Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುತ್ತಾತನನ್ನು ಕಳೆದುಕೊಂಡ ದುಃಖದಲ್ಲಿ 'ರಾಜಕುಮಾರ' ನಿರ್ದೇಶಕ
ನಿರ್ದೇಶಕ ಸಂತೋಷ್ ಆನಂದ್ ರಾಮ್ ಈಗ ದುಃಖದಲ್ಲಿ ಇದ್ದಾರೆ. ಪ್ರೀತಿಯ ಮುತ್ತಾತನನ್ನು ಕಳೆದುಕೊಂಡಿದ್ದಾರೆ. ಸಂತೋಷ್ ಆನಂದ್ ರಾಮ್ ತಮ್ಮ ಮುತ್ತಾತ ನಿಧನರಾದ ವಿಷಯವನ್ನು ಟ್ಟಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.
''104 ವರುಷ ಮುತ್ತಿನಂತೆ ಬದುಕಿದ ನನ್ನ ಮುತ್ತಾತ ಇನ್ನಿಲ್ಲ!. ಆ ಆಲದ ಮರ ನನ್ನ ಮದುವೆಗೆ ಬಂದು ನನ್ನ ಹರಸಿದ್ದರು ಅದು ನನ್ನ ಪುಣ್ಯ. ಸ್ವಾವಲಂಬಿಯಾಗಿ 100 ವರುಷ ಬಾಳಿದ ನೀವು ಮತ್ತು ನಿಮ್ಮ ಬದುಕು ನಮಗೆ ಆದರ್ಶ. ನಮ್ಮ ಕುಟುಂಬದ ಅಜರಾಮರ ಇನ್ನು ಪಂಚಭೂತಗಳಲ್ಲಿ ಅಮರ'' ಎಂದು ಸಂತೋಷ್ ಆನಂದ್ ರಾಮ್ ಬರೆದುಕೊಂಡಿದ್ದಾರೆ.
104 ವರುಷ ಮುತ್ತಿನಂತೆ ಬದುಕಿದ ನನ್ನ ಮುತ್ತಾತ ಇನ್ನಿಲ್ಲ ! ಆ ಆಲದ ಮರ ನನ್ನ ಮದುವೆಗೆ ಬಂದು ನನ್ನ ಹರಸಿದ್ದರು ಅದು ನನ್ನ ಪುಣ್ಯ ! ಸ್ವಾವಲಂಬಿ ಯಾಗಿ 100 ವರುಷ ಬಾಳಿದ ನೀವು ಮತ್ತು ನಿಮ್ಮ ಬದುಕು ನಮಗೆ ಆದರ್ಶ....! ನಮ್ಮ ಕುಟುಂಬದ ಅಜರಾಮರ ಇನ್ನು ಪಂಚಬೂತಗಳಲ್ಲಿ ಅಮರ🙏 pic.twitter.com/p2HVNoo5mG
— Santhosh Ananddram (@SanthoshAnand15) May 16, 2018
ತಮ್ಮ ಕುಟುಂಬದ ಆಲದ ಮರದಂತೆ ಇದ್ದ ಮುತ್ತಾತನ ಆಗಲಿಗೆ ಸಂತೋಷ್ ಕಣ್ಣೀರು ಹಾಕಿದ್ದಾರೆ. ಅಂದಹಾಗೆ, ಸಂತೋಷ್ ಆನಂದ್ ರಾಮ್ ಕನ್ನಡದಲ್ಲಿ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸಂತೋಷ್ ಅವರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಚಿತ್ರಗಳ ಸೂಪರ್ ಹಿಟ್ ಆಗಿದ್ದು, ಮೂರನೇ ಸಿನಿಮಾವನ್ನು ಸಹ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಮಾಡುತ್ತಿದ್ದಾರೆ.