Don't Miss!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತರುಣ್ ಸುಧೀರ್ ನಿರ್ದೇಶಕರಾಗಲು ಕಾರಣರಾಗಿದ್ದು ಈ ಗೆಳೆಯ
ನಿರ್ದೇಶಕ ತರುಣ್ ಸುಧೀರ್ ಇಂದು 'ರಾಬರ್ಟ್'ದಂತಹ ದೊಡ್ಡ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಂದು ನಿರ್ಮಾಪಕರು ಅವರನ್ನು ನಂಬಿ ಬಂಡವಾಳ ಹಾಕುತ್ತಾರೆ, ನಟರು ಕಾಲ್ ಶೀಟ್ ನೀಡುತ್ತಾರೆ. ಆದರೆ, ಅಂದು ಅವರನ್ನು ನಂಬಿದ್ದು, ಒಬ್ಬರು ಮಾತ್ರ.
ತರುಣ್ ಸುಧೀರ್ ನಿರ್ದೇಶಕ ಆಗಬಹುದು ಎಂದು ಮೊದಲು ನಂಬಿಕೆ ಇಟ್ಟಿದ್ದು, ಅವರಿಗೆ ಧೈರ್ಯ ತುಂಬಿದ್ದು, ಅವರ ಆಪ್ತ ಗೆಳೆಯ ಶರಣ್. ಇಂದು ನಟ ಶರಣ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಗೆಳೆಯನಿಗೆ ತರುಣ್ ಶುಭಾಶಯ ತಿಳಿಸಿದ್ದಾರೆ.
ಶರಣ್-ತರುಣ್ ಸುಧೀರ್ ಸ್ನೇಹವನ್ನ 4 ವರ್ಷ ದೂರ ಮಾಡಿತ್ತು ಆ ಒಂದು ಹಾಡು.!
ಸೋಷಿಯಲ್ ಮೀಡಿಯಾದಲ್ಲಿ ಶರಣ್ ಬಗ್ಗೆ ಬರೆದಿರುವ ತರುಣ್ ''ನನ್ನನ್ನು ಯಾರೊಬ್ಬರು ನಂಬದೆ ಇರುವ ಸಮಯದಲ್ಲಿ, ನಂಬಿಕೆ ಇಟ್ಟು, ಪ್ರೋತ್ಸಾಹ ನೀಡಿದ ಒಬ್ಬನೇ ವ್ಯಕ್ತಿ ಶರಣ್. ಸಹೋದರನ ರೀತಿ ನನಗೆ ಶಕ್ತಿ ತುಂಬಿದ್ದಾನೆ. ಹುಟ್ಟುಹಬ್ಬದ ಶುಭಾಶಯಗಳು. ಅಣ್ಣ'' ಎಂದು ಶುಭಾಶಯ ತಿಳಿಸಿದ್ದಾರೆ. ತಮ್ಮ ಹಾಗೂ ಶರರ್ಣ ಜೊತೆಗಿನ ಫೋಟೋವನ್ನು ತರುಣ್ ಹಂಚಿಕೊಂಡಿದ್ದಾರೆ.
ತರುಣ್ ಮತ್ತು ಶರಣ್ ಇಬ್ಬರು ಒಳ್ಳೆಯ ಗೆಳೆಯರು. ಶರಣ್ ಮೊದಲ ಸಿನಿಮಾದಿಂದ ಇಲ್ಲಿಯವರೆಗೆ ಅವರ ಜೊತೆಗೆ ತರುಣ್ ನಿಂತಿದ್ದಾರೆ. ಶರಣ್ ಕೂಡ ತರುಣ್ ಗೆ ಬೆಂಬಲವಾಗಿ ಇದ್ದಾರೆ.
ಶರಣ್ ಹೀರೋ ಆಗಲು ಹೊರಟಾಗ ಎದುರಾದ ಕಷ್ಟಗಳು ಒಂದೆರಡಲ್ಲ.!
'ರಾಂಬೋ', 'ರಾಂಬೋ 2', 'ಅಧ್ಯಕ್ಷ' 'ಅಧ್ಯಕ್ಷ 2' ಸಿನಿಮಾಗಳಲ್ಲಿ ಶರಣ್ ಹಾಗೂ ತರುಣ್ ಒಟ್ಟಿಗೆ ಕೆಲಸ ಮಾಡಿದ್ದಾರೆ.