Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಶ್ ಎಷ್ಟೇ ಕೇಳಿದ್ರು ಈ ಕೆಲಸ ಮಾಡಲೇ ನಿರ್ದೇಶಕ ಪ್ರೇಮ್
ರೆಬೆಲ್ ಸ್ಟಾರ್ ಅಂಬರೀಶ್ ಅಂದ್ರೆ ಇಡೀ ಕನ್ನಡ ಇಂಡಸ್ಟ್ರಿಗೆ ಮಾತ್ರವಲ್ಲ ಭಾರತ ಚಿತ್ರರಂಗಕ್ಕೂ ಒಂದು ರೀತಿ ಸ್ನೇಹ, ಅಭಿಮಾನ, ಪ್ರೀತಿ ಇತ್ತು. ಇಂದು ಅಂಬಿ ದೈಹಿಕವಾಗಿ ಇಲ್ಲವಾದರೂ ಅವರ ಅಭಿಮಾನಿಗಳ ಮನದಲ್ಲಿ ಇಂದಿಗೂ ನೆನಪಾಗಿ ಉಳಿದುಕೊಂಡಿದ್ದಾರೆ.
ಅಂಬಿಯ ಅಭಿಮಾನಿ ಬಳಗದಲ್ಲಿ ನಿರ್ದೇಶಕ ಪ್ರೇಮ್ ಕೂಡ ಒಬ್ಬರು. ಪ್ರೇಮ್ ದಂಪತಿ ಮೇಲೆ ಅಪಾರವಾದ ಪ್ರೀತಿ ಇಟ್ಟಿದ್ದ ರೆಬೆಲ್ ಸ್ಟಾರ್ ಗೆ ಒಂದು ಆಸೆ ಈಡೇರಲಿಲ್ಲವಂತೆ. ಈ ವಿಷ್ಯವನ್ನ ಖುದ್ದು ಪ್ರೇಮ್ ಹೇಳಿಕೊಂಡಿದ್ದಾರೆ.
ಸುದೀಪ್ ಪ್ರಕಾರ ಸ್ಯಾಂಡಲ್ ವುಡ್ ಗೆ ಈ ನಟ 'ಬಾಸ್' ಆಗ್ಬೇಕಂತೆ.!
ದುಬೈನಲ್ಲಿ ನಡೆದ 'ದಿ ವಿಲನ್' ಚಿತ್ರದ ಆಡಿಯೋ ರಿಲೀಸ್ ವೇಳೆ ಕೊನೆಯದಾಗಿ ಪ್ರೇಮ್ ಬಳಿ ಆ ವ್ಯಕ್ತಿಯನ್ನ ಭೇಟಿ ಮಾಡಿಸು ಎಂದು ಕೇಳಿದ್ದರಂತೆ. ಆದ್ರೆ, ಆ ವ್ಯಕ್ತಿಯನ್ನ ಭೇಟಿ ಮಾಡಿಸುವಲ್ಲಿ ಪ್ರೇಮ್ ವಿಫಲರಾದರಂತೆ. ಈಗಲೂ ಆ ನೋವು ಕಾಡುತ್ತಿದೆ ಎಂದು ಪ್ರೇಮ್ ತಿಳಿಸಿದ್ದಾರೆ. ಅಷ್ಟಕ್ಕೂ, ಅಂಬಿ ಭೇಟಿಯಾಗದೇ ಉಳಿದುಕೊಂಡ ಆ ವ್ಯಕ್ತಿ ಯಾರು?
ಪ್ರೇಮ್ ತಾಯಿ ಭೇಟಿ ಮಾಡ್ಬೇಕಿತ್ತು
ನಿರ್ದೇಶಕ ಪ್ರೇಮ್ ಸಿಕ್ಕಾಗೆಲ್ಲಾ ''ನಿಮ್ಮ ಮನೆಗೆ ಯಾವಾಗ ಕರ್ಕೊಂಡು ಹೋಗ್ತೀಯೋ, ನಿಮ್ಮ ಅಮ್ಮನ ಯಾವಾಗ ಭೇಟಿ ಮಾಡಿಸ್ತೀಯಾ ಎಂದು ಕೇಳುತ್ತಿದ್ದರಂತೆ. ಆದ್ರೆ, ಮನೆಯಲ್ಲಿ ಲಿಫ್ಟ್ ಇಲ್ಲದ ಕಾರಣ ಅಂಬರೀಶ್ ಅವರು ನಡೆಯಲು ಕಷ್ಟವಾಗುತ್ತೆ ಎಂಬ ಕಾರಣಕ್ಕೆ ಕರೆದುಕೊಂಡು ಹೋಗ್ತೀನಿ ಅಂತ ಹೇಳ್ತಾ ಇದ್ರಂತೆ ಪ್ರೇಮ್.
