twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್, ಸುದೀಪ್, ಉಪೇಂದ್ರ 'ರೈ' ಸಿನಿಮಾ ಮಾಡಲು ಒಪ್ಪಲಿಲ್ಲ-ರವಿ ಶ್ರೀವತ್ಸ

    |

    ಮುತ್ತಪ್ಪ ರೈ ಬಯೋಪಿಕ್ ಸಿನಿಮಾ ಮಾತುಗಳು ಈ ಹಿಂದಿನಿಂದಲೇ ಕೇಳಿ ಬರುತ್ತಿದೆ. ಹಲವು ಭಾರಿ ಈ ಸಿನಿಮಾ ಮಾಡಲು ಮುಂದಾಗುತ್ತಿದ್ದ ನಿರ್ದೇಶಕರು ಕೈ ಬಿಡುತ್ತಿದ್ದರು. ಮೊದಲು ಮುತ್ತಪ್ಪ ರೈ ಸಿನಿಮಾ ಮಾಡಬೇಕು ಎಂದುಕೊಂಡವರು ಖ್ಯಾತ ನಿರ್ದೇಶಕ ರವಿ ಶ್ರೀವತ್ಸ ಮತ್ತು ರವಿ ಬೆಳಗೆರೆ. 'ರೈ' ಎಂಬ ಹೆಸರಲ್ಲಿ ಸಿನಿಮಾ ಸೆಟ್ಟೇರಿತ್ತಾದರೂ ಆದು ಕಾರ್ಯರೂಪಕ್ಕೆ ಬರಲಿಲ್ಲ. ಅದು ಯಾಕೆ ಎಂಬ ಬಗ್ಗೆ ಸ್ವತಃ ರವಿ ಶ್ರೀವತ್ಸ ಫಿಲ್ಮಿ ಬೀಟ್ ಕನ್ನಡ ಜೊತೆ ಎಕ್ಸಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

    ಹೌದು, ರೈ ಸಿನಿಮಾದ ಕೆಲಸ 2002ರಲ್ಲಿ ಆರಂಭ ಆಗುತ್ತೆ. ಮೊದಲು ನಾವು ಉಪೇಂದ್ರ ಅವರನ್ನು ಸೆಲೆಕ್ಟ್ ಮಾಡಿದ್ವಿ. ಆದರೆ ಕಥೆಯಲ್ಲಿ ಬದಲಾವಣೆ ಬಯಸಿದ್ರು ಉಪೇಂದ್ರ. ಆದರೆ ಅದು ರವಿಬೆಳಗೆರೆಯವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಉಪೇಂದ್ರ ಅವರನ್ನು ಕೈ ಬಿಟ್ಟೆವು. ಬಳಿಕ ಸುದೀಪ್ ಅವರನ್ನು ಈ ಸಿನಿಮಾಗೆ ಕೇಳಲಾಗಿತ್ತು. ಹಾಗೇ ದರ್ಶನ್ ಬಳಿಯೂ ಈ ಸಿನಿಮಾ ಮಾಡುವ ಆಯ್ಕೆ ಇತ್ತು. ಕಾರಣಾಂತರಗಳಿಂದ ಈ ಮೂವರು ಸಿನಿಮಾ ಮಾಡಲು ಆಗಿಲ್ಲ. ಎಷ್ಟು ಬಾರಿ ಈ ಸಿನಿಮಾ ಮಾಡಲು ಸ್ಟಾರ್ಟ್ ಮಾಡಿದಾಗಲೂ ನಿಂತು ಹೋಗುತ್ತಿತ್ತು ಎಂದಿದ್ದಾರೆ.

    Director Ravi Srivatsa Talks In An Exclusive Interview About Muthappa Rai Biopic Movie

    ಅಲ್ಲದೆ 'ರೈ' ಸಿನಿಮಾದಲ್ಲಿ ಸಾಕಷ್ಟು ಕಹಿ ಘಟನೆಗಳು, ನಿಜ ಸತ್ಯಾಂಶಗಳನ್ನು ರವಿ ಬೆಳಗೆರೆ ಬಿಚ್ಚಿಡುವ ಪ್ರಯತ್ನ ಮಾಡಿದ್ರು. ಆದರೆ ಈ ಕಥೆ ಸಿನಿಮಾ ಆಗಲಿಲ್ಲಾ ಎನ್ನುವ ಬಗ್ಗೆ ರವಿ ಶ್ರೀವತ್ಸ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಇನ್ನಷ್ಟು ಮಾತುಗಳನ್ನು ಈ ವೀಡಿಯೋದಲ್ಲಿ ನೀವು ನೋಡಬಹುದಾಗಿದೆ.

    English summary
    Director Ravi Srivatsa Talks In An Exclusive Interview About Muthappa Rai Biopic Movie, Know More.
    Sunday, May 29, 2022, 16:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X