ಸಪ್ತ ಸಾಗರ ದಾಟಿ ಮರಳಿ ಗೂಡಿಗೆ ಬಂದ ನಾಗಾಭರಣ
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅಮೇರಿಕದ ನಾಟಕೋತ್ಸವಕ್ಕೆ ನಾಟಕವೊಂದನ್ನು ನಿರ್ದೇಶಿಸಲು ತೆರಳಿರುವ ಸುದ್ದಿಯನ್ನ ನಾವೇ ನಿಮಗೆಲ್ಲರಿಗೂ ತಿಳಿಸಿದ್ವಿ. ಆ ಕಾರ್ಯವನ್ನ ಯಶಸ್ವಿಯಾಗಿ ಪೂರೈಸಿ ನಾಗಾಭರಣ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಆರ್ಯ ಆಚಾರ್ಯ ರವರ ನಾಟಕವಾದ 'ಅಗಸ್ತ್ಯನಿಂದ ಐಟಿ ವರೆಗೆ'ಯನ್ನು 'ಮುದ್ದಣನಿಂದ ಮನೋರಂ'ವರೆಗೆ ಎಂಬ ಶೀರ್ಷಿಕೆಯಲ್ಲಿ ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಟಿ.ಎಸ್.ನಾಗಾಭರಣ ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ಪತ್ನಿ ನಾಗಿಣಿ ಭರಣ ವಸ್ತ್ರ ವಿನ್ಯಾಸವಿದ್ದು, ಬಾಪು ಪದ್ಮನಾಭ ಅವರ ಸಂಗೀತವಿತ್ತು. [ಅಮೇರಿಕನ್ನಡಿಗರಿಗೆ ನಾಟಕದ ಮೇಷ್ಟ್ರಾದ ನಾಗಾಭರಣ]

'ಅಲ್ಲಮ' ಚಿತ್ರ ಚಿತ್ರೀಕರಣದ ನಡುವೆಯೂ, ನಾಟಕಗಳಿಗಾಗಿ ಸಮಯ ಮಾಡಿಕೊಂಡದ್ದು ನಾಗಾಭರಣ ರವರಲ್ಲಿನ ನಾಟಕ ಪ್ರೇಮ-ಗೌರವವನ್ನ ಸೂಚಿಸುತ್ತದೆ. ಸದ್ಯ ಚಿತ್ರಗಳ ಸ್ಕ್ರಿಪ್ಟ್ ನಲ್ಲಿ ಬಿಜಿಯಾಗಿರುವ ನಾಗಾಭರಣ ಅವರಿಗೆ 25 ದಿನಗಳ ಅಮೇರಿಕ ಪ್ರವಾಸ ಉತ್ಸಾಹ ತುಂಬಿರುವುದು ಸತ್ಯ.
More from Filmibeat
English summary
Director T.S.Nagabharana is back to Bangalore. Amidst busy schedule T.S.Nagabharana was on a cultural visit to direct a Kannada Play in California.


Click it and Unblock the Notifications