ಅಂಬಿ ಪುತ್ರ ಅಭಿಷೇಕ್ ಮತ್ತು 'ದೊಡ್ಮಗ' ದರ್ಶನ್ ಕೊಟ್ರು ಬ್ರೇಕಿಂಗ್ ನ್ಯೂಸ್
ಲಿಫ್ಟ್ ಹಾಕಿದ ಮೇಲೆ ಕರೆದೆ
ಆಮೇಲೆ ಮನೆಗೆ ಲಿಫ್ಟ್ ಹಾಕಿದೆ. ಅಂಬರೀಶ್ ಅವರ ಬಳಿ ಹೇಳಿದೆ, ಅಣ್ಣಾ ಈಗ ಲಿಫ್ಟ್ ಹಾಕಿದ್ದೀನಿ, ಬೆಸ್ ಮೆಂಟ್ ನಿಂದ ಯಾವ ಫ್ಲೋರ್ ಗೆ ಬೇಕಾದರೂ ಲಿಫ್ಟ್ ನಲ್ಲಿ ಹೋಗಬಹುದು. ಈಗ ಬನ್ನಿ ಎಂದು ಆಹ್ವಾನಿಸಿದ್ದೆ. ಹೋಗೋಣ ಅಂತ ಹೇಳಿದ್ದರು. ಆದ್ರೆ, ಕೊನೆಗೂ ಆಗಲಿಲ್ಲ.
ಆಫ್ ದಿ ರೆಕಾರ್ಡ್ : ಯಾವಾಗಲೂ ಗದರುತ್ತಿದ್ದ ಅಂಬಿ ಆ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದರು
ಈಗಲೂ ತಾಯಿ ಬೈಯ್ತಾರೆ
ಕೊನೆಗೂ ಅಂಬರೀಶ್ ಅವರನ್ನ ಮನೆಗೆ ಕರೆದುಕೊಂಡು ಹೋಗುವ ಯೋಗ್ಯತೆ ನನಗಿರಲಿಲ್ಲ ಅನ್ಸುತ್ತೆ. ಈಗಲು ತಾಯಿ ನನ್ನನ್ನು ಬೈಯ್ತಾರೆ. ನೀನು ಅವರನ್ನ ಕರೆದುಕೊಂಡು ಬರಬೇಕಿತ್ತು. ಆದ್ರೆ, ಅದೇನ್ ದುರಾದೃಷ್ಟನೋ ಗೊತ್ತಿಲ್ಲ. ಆಗ್ಲಿಲ್ಲ ಎಂದು ಪ್ರೇಮ್ ಬೇಸರ ಮಾಡಿಕೊಂಡಿದ್ದಾರೆ.
ದರ್ಶನ್ ಅಂಬಿಯ ಮತ್ತೊಬ್ಬ ಮಗ: ಅಂಬಿ ಆಪ್ತ ಸೀನಣ್ಣ ಹೇಳಿದ ಕಥೆ
ಅಂಬಿಯನ್ನ ನೆನೆದ ಪ್ರೇಮ್
ಈ ವಾರ ಜೀ ಕನ್ನಡದಲ್ಲಿ ದಿ ವಿಲನ್ ಸಿನಿಮಾ ಟೆಲಿಕಾಸ್ಟ್ ಮಾಡ್ತಿದ್ದಾರೆ. ಈ ವೇಳೆ ವಿಡಿಯೋ ಬೈಟ್ ನಲ್ಲಿ ಮಾತನಾಡುವಾಗ ಪ್ರೇಮ್ ಈ ವಿಷ್ಯವನ್ನ ಹಂಚಿಕೊಂಡು ಭಾವುಜರಾದರು.