ಕನ್ನಡದ ಟಾಪ್ ಹೀರೋಗಳ ಗಾಡ್ ಫಾದರ್ ಇವರೇ ನೋಡಿ!

By Naveen

Recommended Video

ಕನ್ನಡದ ಟಾಪ್ ಹೀರೋಗಳ ಗಾಡ್ ಫಾದರ್ ಇವರೇ | Filmibeat Kannada

ಒಬ್ಬ ನಿರ್ದೇಶಕ ಒಂದು ಸಿನಿಮಾದ ನಿಜವಾದ ಹೀರೋ ಎಂಬ ಮಾತಿದೆ. ನಿರ್ದೇಶಕ ಮನಸು ಮಾಡಿದ್ದರೆ ಒಬ್ಬ ದೊಡ್ಡ ಸ್ಟಾರ್ ಅನ್ನು ಹುಟ್ಟಿಸಬಹುದು. ಕಥೆ ಮತ್ತು ನಿರ್ದೇಶಕ ಇಬ್ಬರು ಒಂದು ಸಿನಿಮಾದ ದೊಡ್ಡ ಆಸ್ತಿ.

ಅಂದಹಾಗೆ, ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಪುನೀತ್ ರಾಜ್ ಕುಮಾರ್, ದರ್ಶನ್, ಗಣೇಶ್, ದುನಿಯಾ ವಿಜಯ್ ಈ ರೀತಿಯ ನಟರಿಗೆ ಮೊದಲ ಆಕ್ಷನ್ ಕಟ್ ಹೇಳಿದ ನಿರ್ದೇಶಕರು ಯಾರು ಎಂಬುದು ಎಲ್ಲರಿಗು ಇರುವ ಸಣ್ಣ ಕುತೂಹಲವಾಗಿದೆ. ಆ ರೀತಿಯ ಕನ್ನಡದ ಟಾಪ್ ಹೀರೋಗಳನ್ನು ಪರಿಚಯ ಮಾಡಿದ್ದ ನಿರ್ದೇಶಕರ ಪಟ್ಟಿ ಮುಂದಿದೆ ಓದಿ...

ಸಂಗೀತಂ ಶ್ರೀನಿವಾಸ್

ಸಂಗೀತಂ ಶ್ರೀನಿವಾಸ್

ನಟ ಶಿವರಾಜ್ ಕುಮಾರ್ 'ಆನಂದ್' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದರು. ವರನಟ ರಾಜ್ ಕುಮಾರ್ ಅವರ ಮಗನನ್ನು ಸಿನಿಮಾರಂಗಕ್ಕೆ ಪರಿಚಯ ಮಾಡಿದ್ದು ನಿರ್ದೇಶಕ ಸಂಗೀತಂ ಶ್ರೀನಿವಾಸ್. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾಗಿದ್ದ ಸಂಗೀತಂ ಶ್ರೀನಿವಾಸ್ ಮೊದಲು ಶಿವಣ್ಣನಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕನಾಗಿದ್ದಾರೆ.

ಸುನೀಲ್ ಕುಮಾರ್ ದೇಸಾಯಿ

ಸುನೀಲ್ ಕುಮಾರ್ ದೇಸಾಯಿ

ನಟ ಕಿಚ್ಚ ಸುದೀಪ್ 'ಸ್ಪರ್ಶ' ಚಿತ್ರಕ್ಕೆ ಮುಂಚೆ ಕೆಲವು ಸಿನಿಮಾಗಳನ್ನು ಮಾಡಿದ್ದರು ಸಹ ಆ ಚಿತ್ರಗಳು ರಿಲೀಸ್ ಆಗಿರಲಿಲ್ಲ. ಈ ವೇಳೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಹೊಸ ಸಿನಿಮಾಗೆ ಸುದೀಪ್ ಅವರನ್ನು ಆಯ್ಕೆ ಮಾಡಿದರು. ಮೊದಲ ಸಿನಿಮಾದಲ್ಲಿಯೇ ಸುದೀಪ್ ನಟನೆ ಮೂಲಕ ಎಲ್ಲರ ಗಮನ ಸೆಳೆದರು. ