Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ವ್ಯಕ್ತಿತ್ವವನ್ನು ಒಂದೇ ಸಾಲಿನಲ್ಲಿ ಕಟ್ಟಿಕೊಟ್ಟ ಖ್ಯಾತ ನಿರ್ದೇಶಕ
ಸ್ಯಾಂಡಲ್ವುಡ್ನ ಡಿ-ಬಾಸ್ ದರ್ಶನ್ ವ್ಯಕ್ತಿತ್ವವೇ ಭಿನ್ನ. ಮಾನವೀಯತೆಯುಳ್ಳ ವ್ಯಕ್ತಿಯಾಗಿಯೂ, ಅಭಿಮಾನಿಗಳ ಆಪ್ತ ಗೆಳೆಯನಾಗಿಯೂ, ಕ್ಯಾಮೆರಾ ಹಿಡಿದು ಕಾಡು ತಿರುಗಿ ವನ್ಯ ಜೀವಿ ಪ್ರೇಮಿಯಾಗಿಯೂ, ಫಾರಂ ನಿರ್ಮಿಸಿ ಹಾಲು ಕರೆವ ಕೃಷಿಕನಾಗಿಯೂ ಇನ್ನೂ ಹಲವು ಅವತಾರಗಳಲ್ಲಿ ಅವರು ಕಾಣುತ್ತಾರೆ.
ಸಂಬಂಧಗಳ ವಿಚಾರದಲ್ಲಿಯೂ ದರ್ಶನ್ ಅವರದ್ದು ವಿವಿಧ ಆಯಾಮಗಳುಳ್ಳ ವ್ಯಕ್ತಿತ್ವವೇ. ವೈಯಕ್ತಿಕ ಸಂಬಂಧದ ಬಗ್ಗೆ ಸುದ್ದಿಯಾಗಿದ್ದ ದರ್ಶನ್, ಆ ನಂತರ ಸಂಪೂರ್ಣ ಕೌಟುಂಬಿಕ ವ್ಯಕ್ತಿಯಾಗಿ ಗುರುತಿಸಿಕೊಂಡರು.
ಬುಲೆಟ್ ಪ್ರಕಾಶ್ ಬಿಟ್ಟುಹೋದ ದೊಡ್ಡ ಜವಾಬ್ದಾರಿ ಹೊತ್ತುಕೊಂಡ ದರ್ಶನ್
ಸ್ನೇಹದ ವಿಷಯಕ್ಕೆ ಬಂದರೆ, ವೈಯಕ್ತಿಕ ಸ್ವಾಭಿಮಾನಕ್ಕೆ ಮೊದಲ ಪ್ರಾಮುಖ್ಯತೆ ನೀಡಿ ಸ್ನೇಹವನ್ನು ಮೌನವಾಗಿಯೇ ಕಡಿದುಕೊಂಡು ದೂರಾದರು. ದರ್ಶನ್ ಅವರದ್ದು ಹಲವು ಆಯಾಮಗಳಿಂದ ಕೂಡಿದ ಭಿನ್ನ ವ್ಯಕ್ತಿತ್ವ. ಇಂಥಹಾ ದರ್ಶನ್ ವ್ಯಕ್ತಿತ್ವವನ್ನು ಒಂದೇ ಸಾಲಿನಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಕನ್ನಡದ ಹೆಸರಾಂತ ನಿರ್ದೇಶಕ.
ದರ್ಶನ್ ಅವರನ್ನು ಹತ್ತಿರದಿಂದ ನೋಡಿದ ವ್ಯಕ್ತಿ
ನಿರ್ದೇಶಕ ರವಿ ಶ್ರೀವತ್ಸ ಅವರು ದರ್ಶನ್ ಅವರನ್ನು ಹತ್ತಿರದಿಂದ ನೋಡಿದ ವ್ಯಕ್ತಿ. ಅವರ ವ್ಯಕ್ತಿತ್ವದ ಬಗ್ಗೆ ಅರಿವಿರೋ ಆಪ್ತ ಗೆಳೆಯ ಸಹ ಹೌದು. ಅವರು ದರ್ಶನ್ ಅವರ ಬಗ್ಗೆ ಒಂದೇ ಸಾಲಿನಲ್ಲಿ ಹೇಳಿದ್ದಾರೆ.
