Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೋಲ್ಡನ್ ಸ್ಟಾರ್ ಜನ್ಮದಿನಕ್ಕೆ ಯೋಗರಾಜ್ ಭಟ್ಟರ ಶುಭ ಹಾರೈಕೆ: 'ತಪ್ಪು ಕನ್ನಡ' ಬಳಕೆಗೆ ಆಕ್ಷೇಪ
ಗೋಲ್ಡನ್ ಸ್ಟಾರ್ ಗಣೇಶ್ 42ರ ಹರೆಯಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಮನೆಗೆ ಬರಬಾರದು ಎಂದು ಮನವಿ ಮಾಡಿದ್ದ ಗಣೇಶ್, ಸರಳವಾಗಿ ಮನೆಯವರೊಂದಿಗೆ ಜನ್ಮದಿನ ಆಚರಿಸಿಕೊಂಡರೂ, ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆ ಜೋರಾಗಿದೆ. 'ಹ್ಯಾಪಿ ಬರ್ಥಡೇ ಗೋಲ್ಡನ್ ಸ್ಟಾರ್' ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದೆ.
Recommended Video
ಗಣೇಶ್ ಜನ್ಮದಿನಕ್ಕೆ ಚಿತ್ರರಂಗದ ಗಣ್ಯರು, ನಟರು, ನಿರ್ದೇಶಕರು ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಅವರಲ್ಲಿ ಕೆಲವರ ಶುಭ ಹಾರೈಕೆ ವಿಭಿನ್ನ ಬರಹಗಳ ಮೂಲಕ ಗಮನ ಸೆಳೆದಿವೆ. ನಟ ಕಿಚ್ಚ ಸುದೀಪ್ ಎರಡು ದಿನಗಳ ಮುಂಚೆಯೇ ಶುಭ ಹಾರೈಸಿದ್ದರು. ಈ ನಡುವೆ ಗಣೇಶ್ ಅಭಿನಯದ 'ಗಾಳಿಪಟ 2' ಚಿತ್ರದ ತುಸು ವಿಭಿನ್ನವಾಗಿ ಶುಭಾಶಯ ಕೋರಿದೆ. ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಮುಂದೆ...
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗಣೇಶ್ ಗೆ ಚಂದನವನದ ತಾರೆಯರ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?
ಗಾಳಿಪಟ 2ದಿಂದ ಶುಭಾಶಯ
ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ 2' ಚಿತ್ರತಂಡ ಹಂಚಿಕೊಂಡಿರುವ ಶುಭಾಶಯದ ಪೋಸ್ಟರ್ ಗಮನ ಸೆಳೆಯುತ್ತಿದೆ. 'ಹುದ್ದಿಟ ಹಬ್ಬದ ಶುಶಾಭಯ' ಎಂದು ಯೋಗರಾಜ್ ಭಟ್ ಮತ್ತು ತಂಡ ಗಣೇಶ್ಗೆ ಶುಭ ಕೋರಿದೆ.
ಗಣೇಶ್ ಪಾತ್ರದ ಸುಳಿವು
'ಗಾಳಿಪಟ' ಚಿತ್ರ ವೀಕ್ಷಿಸಿದವರಿಗೆ ಈ ತಪ್ಪು ತಪ್ಪು ಕನ್ನಡ ಭಾಷೆಯ ಪ್ರಯೋಗ ನೆನಪಿರುತ್ತದೆ. ಇಂಗ್ಲಿಷ್ ಮೀಡಿಯಂನಲ್ಲಿ ಓದಿದ್ದ ಯುವಕ ಕನ್ನಡ ಬರೆಯಲು ಹೆಣಗಾಡುವ ದೃಶ್ಯಗಳು ಈ ಚಿತ್ರದಲ್ಲಿದ್ದವು. 'ಗಾಳಿಪಟ 2' ಚಿತ್ರದಲ್ಲಿಯೂ ಗಣೇಶ್ ಈ ಕನ್ನಡ ಭಾಷೆಯ ಪರದಾಟ ಮುಂದುವರಿಯುವ ಸುಳಿವನ್ನು ಈ ಪೋಸ್ಟರ್ ನೀಡಿದೆ.
'ಯಾರೋ ನೀನು ಮಾನವ, ಕೇಳುತಿಹುದು ಕೊರೊನಾ...': ಭಟ್ಟರ ಹಾಡಿನ ಮೋಡಿ
ಅಭಿಮಾನಿಗಳ ಪ್ರತಿಕ್ರಿಯೆ
ಕನ್ನಡ ಭಾಷೆಯಲ್ಲಿ ಪಂಡಿತರಾದ ಯೋಗರಾಜ್ ಭಟ್ಟರ ತಂಡದ ಈ ಹೊಸ ಬಗೆಯ ಶುಭ ಹಾರೈಕೆಗೆ ವಿಭಿನ್ನ ಬಗೆಯ ಪ್ರತಿಕ್ರಿಯೆಗಳು ಬಂದಿವೆ. ವಿಶೇಷ ರೀತಿಯಲ್ಲಿ ವಿಷ್ ಮಾಡಿದ್ದೀರಿ. ಹೊಸ ಪದಗಳನ್ನು ಪರಿಚಯಿಸಿದ್ದೀರಿ ಎಂದು ಇದನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಭಟ್ಟರು ತಪ್ಪಾಗಿ ಟೈಪ್ ಮಾಡಿದ್ದಾರೆ, ಸರಿ ಮಾಡಿ ಎಂದು ಸಲಹೆ ನೀಡಿದ್ದಾರೆ.
ತಪ್ಪು ಸಂದೇಶ ಹೋಗುತ್ತದೆ...
ಆದರೆ, ಇದು ಸೃಜನಶೀಲತೆಯಲ್ಲ. ಪ್ರಚಾರದ ಗಿಮಿಕ್ ಎಂದು ಅನೇಕರು ಟೀಕಿಸಿದ್ದಾರೆ. ಪಾತ್ರ ತಪ್ಪಾಗಿ ಕನ್ನಡ ಬಳಸುತ್ತದೆ ಎಂದು ಇದರಲ್ಲಿಯೂ ಆ ರೀತಿ ಭಾಷೆ ಬಳಕೆ ಮಾಡುವುದು ಸರಿಯಲ್ಲ. ಕನ್ನಡ ಕಲಿಯುತ್ತಿರುವವರಿಗೆ ಇದರಿಂದ ತಪ್ಪು ಸಂದೇಶಗಳು ಹೋಗುತ್ತದೆ. 'ಗಾಳಿಪಟ' ಬಂದು ಹತ್ತು ವರ್ಷಗಳಾಗಿದೆ. ಆಗ ಸೃಷ್ಟಿಸಿದ ಪಾತ್ರ ಈಗಲೂ ಹಾಗೆಯೇ ಇದೆಯೇ? ಎಂದು ಆಕ್ಷೇಪಿಸಿದ್ದಾರೆ. ಇದು ಪ್ರಚಾರಕ್ಕಾಗಿ ಮಾಡಿರುವ ತರಲೆ ಅಷ್ಟೇ. ಇದನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಯೋಗರಾಜ್ ಭಟ್ಟರ ಕನ್ನಡ ಭಾಷೆ ಜ್ಞಾನ ಅದ್ಭುತವಾಗಿದೆ. ಸಿನಿಮಾಗಳಿಗಾಗಿ ಇಂತಹ ಪ್ರಯೋಗಗಳು ಸಾಮಾನ್ಯ ಎಂದು ಕೆಲವರು ಸಮರ್ಥಿಸಿದ್ದಾರೆ.