Don't Miss!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- News Snake Video: ವಿಮಾನದಲ್ಲಿ ಹಾವು ಬಿಟ್ಟ ವ್ಯಕ್ತಿ: ಬೆಂಗಳೂರಿನಲ್ಲಿ ಬಂಧನ- ಶಿವಪುರಿಯಲ್ಲಿ ಅಪರೂಪದ ಹಾವು ಪತ್ತೆ!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭೂಕಂಪನ ಅನುಭವ ಹಂಚಿಕೊಂಡ ನಿರ್ದೇಶಕ ಸುನಿ
ಕೊಡುಗು ಜಿಲ್ಲೆಯಲ್ಲಿ ಮಳೆ, ಕೇರಳ ರಾಜ್ಯದಲ್ಲಿ ಮಳೆ, ಮಳೆಗೆ ಮನೆ ಬಿತ್ತು, ಗುಡ್ಡ ಜಾರಿತು, ಪ್ರವಾಹ ಉಂಟಾಯಿತು ಎಂಬ ಆತಂಕಕಾರಿ ವಿಷ್ಯಗಳನ್ನೇ ಕೇಳುತ್ತಿರುವ ಈ ಸಂದರ್ಭದಲ್ಲಿ ಭೂಕಂಪನ ಆಗಿದೆ ಎನ್ನುವುದು ಮತ್ತಷ್ಟು ಭಯ ಉಂಟು ಮಾಡಿದೆ.
ಹೌದು, ಬೆಂಗಳೂರಿನಲ್ಲಿ ಭೂಕಂಪನ ಆದ ಅನುಭವವನ್ನ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ, ಇದನ್ನ ವಿಜ್ಞಾನಿಗಳು ಅಲ್ಲೆಗಳೆದಿದ್ದು, ಬೆಂಗಳೂರಿನಲ್ಲಿ ಭೂಕಂಪನ ಆಗಿರುವುದು ಸುಳ್ಳು ಎಂದಿದ್ದಾರೆ.
ಇದೇ ವಿಚಾರವಾಗಿ ಕನ್ನಡದ ನಿರ್ದೇಶಕ ಸಿಂಪಲ್ ಸುನಿ ಅವರು ಟ್ವೀಟ್ ಮಾಡಿದ್ದು, 'ಭೂಕಂಪನ ಆಗಿದ್ದು ನಿಜಾ, ನನಗೆ ಅನುಭವ ಆಗಿದೆ' ಎಂದು ಹೇಳಿಕೊಂಡಿದ್ದಾರೆ.
ನಾಗದೇವನಹಳ್ಳಿ ಪಿನಾಕ ಸ್ಟುಡಿಯೋದಲ್ಲಿ #ಬಜಾ಼ರ್ ಚಿತ್ರದ ಸಂಕಲನ ಮಾಡುವಾಗ ಭೂಕಂಪನದ ಅನುಭವವಾಯಿತು...
— Su Ni (@SimpleSuni) August 16, 2018
ಮತ್ತ್ಯಾರಿಗಾದರು ಆಯಿತೆ ??...
ಒಂದ್ ತರ ಭಯ... ಒಂದ್ ತರ ಖುಷಿ pic.twitter.com/rpoaOBcCSG
''ನಾಗದೇವನಹಳ್ಳಿ ಪಿನಾಕ ಸ್ಟುಡಿಯೋದಲ್ಲಿ 'ಬಜಾರ್' ಚಿತ್ರದ ಸಂಕಲನ ಮಾಡುವಾಗ ಭೂಕಂಪನದ ಅನುಭವವಾಯಿತು...ಮತ್ತ್ಯಾರಿಗಾದರು ಆಯಿತೆ ??... ಒಂದ್ ತರ ಭಯ... ಒಂದ್ ತರ ಖುಷಿ'' ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿರುವ ಮತ್ತೆ ಕೆಲವರು ನಮಗೂ ಆ ಅನುಭವ ಆಗಿದೆ, ಆದ್ರೆ, ಯಾರೂ ನಂಬ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಆದ್ರೆ, ಭೂಗರ್ಭ ವಿಜ್ಞಾನಿಯೊಬ್ಬರು ಬೆಂಗಳೂರಿನಲ್ಲಿ ಯಾವುದೇ ಭೂಕಂಪನ ಆಗಿಲ್ಲ. ಗಾಳಿಯ ಸ್ಥಾನಪಲ್ಲಟದಿಂದ ಕೇಳಿ ಬಂದಿರುವ ಶಬ್ದ ಇದಾಗಿರಬಹುದು. ನಮಗೆ ಯಾರಿಗೂ ಭೂಮಿ ಕಂಪಿಸಿದ ಅನುಭವ ಆಗಿಲ್ಲ. ಭೂಗರ್ಭದ ಒಳಗೆ ಆಗಿರುವ ಕಂಪನ ಇದಲ್ಲ. ಮೋಡಗಳ ಏರುಪೇರಿನಿಂದ ಗಾಳಿ ಸ್ಥಾನಪಲ್ಲಟದ ಸದ್ದು ಇದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒಟ್ನಲ್ಲಿ, ಮಳೆ, ಅನಾಹುತ ಸುದ್ದಿಗಳ ಮಧ್ಯೆ ಭೂಕಂಪನದ ಸುದ್ದಿ ಬೆಂಗಳೂರಿಗರನ್ನ ಕೆಲವು ಕ್ಷಣ ಆತಂಕಕ್ಕೆ ಒಳಗಾಗಿಸಿದ್ದು ಮಾತ್ರ ಸುಳ್ಳಲ್ಲ. ಇನ್ನುಳಿದಂತೆ ಬಜಾರ್ ಸಿನಿಮಾ, ಸುನಿ ನಿರ್ದೇಶನ ಹಾಗೂ ಧನ್ವಿರ್ ನಟಿಸುತ್ತಿರುವ ಚಿತ್ರ.