twitter
    For Quick Alerts
    ALLOW NOTIFICATIONS  
    For Daily Alerts

    ಉಪೇಂದ್ರಗೆ 'ಹೀಗೆ ಮಾಡಬೇಡಿ' ಎಂದ '2.0' ನಿರ್ದೇಶಕ ಶಂಕರ್.!

    |

    ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯಿಸಿರುವ '2.0' ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಈ ವಿಶೇಷವಾಗಿ ಚೆನ್ನೈನಲ್ಲಿ ಆಲ್ ಇಂಡಿಯಾ ಮಿಡೀಯಾ ಸುದ್ದಿಗೋಷ್ಠಿ ಮಾಡಲಾಯಿತು.

    ಈ ವೇದಿಕೆಯಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್, ನಟಿ ಆಮಿ ಜಾಕ್ಸನ್, ನಿರ್ದೇಶಕ ಶಂಕರ್, ಎಲ್ಲರೂ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಶಂಕರ್, ಕನ್ನಡದ ನಟ, ನಿರ್ದೇಶಕ ಉಪೇಂದ್ರ ಅವರಿಗೆ ಒಂದು ಸಲಹೆ ನೀಡಿದ್ದಾರೆ.

    ಕನ್ನಡದಲ್ಲಿ ಬರ್ತಿದ್ಯಾ ರಜನಿಯ '2.0'.? ಎಲ್ಲೆಲ್ಲೂ ಹರಿದಾಡ್ತಿದೆ ಕನ್ನಡ ಟೀಸರ್.! ಕನ್ನಡದಲ್ಲಿ ಬರ್ತಿದ್ಯಾ ರಜನಿಯ '2.0'.? ಎಲ್ಲೆಲ್ಲೂ ಹರಿದಾಡ್ತಿದೆ ಕನ್ನಡ ಟೀಸರ್.!

    ಉಪೇಂದ್ರ ಅವರ 'ಎ', 'ಉಪೇಂದ್ರ' ಅಂತಹ ಸಿನಿಮಾಗಳನ್ನ ನೋಡಿ ಸ್ಫೂರ್ತಿಯಾಗಿಸಿಕೊಂಡಿದ್ದ ಶಂಕರ್, 'ಉಪ್ಪಿಗೆ ಹೀಗೆ ಮಾಡಬೇಡಿ' ಎಂದಿದ್ದಾರೆ. ಅಷ್ಟಕ್ಕೂ, '2.0' ಟ್ರೈಲರ್ ಕಾರ್ಯಕ್ರಮದಲ್ಲಿ ಉಪ್ಪಿ ವಿಷ್ಯ ಯಾಕೆ ಬಂತು.? ಉಪೇಂದ್ರ ಬಗ್ಗೆ ಶಂಕರ್ ಯಾಕೆ ಮಾತಾಡಿದ್ರು.? ಎಂದು ತಿಳಿಯಲು ಮುಂದೆ ಓದಿ....

    ಶಂಕರ್ ಗೆ ಪ್ರಶ್ನೆ ಮಾಡಿದ ಉಪ್ಪಿ

    ಶಂಕರ್ ಗೆ ಪ್ರಶ್ನೆ ಮಾಡಿದ ಉಪ್ಪಿ

    ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ನಟ ಉಪೇಂದ್ರ ಅವರು ವಿಡಿಯೋ ಬೈಟ್ ಮೂಲಕ ಮಾತನಾಡಿದರು. ಚಿತ್ರಕ್ಕೆ ಶುಭ ಹಾರೈಸಿದ ಉಪೇಂದ್ರ ಅವರು ಶಂಕರ್ ಗೆ ಒಂದು ಪ್ರಶ್ನೆ ಕೇಳಿದರು. 'ನಾನೊಬ್ಬ ನಟ ಮತ್ತು ನಿರ್ದೇಶಕ. ನೀವೊಬ್ಬ ನಿರ್ದೇಶಕರಾಗಿ ನನಗೆ ಯಾವ ಒಂದು ಸಲಹೆ ಕೊಡ್ತೀರಾ'.? ಎಂದು ಕೇಳಿದ್ರು.

    ಮತ್ತೆ ಡೈರೆಕ್ಷನ್ ಗೆ ಸಿದ್ಧವಾದ ಉಪ್ಪಿ, ಸಂಕ್ರಾಂತಿಗೆ ಕೊಡ್ತಾರೆ ಬಂಪರ್.! ಮತ್ತೆ ಡೈರೆಕ್ಷನ್ ಗೆ ಸಿದ್ಧವಾದ ಉಪ್ಪಿ, ಸಂಕ್ರಾಂತಿಗೆ ಕೊಡ್ತಾರೆ ಬಂಪರ್.!

