Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ದೇಶಕ ಆರ್.ಚಂದ್ರು ಹೈದರಾಬಾದ್ ನಲ್ಲಿ ಬೀಡುಬಿಟ್ಟಿರೋದೇಕೆ.?
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್.ಚಂದ್ರು ಕಾಂಬಿನೇಶನ್ ನ 'ಕಬ್ಜ' ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ಗ್ರ್ಯಾಂಡ್ ಆಗಿ ನಡೆಯಿತು. ಮುಹೂರ್ತ ಸಮಾರಂಭ ಮುಗಿಯುತ್ತಿದ್ದಂತೆಯೇ, ನಿರ್ದೇಶಕ ಆರ್.ಚಂದ್ರು ಹೈದರಾಬಾದ್ ಗೆ ಹಾರಿದ್ದಾರೆ. ಸದ್ಯ ಹೈದರಾಬಾದ್ ನಲ್ಲೇ ಆರ್.ಚಂದ್ರು ಬೀಡುಬಿಟ್ಟಿದ್ದಾರೆ.
ಇದಕ್ಕೆ ಕಾರಣ ಏನಪ್ಪಾ ಅಂದ್ರೆ, 'ಕಬ್ಜ' ಚಿತ್ರಕ್ಕಾಗಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಿರ್ದೇಶಕ ಆರ್.ಚಂದ್ರು ಅದ್ಧೂರಿ ಸೆಟ್ ರೆಡಿ ಮಾಡಿಸುತ್ತಿದ್ದಾರೆ. ಮುಂದಿನ ತಿಂಗಳು.. ಅಂದ್ರೆ ಡಿಸೆಂಬರ್ ನಿಂದ 'ಕಬ್ಜ' ಚಿತ್ರದ ಶೂಟಿಂಗ್ ಶುರು ಆಗಲಿದ್ದು, ಭೂಗತ ಲೋಕದ ಚಟುವಟಿಕೆಗಳು ನಡೆಯುವ ತಾಣದ ಸೆಟ್ ಗಾಗಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ತಯಾರಿ ನಡೆಯುತ್ತಿದೆ.
ಹೊಸ ದಾಖಲೆ ಬರೆಯಲು ಸಿದ್ಧವಾಗಿದೆ ಉಪೇಂದ್ರ-ಆರ್.ಚಂದ್ರು ಚಿತ್ರ 'ಕಬ್ಜ'
'ಕಬ್ಜ' ಚಿತ್ರಕ್ಕೆ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನೂ ಆರ್.ಚಂದ್ರು ಹೊತ್ತಿದ್ದಾರೆ. ಹೀಗಾಗಿ, ಪ್ರತಿಯೊಂದನ್ನೂ ಪರ್ಫೆಕ್ಟ್ ಆಗಿ ಪ್ಲಾನ್ ಮಾಡಿಕೊಂಡಿದ್ದಾರೆ ಆರ್.ಚಂದ್ರು.
ತೆಲುಗು ಸಿನಿ ಅಂಗಳದಲ್ಲೂ ಉಪೇಂದ್ರಗೆ ದೊಡ್ಡ ಫ್ಯಾನ್ ಫಾಲೋವಿಂಗ್ ಇರೋದ್ರಿಂದ 'ಕಬ್ಜ' ಚಿತ್ರದ ತೆಲುಗು ವರ್ಷನ್ ನ ಮುಹೂರ್ತವನ್ನೂ ಭರ್ಜರಿಯಾಗಿ ಮಾಡಲು ಆರ್.ಚಂದ್ರು ಸಿದ್ಧವಾಗಿದ್ದಾರೆ.
'ಭೂಗತ ದೊರೆ'ಯಾಗಿ ರಿಯಲ್ ಸ್ಟಾರ್ ಉಪೇಂದ್ರ ಹೇಗೆ ಕಾಣ್ತಾರೆ ಗೊತ್ತಾ.?
ತೆಲುಗಿನಲ್ಲಿ 'ಕಬ್ಜ' ಮುಹೂರ್ತ ನೆರವೇರಿದ ನಂತರ ಚಿತ್ರೀಕರಣ ಆರಂಭವಾಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಒಟ್ಟು ಏಳು ಭಾಷೆಗಳಲ್ಲಿ 'ಕಬ್ಜ' ತೆರೆಗೆ ಬರಲಿದೆ. ಪ್ರಕಾಶ್ ರಾಜ್, ನಾನಾ ಪಾಟೇಕರ್, ಸೇರಿದಂತೆ ವಿವಿಧ ಭಾಷೆಯ ಏಳು ಖಳನಟರು 'ಕಬ್ಜ' ಚಿತ್ರದಲ್ಲಿ ಉಪೇಂದ್ರ ವಿರುದ್ಧ ತೊಡೆ ತಟ್ಟಲಿದ್ದಾರೆ. ಆದ್ರೆ ಇನ್ನೂ ಉಪೇಂದ್ರ ಜೊತೆ ಡ್ಯುಯೆಟ್ ಹಾಡುವ ನಾಯಕಿಯ ಆಯ್ಕೆ ನಡೆದಿಲ್ಲ.