Don't Miss!
- News Mukhtar Ansari's death: ಉತ್ತರಪ್ರದೇಶದಲ್ಲಿ ಕಿಚ್ಚು ಹಚ್ಚಿದ ಗ್ಯಾಂಗ್ಸ್ಟಾರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ನಿಧನ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೆಂಕಟ್ ವಿರುದ್ಧ ಚಾಟಿ ಬೀಸಿದ ನಿರ್ದೇಶಕ ಎಸ್ ನಾರಾಯಣ್
ವಿವಾದಾತ್ಮಕ ನಟ ಕಮ್ ನಿರ್ದೇಶಕ ಹುಚ್ಚ ವೆಂಕಟ್ ಅವರು ಎಸ್ ನಾರಾಯಣ್ ನಿರ್ದೇಶನದ 'ಡಿಕ್ಟೇಟರ್' ಚಿತ್ರದಿಂದ ಹೊರ ನಡೆದ ನಂತರ ಚಿತ್ರ ಅರ್ಧಕ್ಕೆ ನಿಂತು ಹೋಗುತ್ತಾ? ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡಿತ್ತು.
ಮಾತ್ರವಲ್ಲದೆ ಹುಚ್ಚ ವೆಂಕಟ್ ಅವರು ನಾನು ಇನ್ನುಮುಂದೆ 'ಡಿಕ್ಟೇಟರ್' ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ನಿರ್ದೇಶಕರು ನನ್ನ ಕಾಲ್ ಶೀಟ್ ಪಡೆದುಕೊಂಡು ಸುಮ್ಮ-ಸುಮ್ಮನೆ ನನ್ನ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ನಿರ್ದೇಶಕ ಎಸ್ ನಾರಾಯಣ್ ಅವರ ಮೇಲೆ ಭಯಂಕರ ಫೈರ್ ಮಾಡಿದ್ದರು.[ಹುಚ್ಚ ವೆಂಕಟ್ ಅವರ 'ಡಿಕ್ಟೇಟರ್' ಸಿನಿಮಾ ಅರ್ಧಕ್ಕೆ ನಿಂತು ಹೋಯ್ತಾ?]
ಇದೀಗ ವೆಂಕಟ್ ಅವರಿಗೆ ಪ್ರತಿಯಾಗಿ ಮಾತನಾಡಿರುವ ನಿರ್ದೇಶಕ ಎಸ್.ನಾರಾಯಣ್ ಅವರು 'ಯಾವುದೇ ಕಾರಣಕ್ಕೂ ಸಿನಿಮಾ ನಿಲ್ಲುವುದಿಲ್ಲ ಮತ್ತು ಯಾರದರೂ ಚಿತ್ರತಂಡದಿಂದ ಹೊರನಡೆದರೂ ಈ ಸಿನಿಮಾ ಮಾತ್ರ ನಿಲ್ಲುವುದಿಲ್ಲ' ಎಂದು ಕಲಾ ಸಾಮ್ರಾಟ್ ನುಡಿದಿದ್ದಾರೆ.[ಹುಚ್ಚ ವೆಂಕಟ್ ಚಿತ್ರಕ್ಕೆ 'ಬಿಗ್ ಬಾಸ್' ಗೌತಮಿ ಹೀರೋಯಿನ್!]
'ನಮ್ಮ ಚಿತ್ರ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ಸ್ವಲ್ಪ ತಡವಾದರೂ ಖಂಡಿತ ಶುರು ಆಗಿಯೇ ಆಗುತ್ತದೆ. 'ಡಿಕ್ಟೇಟರ್' ಒಂದೊಳ್ಳೆಯ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಹೀಗಿರುವಾಗ ನನಗೆ ಅರ್ಜೆಂಟ್ ಮಾಡುವುದಕ್ಕೆ ಇಷ್ಟವಿಲ್ಲ. ನನಗೆ ಮೊದಲು ಸ್ಕ್ರಿಪ್ಟ್ ಮುಗಿಯಬೇಕು. ಆ ಬಳಿಕ ಅದು ತೃಪ್ತಿ ಕೊಡಬೇಕು' ಎಂದು ಎಸ್ ನಾರಾಯಣ್ ನುಡಿದಿದ್ದಾರೆ.
'ಯಾರೋ ಒತ್ತಡ ಹೇರುತ್ತಾರೆ ಎಂಬ ಕಾರಣಕ್ಕೆ ನನಗೆ ಏನೋ ಮಾಡೋದಕ್ಕೆ ಇಷ್ಟವಿಲ್ಲ. ನಾನು ಅನಾವಶ್ಯಕವಾಗಿ ಸಮಯ ಹಾಳು ಮಾಡುವುದಿಲ್ಲ. ನನ್ನ ಸಿನಿಮಾದ ಸ್ಕ್ರಿಪ್ಟ್ ಮುಗಿಯುವವರೆಗೆ ಎಂದಿಗೂ ಡೇಟ್ ಫಿಕ್ಸ್ ಮಾಡಲ್ಲ, ಅವರ ಅವಸರಕ್ಕೆ ನಾನೇನೂ ಮಾಡಲು ಆಗುವುದಿಲ್ಲ' ಎಂದು ಎಸ್ ನಾರಾಯಣ್ ಖಡಕ್ ಆಗಿ ನುಡಿದಿದ್ದಾರೆ.[ವೆಂಕಟ್ 'ಡಿಕ್ಟೇಟರ್'ಗೆ ಎಸ್.ನಾರಾಯಣ್ ಆಕ್ಷನ್-ಕಟ್]
ಒಟ್ನಲ್ಲಿ ವಾದ-ವಿವಾದಗಳ ನಡುವೆ ಅದ್ಯಾವಾಗ ಸಿನಿಮಾ ಸೆಟ್ಟೇರುತ್ತೋ ಗೊತ್ತಿಲ್ಲ. ನಿರ್ಮಾಪಕ ಬಿ.ವಿಜಯಕುಮಾರ್ ಕೂಡ ಮೊದಲು ಸ್ಕ್ರಿಪ್ಟ್ ಆಗಲಿ ಆ ನಂತರ ಸಿನಿಮಾ ಮಾಡೋಣ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.