Don't Miss!
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಾಲಿವುಡ್ ನಲ್ಲೂ 'ವೀರಪ್ಪನ್' ಹವಾ ಶುರು ಮಾಡ್ತಾರಂತೆ ವರ್ಮಾ
ಸದ್ಯಕ್ಕೆ ಎಲ್ಲೆಡೆ ನಿರ್ದೇಶಕ ವರ್ಮಾ ಆಕ್ಷನ್-ಕಟ್ ಹೇಳಿದ್ದ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾನೇ ಸದ್ದು ಮಾಡುತ್ತಿದೆ. ಈಗಾಗಲೇ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಿರುವ ಸಿನಿಮಾ ಇನ್ನೇನು ಹಾಲಿವುಡ್ ಕ್ಷೇತ್ರದಲ್ಲೂ ಸದ್ದು ಮಾಡಲು ತಯಾರಾಗಿದೆ.
ಹೌದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಯಶಸ್ವಿ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾವನ್ನು ಹಾಲಿವುಡ್ ನಲ್ಲೂ ಬಿಡುಗಡೆ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಈ ಮಾತನ್ನು ಖುದ್ದಾಗಿ ವರ್ಮಾ ಅವರೇ ಸಿನಿಮಾ ಯಶಸ್ವಿಯಾದ ನೆಪದಲ್ಲಿ ಚಿತ್ರತಂಡ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಖಚಿತಪಡಿಸಿದ್ದಾರೆ.[ವರ್ಮಾ ಅವರ 'ವೀರಪ್ಪನ್' 10 ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?]
'ಕಿಲ್ಲಿಂಗ್ ವೀರಪ್ಪನ್' ಸಿನಿಮಾವೇ ಅಲ್ಲದಿದ್ದರೂ, ವೀರಪ್ಪನ್ ಕುರಿತ ಚಿತ್ರವನ್ನು ಹಾಲಿವುಡ್ ನಲ್ಲಿ ಮಾಡುವುದಕ್ಕೆ ಆರ್.ಜಿ.ವಿ ಅವರು ತಯಾರಿ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಏನಪ್ಪಾ ಅಂದ್ರೆ ದುಬೈನಲ್ಲಿ ನೆಲೆಸಿರುವ ಅವರ ಸ್ನೇಹಿತರಂತೆ.
ಈಗಾಗಲೇ ವರ್ಮಾ ಅವರ ಗೆಳೆಯ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾವನ್ನು ನೋಡಿದ್ದು, ವೀರಪ್ಪನ್ ಕುರಿತಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಹಾಲಿವುಡ್ ಸಿನಿಮಾ ನಿರ್ಮಿಸಲು ಆಲೋಚನೆ ಮಾಡುತ್ತಿದ್ದಾರೆ.[ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ]
ಕುಖ್ಯಾತ ಕಾಡುಗಳ್ಳ ವೀರಪ್ಪನ್ ಬಗ್ಗೆ ಕರ್ನಾಟಕ, ತಮಿಳುನಾಡು ಮತ್ತು ಇಲ್ಲಿನವರಿಗೆ ಬಿಟ್ಟು ಹೊರ ದೇಶದಲ್ಲಿ ಅಷ್ಟಾಗಿ ಗೊತ್ತಿಲ್ಲದ ಕಾರಣ ಚಿತ್ರದಲ್ಲಿ ವೀರಪ್ಪನ್ ಅಂತ್ಯಕ್ಕೆ ಮಾತ್ರ ಪ್ರಾಮುಖ್ಯತೆ ಕೊಡದೆ, ವೀರಪ್ಪನ್ ಬೆಳೆದು ಬಂದ ದಾರಿ ಮತ್ತು ಆತನನ್ನು ಹಿಡಿಯುವುದಕ್ಕೆ ಏನೆಲ್ಲಾ ಕಸರತ್ತು ಮಾಡಲಾಯಿತು ಎಂಬುದನ್ನು ಹಾಲಿವುಡ್ ಚಿತ್ರದಲ್ಲಿ ವಿವರಿಸಲಾಗುತ್ತದಂತೆ.
ಆದ್ದರಿಂದ ಸಿನಿಮಾವನ್ನು ಮತ್ತೊಮ್ಮೆ ಮೊದಲಿನಂತೆ ಚಿತ್ರೀಕರಣ ಮಾಡಲಾಗುತ್ತದೆ. ವೀರಪ್ಪನ್ ಬಗ್ಗೆ ಮಾಹಿತಿ ಸಂಗ್ರಹಿಸಿ, ಪುಸ್ತಕ ಬರೆಯಲು ಭಾರತಕ್ಕೆ ಬಂದ ವಿದೇಶಿ ಪತ್ರಕರ್ತರ ಕುರಿತ ಘಟನೆಗಳು ಚಿತ್ರದಲ್ಲಿರುತ್ತವೆ ಎಂದು ಆರ್.ಜಿ.ವಿ ತಿಳಿಸಿದ್ದಾರೆ.