Don't Miss!
- News ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'RCB ಪ್ಲೀಸ್ ಅವರಿಗೋಸ್ಕರ ಕಪ್ ಗೆದ್ ಕೊಡ್ರೋ': ಸುನಿ ಹೇಳಿದ್ದು ಯಾರಿಗಾಗಿ?
ಐಪಿಎಲ್ 2020 ಟೂರ್ನಿ ಬಹುತೇಕ ಅಂತಿಮ ಭಾಗಕ್ಕೆ ಬಂದು ನಿಂತಿದೆ. ಸದ್ಯ ಫ್ಲೇ ಆಫ್ ಲೆಕ್ಕಾಚಾರ ನಡೆಯುತ್ತಿದೆ. ಆರ್ಸಿಬಿ ಪಾಲಿಗೆ ಇಂದಿನ ಪಂದ್ಯ ಬಹಳ ಮುಖ್ಯ. ಗೆದ್ದರೇ ಫ್ಲೇ ಆಫ್ ಖಚಿತ, ಸೋತರೆ ಬೇರೆ ಪಂದ್ಯದ ಫಲಿತಾಂಶದಲ್ಲಿ ಕಾದುನೋಡಬೇಕಾದ ಪರಿಸ್ಥಿತಿ.
ಡೆಲ್ಲಿ ವಿರುದ್ಧ ನಡೆಯಲಿರುವ ಇಂದಿನ ಪಂದ್ಯವನ್ನು ಗೆದ್ದು ಫ್ಲೇ ಆಫ್ ಟಿಕೆಟ್ ಪಕ್ಕಾ ಮಾಡಿಕೊಳ್ಳಲಿ ಎಂದು ಆರ್ಸಿಬಿ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಈ ಮಧ್ಯೆ ನಿರ್ದೇಶಕ ಹಾಗೂ ಕ್ರಿಕೆಟ್ ಪ್ರೇಮಿ ಸಿಂಪಲ್ ಸುನಿ ಅವರು ''ಪ್ಲೀಸ್ ಅವರಿಗೋಸ್ಕರ ಕಪ್ ಗೆದ್ ಕೊಡ್ರೋ'' ಎಂದು ಮನವಿ ಮಾಡ್ತಿದ್ದಾರೆ. ಅಷ್ಟಕ್ಕೂ, ಸುನಿ ಹೇಳಿದ್ದು ಯಾರಿಗಾಗಿ? ಮುಂದೆ ಓದಿ...
ಲೆಕ್ಕಚಾರ ಹೀಗಿತ್ತು....
''ಈ ದಿನದ ಪಂದ್ಯ ಬೆಂಗಳೂರಲ್ಲಿ ಆಡಿಸಿ ಸ್ಕೋರು ಉಲ್ಟಾ ಹೊಡೆದಿದ್ದರೇ ಪಕ್ಕಾ ಮಳೆ ಬಂದು ಇಬ್ಬರಿಗೂ ಒಂದೊಂದ್ ಪಾಯಿಂಟ್ ಸಿಕ್ಕಿರೋದು, ಇಬ್ಬರೂ ಫ್ಲೇ ಆಫ್ಗೆ ಹೋಗಬಹುದಿತ್ತು. ಅಬುಧಾಬಿ: No way ಚಾನ್ಸೇ ಇಲ್ಲಾ'' ಎಂದು ಸುನಿ ಲೆಕ್ಕಾಚಾರದ ಬಗ್ಗೆ ಮಾತನಾಡಿದ್ದಾರೆ.
ಐಪಿಎಲ್ ಬಗ್ಗೆ ಬೇಸರ ವ್ಯಕ್ತಪಡಿಸಿದ ನಿರ್ದೇಶಕ ಸಿಂಪಲ್ ಸುನಿ
ಇವತ್ತು ಗೆದ್ರೆ ಸೇಫ್, ಸೋತ್ರೆ?
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಇಂದಿನ ಪಂದ್ಯವನ್ನು ಆರ್ಸಿಬಿ ಗೆದ್ದರೆ ಮುಂಬೈ ಇಂಡಿಯನ್ಸ್ ಜೊತೆ ಫ್ಲೇ ಆಫ್ ಟಿಕೆಟ್ ಪಡೆದುಕೊಳ್ಳಲಿದ್ದಾರೆ. ಒಂದು ವೇಳೆ ಪಂದ್ಯ ಸೋತರೆ ಸನ್ರೈಸ್ ಹೈದರಾಬಾದ್ ಮುಂದಿನ ಪಂದ್ಯ ಸೋಲಬೇಕು ಎಂದು ಕಾಯಬೇಕಿದೆ.