Don't Miss!
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುಟ್ಟಣ್ಣ ಕಣಗಾಲ್ ಪುತ್ರನ ಸಾವಿಗೆ ಟಿಎನ್ ಸೀತಾರಾಮ್ ಸಂತಾಪ
ಕನ್ನಡ ಚಿತ್ರರಂಗಕಂಡ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ಶ್ರೀರಾಮು ಕಣಗಾಲ್ ಕೊರೊನಾಗೆ ಬಲಿಯಾಗಿದ್ದಾರೆ. ಪುಟ್ಟಣ್ಣ ಕಣಗಾಲ್ ಪುತ್ರನ ಸಾವಿಗೆ ಟಿಎನ್ ಸೀತಾರಾಮ್ ಸಂತಾಪ ಸೂಚಿಸಿದ್ದಾರೆ.
''ಗುರುಗಳಾದ ಶ್ರೀ ಪುಟ್ಟಣ್ಣ ಕಣಗಾಲ್ ರವರ ಕೊನೆಯ ಮಗ ರಾಮು ಕಣಗಾಲ್ ಇಂದು ಕೊರೋನಾದಿಂದಾಗಿ ನಿಧನ ಹೊಂದಿದ್ದಾನೆ. ನಾನು ಮೊದಲ ಬಾರಿ ಮದರಾಸಿನ ಅವರ ಮನೆಯಲ್ಲಿ ನೋಡಿದಾಗ ಪುಟ್ಟ ಹುಡುಗ...ನೆನಪುಗಳು ಅನೇಕ. ಅತ್ಯಂತ ನೋವಿನ ವಿಚಾರ'' ಎಂದು ನಿರ್ದೇಶಕ ಟಿಎನ್ ಸೀತಾರಾಂ ಬೇಸರ ವ್ಯಕ್ತಪಡಿಸಿದ್ದಾರೆ.
ಕೊರೊನಾದಿಂದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ ಸಾವು
ಕಳೆದ ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಶ್ರೀರಾಮು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದರು.
Recommended Video
ಚಿಕಿತ್ಸೆ ಫಲಕಾರಿಯಾಗದೆ ಇಂದು (ಏಪ್ರಿಲ್ 28) ಬೆಳಗ್ಗೆ ಕೊನೆಯುಸಿರೆಳಿದ್ದಾರೆ. ಶ್ರೀರಾಮು ಕಣಗಾಲ್ 'ಕಣಗಾಲ್ ನೃತ್ಯಾಲಯ' ಹೆಸರಿನಲ್ಲಿ ನಾಟ್ಯ ಶಾಲೆ ನಡೆಸುತ್ತಿದ್ದರು. ಭರತನಾಟ್ಯ ಪಂಡಿತರಾಗಿದ್ದ ಶ್ರೀರಾಮು ಅವರು ಅನೇಕ ಶಿಷ್ಯಂದಿರನ್ನು ಅಗಲಿದ್ದಾರೆ.
ಮದರಾಸಿನಲ್ಲಿ ಓದಿ ಬೆಳೆದಿದ್ದ ಶ್ರೀರಾಮು ಕಣಗಾಲ್ ಅವರು ಈ ಹಿಂದೆ ತಂದೆಯ ಬಗ್ಗೆ ಮಾತನಾಡುತ್ತ, ತಂದೆ ಶಿಸ್ತು ಮತ್ತು ಗೌರವಯುತವಾಗಿ ಬದುಕಲು ಹೇಳಿ ಕೊಟ್ಟಿದ್ದರು. ಅವರು ಹಾಕಿ ಕೊಟ್ಟ ಗೆರೆಯಲ್ಲೇ ಇಂದು ನಾವು ಬಾಳುತ್ತಿದ್ದೇವೆ. ನಮ್ಮ ತಂದೆಗೆ ಅಭಿಮಾನಿಗಳಿದ್ದಾರೆ. ಈಗಲೂ ಅಭಿಮಾನಿಗಳು ನನ್ನಲ್ಲಿ ನನ್ನ ತಂದೆಯನ್ನು ಕಾಣುತ್ತಾರೆ ಎಂದು ಹೇಳಿದ್ದರು.
54 ವರ್ಷ ವಯಸ್ಸಿನ ಶ್ರೀರಾಮು ಕಣಗಾಲ್ ಅವರು ಅವಿವಾಹಿತರಾಗಿದ್ದರು.ಪುಟ್ಟಣ್ಣ ಹೆಸರಿನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿ ಪ್ರಧಾನ ಸಮಯಕ್ಕೆ, ಶಿಷ್ಟಾಚಾರಕ್ಕಾದರೂ ಪುಟ್ಟಣ್ಣ ಕುಡಿಗಳಾದ ನಮಗೆ ಆಹ್ವಾನ ನೀಡುವುದಿಲ್ಲ. ಚಿತ್ರರಂಗ 75 ವರ್ಷದ ಸಂಭ್ರಮದಲ್ಲಿ ಈ ರಾಜ್ಯ ಕಂಡ ಯಶಸ್ವೀ ನಿರ್ದೇಶಕ ಪುಟ್ಟಣ್ಣ ಅವರ ಕುಟುಂಬದವರಾದ ನಮಗೆ ಆಹ್ವಾನ ಪತ್ರಿಕೆ ಕಳುಹಿಸುವ ಸೌಜನ್ಯತೆ ಈ ಚಿತ್ರರಂಗದವರಿಗಿಲ್ಲ. ಮಾತು ಮಾತಿಗೆ ನಾವು ಪುಟ್ಟಣ್ಣ ಶಿಷ್ಯರೆಂದು ಹೇಳುತ್ತಾರೆಯೆ ಹೊರತು ಅವರಿಗೆ ನಮ್ಮ ತಂದೆಯ ಮೇಲೆ ಗೌರವವಿಲ್ಲ ಎಂದು ಕಳೆದ ಅನೇಕ ವರ್ಷಗಳ ಹಿಂದೆ ರಾಮು ಬೇಸರ ವ್ಯಕ್ತ ಪಡಿಸಿದ್ದರು.