ಮಠ ಗುರುಪ್ರಸಾದ್ ಹ್ಯಾಟ್ರಿಕ್ ಹೊಡೀತಾರಾ?

ಚಲನಚಿತ್ರ ನಿರ್ದೇಶನಕನೊಬ್ಬನ ಒದ್ದಾಟಗಳೇ ಈ ಚಿತ್ರದ ಕಥಾವಸ್ತು. ಆರಂಭದಲ್ಲಿ ಕೋಮಲ್ ಅವರನ್ನು ನಾಯಕ ನಟನನ್ನಾಗಿ ಆಯ್ಕೆ ಮಾಡಲಾಗಿತ್ತು. ಸಂಪೂರ್ಣ ಕಥೆ ಕೇಳಿದ ಬಳಿಕ ಅವರು ಕೈಎತ್ತಿದರು. ಪತ್ರಿಕಾಗೋಷ್ಠಿಯನ್ನೂ ಕರೆದು ನಾನು ಆ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದು ಹೇಳಿದರು.
ಬಳಿಕ ಕಥೆಯಲ್ಲಿ ಒಂಚೂರು ಬದಲಾವಣೆಗಳನ್ನು ಮಾಡಿಕೊಂಡು ಹೊಸಬರಿಗೆ ಬಣ್ಣ ಹಾಕಿಸಿದರು ಗುರುಪ್ರಸಾದ್. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಸಹ ಅವರದೇ. ಅವರ ಮೆಚ್ಚಿನ ತಾಂತ್ರಿಕ ಬಳಗವಾದ ಅನೂಪಿ ಸೀಳಿನ್ (ಸಂಗೀತ), ಮಹೇಂದ್ರ ಸಿಂಹ (ಛಾಯಾಗ್ರಹಣ) ಜೊತೆಗಿದೆ.
ಸಿನಿಮಾ 'ಸಂಬಂಧ ಸುತ್ತ' ಕಥೆ ಸುತ್ತುತ್ತದೆ. ಗಾಂಧಿನಗರಕ್ಕೆ ಹತ್ತಿರವಾದ ಸಬ್ಜೆಕ್ಟ್. ಮಠ, ಎದ್ದೇಳು ಮಂಜುನಾಥ ಚಿತ್ರಗಳ ಯಶಸ್ಸಿನ ನಂತರ ನಮಗೊಂದು ಚಿತ್ರ ಮಾಡಿಕೊಡಿ ಎಂದು ಸಾಕಷ್ಟು ನಿರ್ಮಾಪಕರು ಗುರು ಬೆನ್ನಿಗೆ ಬಿದ್ದರೂ ಪ್ರಯೋಜನವಾಗಿರಲಿಲ್ಲ.
ಕಡೆಗೆ ಅಜೇಯ ಪಿಕ್ಚರ್ಸ್ ಹಾಗೂ ಗುರುಪ್ರಸಾದ್ ಇಂಕ್ ಲಾಂಛನದಲ್ಲಿ ಎಂ.ಗೋವಿಂದ ನಿರ್ಮಿಸಿರುವ ಚಿತ್ರಕ್ಕೆ ಓಕೆ ಎಂದರು. ಬಿ.ಎಸ್.ಕೆಂಪರಾಜ್ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ.
ಚಿಂತಾಮಣಿಯ ಹೆಮ್ಮೆಯ ಕವಿ ಬಿ.ಆರ್.ಲಕ್ಷ್ಮಣರಾವ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಗುರುಪ್ರಸಾದ್ ಅವರೇ ಕಲಾ ನಿರ್ದೇಶನ ಮಾಡಿರುವ ಈ ಚಿತ್ರದ ತಾರಾಬಳಗದಲ್ಲಿ ಧನಂಜಯ್, ರಂಗಾಯಣರಘು, ಪೂಜಾಗಾಂಧಿ, ರಾಮ್ ಮುಂತಾದವರಿದ್ದಾರೆ. (ಏಜೆನ್ಸೀಸ್)


Click it and Unblock the Notifications











