Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂದು ಅಪ್ಪು ಅಭಿಮಾನಿ, ಇಂದು ಜನಪ್ರಿಯ ನಿರ್ದೇಶಕ: ಯಾರಿವರು ಹೇಳಿ.?
ಸ್ಯಾಂಡಲ್ ವುಡ್ ಗೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದವರು ನಿರ್ದೇಶಕ ಸಂತೋಷ್ ಆನಂದ್ ರಾಮ್.
ಇಂದು 'ಸ್ಟಾರ್ ನಿರ್ದೇಶಕ', 'ಜನಪ್ರಿಯ ನಿರ್ದೇಶಕ' ಅಂತೆಲ್ಲಾ ಕರೆಯಿಸಿಕೊಳ್ಳುವ ಸಂತೋಷ್ ಆನಂದ್ ರಾಮ್, ಸರಿಯಾಗಿ ಹನ್ನೊಂದು ವರ್ಷಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋದರೆ ಅಪ್ಪಟ ಅಪ್ಪು ಅಭಿಮಾನಿ ಆಗಿದ್ದರು.
ಶೇಷಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿದ್ದ ಸಂತೋಷ್ ಆನಂದ್ ರಾಮ್, ತಮ್ಮ ಕಾಲೇಜಿನ ಫೆಸ್ಟ್ ಗಾಗಿ ರಾಘವೇಂದ್ರ ರಾಜ್ ಕುಮಾರ್ ಮುಖಾಂತರ ಪುನೀತ್ ರಾಜ್ ಕುಮಾರ್ ರನ್ನ ಕರ್ಕೊಂಡು ಬಂದಿದ್ದರಂತೆ.
ಮೆಗಾ ಸಿನಿಮಾದ ಟೈಟಲ್ ಅನಾವರಣ: 'ಯುವರತ್ನ'ನಾದ ಪವರ್ ಸ್ಟಾರ್
ಅಂದು ಅಭಿಮಾನಿಯಾಗಿ ಪರಿಚಯಗೊಂಡು ಕಾರಿನಲ್ಲಿ ಪುನೀತ್ ಪಕ್ಕದಲ್ಲಿ ಕುಳಿತುಕೊಂಡು ಬಂದಿದ್ದ ಸಂತೋಷ್ ಆನಂದ್ ರಾಮ್ ಇಂದು ಅಪ್ಪು ಕುಟುಂಬಕ್ಕೆ ಅತ್ಯಾಪ್ತವಾಗಿದ್ದಾರೆ. ಅದೃಷ್ಟ ಅಂದ್ರೆ ಇದೇ ಅಲ್ವೇ.?
ತಮ್ಮ ಈ ಮೆಮೊರಿ ಮ್ಯಾಜಿಕ್ ನ ಸಂತೋಷ್ ಆನಂದ್ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
2007ನಾನು ಮತ್ತು ಪವರ್ ಸ್ಟಾರ್✌️ನಮ್ಮ sheshadripuram College Festಗೆ ಬಂದಿದ್ದರು! ನಾನೇ ರಾಘಣ್ಣನ್ನ Approach ಮಾಡಿ ಅಪ್ಪು ಸರ್ ನ ಕಾಲೇಜಿಗೆ ಕರೆತಂದಿದ್ದೇ ಅವರ ಕಾರಲ್ಲೇ ನನ್ನನ್ನ ಕುಳಿಸಿಕೊಂಡು ಬಂದರು😍ಫ್ಯಾನ್ ಆಗಿ ಪರಿಚಯವಾದೆ ಇಂದು(2017)ಅವರು ನನ್ನ ಫ್ಯಾಮಿಲಿ ಮೆಂಬರ್ ತರ ನೋಡ್ತಾರೆ ತಮ್ಮ ಅಂತಾರೆ! Feeling blessed❤️ pic.twitter.com/s0oEstSo17
— Santhosh Ananddram (@SanthoshAnand15) November 15, 2018
''2007 ರಲ್ಲಿ ನಾನು ಮತ್ತು ಪವರ್ ಸ್ಟಾರ್. ನಮ್ಮ ಶೇಷಾದ್ರಿಪುರಂ ಕಾಲೇಜ್ ಫೆಸ್ಟ್ ಗೆ ಬಂದಿದ್ದರು. ನಾನೇ ರಾಘಣ್ಣನ್ನ ಅಪ್ರೋಚ್ ಮಾಡಿ ಅಪ್ಪು ಸರ್ ನ ಕಾಲೇಜಿಗೆ ಕರೆತಂದಿದ್ದೆ. ಅವರ ಕಾರಲ್ಲೇ ನನ್ನನ್ನ ಕುಳಿಸಿಕೊಂಡು ಬಂದರು. ಫ್ಯಾನ್ ಆಗಿ ಪರಿಚಯವಾದೆ. ಇಂದು 2017 ಅವರು ನನ್ನ ಫ್ಯಾಮಿಲಿ ಮೆಂಬರ್ ತರಹ ನೋಡ್ತಾರೆ. 'ತಮ್ಮ' ಅಂತಾರೆ'' ಎಂದು ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಲ್ಲಿ ಮತ್ತೆರಡು ಸಿನಿಮಾ ಮಾಡ್ತಾರೆ ಸಂತೋಷ್
'ರಾಜಕುಮಾರ' ಬಳಿಕ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಹಿಟ್ ಕಾಂಬಿನೇಶನ್ 'ಯುವರತ್ನ' ಮೂಲಕ ಮುಂದುವರೆಯಲಿದೆ.