Don't Miss!
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಗಳು ಜಾನಕಿ' ಧಾರಾವಾಹಿ ಅಕಾಲಿಕ ಅಂತ್ಯ: ಸೀತಾರಾಮ್ ಹೇಳುವುದೇನು?
ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಮಗಳು ಜಾನಕಿ' ಇನ್ನು ಮುಂದೆ ಪ್ರಸಾರವಾಗುವುದಿಲ್ಲ.
Recommended Video
ಕೋಟ್ಯಂತರ ವೀಕ್ಷಕರನ್ನು ಸೆಳೆದಿದ್ದ, ಗುಣಮಟ್ಟದ, ಸದಭಿರುಚಿಯ, ಕೌಟುಂಬಿಕ ಧಾರಾವಾಹಿ ಎನಿಸಿಕೊಂಡಿದ್ದ ಮಗಳು ಜಾನಕಿ ಧಾರಾವಾಹಿ ಇನ್ನು ಮುಂದೆ ಪ್ರಸಾರವಾಗುವುದಿಲ್ಲ. ನಿರ್ದೇಶಕರು ಧಾರಾವಾಹಿಯನ್ನು ಅಂತ್ಯಗೊಳಿಸುವ ಮುನ್ನವೇ ಧಾರಾವಾಹಿ ಪ್ರಸಾರ ಅಂತ್ಯವಾಗುತ್ತಿದೆ.
ಮಗಳು ಜಾನಕಿ ಧಾರಾವಾಹಿ ಪ್ರಸಾರವಿಲ್ಲ: ನಿರ್ದೇಶಕ ಸೀತಾರಾಮ್
ಮಗಳು ಜಾನಕಿ ಧಾರಾವಾಹಿ ಪ್ರಸಾರವಾಗುತ್ತಿದ್ದ ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ. ಹಾಗಾಗಿ ಮಗಳು ಜಾನಕಿ ಧಾರಾವಾಹಿ ಸಹ ಸ್ಥಗಿತಗೊಳ್ಳುತ್ತಿದೆ.
ಅಕಾಲಿಕವಾಗಿ ಅಂತ್ಯವಾಗುತ್ತಿರುವ ಮಗಳು ಜಾನಕಿ
ತಮ್ಮ ನಿರ್ದೇಶನದ ಧಾರಾವಾಹಿ ಹೀಗೆ ಅಕಾಲಿಕವಾಗಿ ಅಂತ್ಯಗೊಳ್ಳುತ್ತಿರುವ ಬಗ್ಗೆ ಬೇಸರದಿಂದಲೇ ಫಿಲ್ಮೀಬೀಟ್ ಕನ್ನಡದ ಜೊತೆ ಮಾತನಾಡಿದ ಟಿ.ಎನ್.ಸೀತಾರಾಮ್, 'ಸದ್ಯಕ್ಕೆ ಮಗಳು ಜಾನಕಿ ಧಾರಾವಾಹಿ ಪ್ರಸಾರವಾಗುವುದಿಲ್ಲ (ಹೊಸ ಎಪಿಸೋಡ್) ಮುಂದೆ ಏನಾಗುತ್ತದೆಯೋ ದೇವರೇ ನಿರ್ಧರಿಸಲಿದ್ದಾನೆ' ಎಂದರು.
'ಬೇರೆ ಚಾನೆಲ್ ನಲ್ಲಿ ಅವಕಾಶ ಕೊಡಿ ಎಂದು ನಾವು ಕೇಳಲಾಗದು'
ಕಲರ್ಸ್ ಸೂಪರ್ ವಾಹಿನಿಯೇ ಬಂದ್ ಆಗುತ್ತಿದೆ. ಇದು ಆ ಚಾನೆಲ್ನ ಮ್ಯಾನೆಜ್ಮೆಂಟ್ ನಿರ್ಣಯ, ನಮ್ಮ ಧಾರಾವಾಹಿಗೆ ಬೇರೆ ಚಾನೆಲ್ ಕೊಡಿ ಎಂದು ನಾವು ಕೇಳಲಾಗದು. ಒಂದು ವೇಳೆ ಅವರೇನಾದರೂ ಕಲರ್ಸ್ನ ಬೇರೆ ಚಾನೆಲ್ನಲ್ಲಿ ಸ್ಲಾಟ್ ಕೊಟ್ಟರೆ ಖಂಡಿತ ಧಾರಾವಾಹಿ ಚಿತ್ರೀಕರಿಸಿ ಕೊಡುತ್ತೇವೆ ಎಂದು ಸೀತಾರಾಮ್ ಹೇಳಿದರು.
ಟಿ.ಎನ್. ಸೀತಾರಾಮ್ ಹಂಚಿಕೊಂಡ ತಾಯಿಯೊಬ್ಬಳ ಹೃದಯಕಲಕುವ ಪತ್ರ
ಹಕ್ಕುಸ್ವಾಮ್ಯದ ಪ್ರಶ್ನೆ
ಕಲರ್ಸ್ ಗುಂಪಿನ ಬೇರೆ ವಾಹಿನಿಯಲ್ಲೇಕೆ ಪ್ರಸಾರ ಮಾಡಬಾರದು ಎಂಬ ಪ್ರಶ್ನೆಗೆ, ಹಕ್ಕುಗಳ ಅಡೆ-ತಡೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಕಲರ್ಸ್ ಮ್ಯಾನೇಜ್ಮೆಂಟ್ ನಿರ್ಣಯ ಬದಲಾದಲ್ಲಿ ಮಾತ್ರವೇ ನಮ್ಮ ಧಾರಾವಾಹಿ ಬೇರೆ ಚಾನೆಲ್ನಲ್ಲಿ ಪ್ರಸಾರವಾಗಬಹುದು ಎಂದರು.
ಧಾರಾವಾಹಿ ಮೂಲಕ ಸಾಕಷ್ಟು ಹೇಳುವುದಿತ್ತು: ಸೀತಾರಾಮ್
ಪ್ರಸ್ತುತ ಸಾಮಾಜಿಕ ವಿಷಯಗಳನ್ನೇ ತಮ್ಮ ಧಾರಾವಾಹಿಯಲ್ಲಿ ತರುವ ಸೀತಾರಾಮ್ ಅವರು ಧಾರಾವಾಹಿ ಮೂಲಕ ಅನೇಕ ವಿಷಯಗಳ ಬಗ್ಗೆ ಹೇಳಬೇಕೆಂದುಕೊಂಡಿದ್ದರು. ಆದರೆ ಅನಿವಾರ್ಯವಾಗಿ ಧಾರಾವಾಹಿ ಚಿತ್ರೀಕರಣವನ್ನೇ ಬಂದ್ ಮಾಡಬೇಕಾಗಿದೆ.