ರವಿ ಶ್ರೀವತ್ಸ ಅವರಿಗೆ ದರ್ಶನ್ ಅಭಿಮಾನಿ ಪ್ರಶ್ನೆ
ಟ್ವಿಟ್ಟರ್ ನಲ್ಲಿ ರವಿ ಶ್ರೀವತ್ಸ ಅವರಿಗೆ ದರ್ಶನ್ ಅಭಿಮಾನಿಯಿಂದ ಪ್ರಶ್ನೆಯೊಂದು ಇಂದು ಎದುರಾಯಿತು. ನೀವು ಕಂಡ ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ಹೇಳಿ ಎಂದು ಅಭಿಮಾನಿಯೊಬ್ಬ ರವಿ ಶ್ರೀವತ್ಸ ಅವರಲ್ಲಿ ಪ್ರಶ್ನೆ ಮಾಡಿದ್ದರು.
ದರ್ಶನ್ ಅಭಿಮಾನಿಗಳ ಕಾರ್ಯಕ್ಕೆ ಶಹಭಾಸ್ ಎಂದ ರಾಜಕಾರಣಿಗಳು
ರವಿ ಶ್ರೀವತ್ಸ ಕೊಟ್ಟ ಉತ್ತರವೇನು?
ಇದಕ್ಕೆ ಉತ್ತರಿಸಿದ ರವಿ ಶ್ರೀವತ್ಸ ''ಯಾರ ತಂಟೇಗು ಹೋಗ್ದೇ ಇರೋ ದೇವರು, ತಿರುಗಿ ಬಿದ್ದರೇ ತಡೆದು ನಿಲ್ಸಕ್ಕಾಗದ ತೇರು'' ಎಂದು ಸರಳವಾಗಿ ಒಂದೇ ಸಾಲಿನಲ್ಲಿ ಇಡೀಯ ದರ್ಶನ್ ವ್ಯಕ್ತಿತ್ವದ ಬಗ್ಗೆಯೇ ಹೇಳಿಬಿಟ್ಟಿದ್ದಾರೆ.
ಬದಲಾಗಿದ್ದಾರಾ ದರ್ಶನ್?
ಕಳೆದ ಲೋಕಸಭೆ ಚುನಾವಣೆಯಲ್ಲಿ ದರ್ಶನ್ ವಿರುದ್ಧ ಟೀಕಾ ಪ್ರಹಾರಗಳೇ ಕೇಳಿ ಬಂದವು ಆದರೆ ದರ್ಶನ್ ಪ್ರತಿಕ್ರಿಯಿಸಲಿಲ್ಲ, ತಮ್ಮ ಗುರಿಯತ್ತ ಮಾತ್ರವೇ ದೃಷ್ಟಿ ನೆಟ್ಟಿದ್ದರು. ಕೆಲವು ನಟರ ಅಭಿಮಾನಿಗಳು ಸಹ ದರ್ಶನ್ ತೇಜೋವಧೆಯ ಯತ್ನ ಮಾಡಿದ್ದರು ಆಗಲೂ ದರ್ಶನ್ ಅವರದ್ದು ಮೌನವೇ. ಅಪಘಾತವಾದಾಗ ಮಾಧ್ಯಮಗಳು ವಿವಾದ ಹುಟ್ಟುಹಾಕುವ ಪ್ರಶ್ನೆಗಳನ್ನು ಕೇಳಿದಾಗಲೂ ದರ್ಶನ್ ಅವರದ್ದು ನಗು ತುಂಬಿದ ಉತ್ತರಗಳೇ' ಇವೆಲ್ಲವುಗಳ ಹಿನ್ನೆಲೆಯಲ್ಲಿ ರವಿ ಶ್ರೀವತ್ಸ ಗಮನಿಸಿದರೆ ಅಕ್ಷರಶಃ ನಿಜ ಎನಿಸದೇ ಇರದು.
ಈ' ಸ್ಟಾರ್ ನಟನಿಗೆ ಸಿನಿಮಾ ನಿರ್ಮಾಣ ಮಾಡುವ ಕನಸಿಟ್ಟುಕೊಂಡಿದ್ದರು ಬುಲೆಟ್ ಪ್ರಕಾಶ್