Don't Miss!
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Automobiles ದೊಡ್ಡ ಸಿಗ್ನಲ್ ಕೊಟ್ಟ ಫೋರ್ಡ್: ಭಾರತಕ್ಕೆ ಬರುತ್ತಿದೆ ಹೊಸ ಎಸ್ಯುವಿ... ಟಾಟಾಗೆ ಆತಂಕ ಶುರು
- Finance Gold rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಟೆರರಿಸಂ' ವಿರುದ್ಧ ಅಬ್ಬರಿಸಲಿದ್ದಾಳೆ 'ರಣಚಂಡಿ' ರಾಗಿಣಿ.!
'ಆ ದಿನಗಳು' ಚೇತನ್ ಜೊತೆ ಐತಿಹಾಸಿಕ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದ ನಿರ್ದೇಶಕ ಪಿ.ಸಿ ಶೇಖರ್ ಈ ಮಧ್ಯೆ ಮತ್ತೊಂದು ಹೊಸ ಚಿತ್ರಕ್ಕೆ ಕೈಹಾಕಿದ್ದಾರೆ.
ಚೇತನ್ ಜೊತೆ ಮಾಡಲಿರುವ ಬ್ರಿಟಿಷ್ ಕಾಲದ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದು, ಪ್ರಿ-ಪ್ರೊಡಕ್ಷನ್ ಕಾರ್ಯ ಪ್ರಗತಿಯಲ್ಲಿದೆ. ಹೀಗಾಗಿ, ಈ ಗ್ಯಾಪ್ ನಲ್ಲೊಂದು ಸಿನಿಮಾ ಮಾಡಲು ಡೈರೆಕ್ಟರ್ ಸಿದ್ದವಾಗಿದ್ದಾರೆ. ಅಂದ್ಹಾಗೆ, ಈ ಚಿತ್ರಕ್ಕೆ ರಾಗಿಣಿ ಧ್ವಿವೇದಿ ನಾಯಕಿ ಆಗಿ ಆಯ್ಕೆಯಾಗಿದ್ದಾರೆ.
ಅಯ್ಯೋ...! ಯಾಕೋ ಈ ವರ್ಷ ರಾಗಿಣಿ ದ್ವಿವೇದಿ ಹಣೆ ಬರಹ ಸರಿ ಇಲ್ಲ ಬಿಡಿ
ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಟೆರರಿಸಂ ಕುರಿತ ಸಿನಿಮಾ ಆಗಿದೆಯಂತೆ. ಸದ್ಯಕ್ಕೆ ರಾಗಿಣಿ ಮಾತ್ರ ಅಂತಿಮಗೊಂಡಿದ್ದು, ಉಳಿದ ತಾರಾಬಳಗದ ಆಯ್ಕೆ ನಡೆಯಬೇಕಿದ್ದು, ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ.
ಒಂದೇ ಹಂತದಲ್ಲಿ ಸಂಪೂರ್ಣ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡುವುದಕ್ಕೆ ನಿರ್ದೇಶಕರು ಯೋಜನೆ ಹಾಕಿರುವ ನಿರ್ದೇಶಕರು, ನವೆಂಬರ್ 15 ರಿಂದ ಈ ಚಿತ್ರದ ಚಿತ್ರೀಕರಣ ಆರಂಬಿಸಿಲಿದ್ದಾರೆ.
ಶರಣ್ ಮುಂದಿನ ಚಿತ್ರಕ್ಕೆ ಗ್ಲಾಮರ್ ಕ್ವೀನ್ ರಾಗಿಣಿ ನಾಯಕಿ
ಇನ್ನು ಈ ಚಿತ್ರವನ್ನ ಹಾಂಕ್ ಕಾಂಗ್ ಮೂಲದ ಎನ್.ಆರ್. ಅಲಂಕಾರ್ ಸಂತಾನಂ ನಿರ್ಮಾಣ ಮಾಡುತ್ತಿದ್ದಾರೆ. ಇನ್ನುಳಿದಂತೆ ಚೇತನ್ ಸಿನಿಮಾ ಜನವರಿ 15 ರಿಂದ ಆರಂಭವಾಗಲಿದೆ.
ಸದ್ಯ ಶರಣ್ ಜತೆ ಹೊಸ ಚಿತ್ರದಲ್ಲಿ ರಾಗಿಣಿ ಬಿಜಿಯಾಗಿದ್ದು, ಅವರ ಅಭಿನಯದ 'ನಾನೇ ನೆಕ್ಸ್ಟ್ ಸಿಎಂ' ತೆರೆಕಾಣಬೇಕಿದೆ. 'ಮುಸ್ಸಂಜೆ' ಮಹೇಶ್ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಅಲ್ಲದೆ, ಪದೀಪ್ ರಾಜ್ ನಿರ್ದೇಶನದ 'ಕಿಚ್ಚು' ಚಿತ್ರದಲ್ಲೂ ರಾಗಿಣಿ ಭಿನ್ನ ಕಾಣಿಸಿಕೊಂಡಿದ್ದಾರೆ