    'ಹೀಗೆ ಮಾಡಬೇಡಿ' ಎಂದ ಶಂಕರ್

    'ಹೀಗೆ ಮಾಡಬೇಡಿ' ಎಂದ ಶಂಕರ್

    ಉಪೇಂದ್ರ ಅವರು ಕೇಳಿದ್ದು ಪ್ರಶ್ನೆಯನ್ನುವುದಕ್ಕಿಂತ ಸಲಹೆ. ಹಾಗಾಗಿ, ಅವರ ಮಾತಿಗೆ ಗೌರವಿಸಿದ ಶಂಕರ್, ''ನೀವು ನಿಮಗೆ ಅನುಕೂಲಕರವಾದ ನಿರ್ದೇಶಕ, ಅನುಕೂಲಕರವಾದ ನಿರ್ಮಾಪಕ, ಅನುಕೂಲಕರವಾದ ಸ್ಕ್ರಿಪ್ಟ್, ಅನುಕೂಲಕರವಾದ ತಂತ್ರಜ್ಞರಿಗಾಗಿ ಸಿನಿಮಾ ಮಾಡಬೇಡಿ. ಒಂದೊಳ್ಳೆ ವಿಷಯವನ್ನ ಆಯ್ಕೆ ಮಾಡಿಕೊಂಡು, ಅದಕ್ಕೆ ಸರಿಯಾದ ನಿರ್ಮಾಪಕ, ನಿರ್ದೇಶಕ, ತಂತ್ರಜ್ಞರನ್ನ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿ' ಎಂದು ಹೇಳಲು ಬಯಸುತ್ತೇನೆ' ಎಂದರು.

    ರಜನಿಕಾಂತ್ ಗೆ ಪೈಪೋಟಿ ನೀಡುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್ ರಜನಿಕಾಂತ್ ಗೆ ಪೈಪೋಟಿ ನೀಡುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್

    'ಎ' ಸಿನಿಮಾ ನನಗೆ ಸ್ಫೂರ್ತಿ

    'ಎ' ಸಿನಿಮಾ ನನಗೆ ಸ್ಫೂರ್ತಿ

    ಇನ್ನು ಉಪೇಂದ್ರ ನಿರ್ದೇಶನ ಹಾಗೂ ನಟಿಸಿದ್ದ ಎ ಸಿನಿಮಾದ ಬಗ್ಗೆ ಮಾತನಾಡಿದ ಶಂಕರ್ 'ನಾನು ಅವರ ಸಿನಿಮಾಗಳನ್ನ ನೋಡಿ ಇಷ್ಟಪಟ್ಟಿದ್ದೀನಿ, ಎ, ಉಪೇಂದ್ರ ಚಿತ್ರಗಳು ನನಗೆ ಹಲವು ಬಾರಿ ಸ್ಫೂರ್ತಿಯಾಗಿದೆ. ನನ್ನ ಹಲವು ಚಿತ್ರಗಳ ಚರ್ಚೆಯಲ್ಲಿ 'ಎ' ಚಿತ್ರದ ಸ್ಕ್ರಿಪ್ಟ್ ಬಗ್ಗೆ ಮಾತನಾಡಿದ್ದೀನಿ' ಎಂದು ಶ್ಲಾಘಿಸಿದ್ದಾರೆ.

    ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಸುದೀಪ್ ನಟನೆ.! ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಸುದೀಪ್ ನಟನೆ.!

    ರಜನಿಯನ್ನ ಮೆಚ್ಚಿಕೊಂಡ ಉಪ್ಪಿ

    ರಜನಿಯನ್ನ ಮೆಚ್ಚಿಕೊಂಡ ಉಪ್ಪಿ

    ಇನ್ನು '2.0' ಚಿತ್ರಕ್ಕಾಗಿ ತಾವು ಕೂಡ ಕಾಯುತ್ತಿರುವುದಾಗಿ ಉಪೇಂದ್ರ ಹೇಳಿಕೊಂಡಿದ್ದರು. ರಜನಿಕಾಂತ್ ಮತ್ತು ಶಂಕರ್ ಅವರ ಬಗ್ಗೆ ಖುಷಿ ವ್ಯಕ್ತಪಡಿಸಿದ ಉಪೇಂದ್ರ, ನಮ್ಮ ಕನ್ನಡದಲ್ಲೂ ನೀವು ಸಿನಿಮಾ ಮಾಡಿ ಎಂದು ಮನವಿ ಮಾಡಿಕೊಂಡರು.

    English summary
    Tamil director shankar appreciate to kannada actor upendra for his direction and acting.
    Saturday, November 3, 2018, 15:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X