಿ ದೀಪ ಬೆಳಗಿದ್ದೇವೆ. ಸಂಚಾರಿ ವಿಜಯ್ ನನೆಪು ನಮ್ಮಲ್ಲಿ ಸದಾ ಬೆಳಗುತ್ತಿರಲಿ. ಆತನ ಸಾಮಾಜಿಕ ಕಾಳಜಿ ಎಲ್ಲರಿಗೂ ಮಾದರಿಯಾಗಲಿ' ಎಂದರು ನಾಗತಿಹಳ್ಳಿ ಚಂದ್ರಶೇಖರ್.
ಹಲವಾರು ರಂಗಭೂಮಿ ಕಲಾವಿದರು, ತಂತ್ರಜ್ಞರು, ಸಂಚಾರಿ ವಿಜಯ್ ಆಪ್ತರು ಸಂಚಾರಿ ವಿಜಯ್ ಬಗ್ಗೆ ಅವರೊಟ್ಟಿಗೆ ಕಳೆದ ಕ್ಷಣಗಳ ಬಗ್ಗೆ ಮಾತನಾಡಿದರು.
Recommended Video
ಸಂಚಾರಿ ವಿಜಯ್ ಜೂನ್ 12 ರಂದು ಜೆಪಿ ನಗರ 7ನೇ ಹಂತದ ಬಳಿ ಬೈಕ್ ಅಪಘಾತಕ್ಕೆ ಈಡಾಗಿದ್ದರು. ಎರಡು ದಿನ ಜೀವನ್ಮರಣದ ನಡುವೆ ಹೋರಾಡಿ ಜೂನ್ 14 ಮಧ್ಯರಾತ್ರಿ ಅವರನ್ನು ಮೃತರೆಂದು ವೈದ್ಯರು ಘೋಷಿಸಿದರು. ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದರು ವಿಜಯ್.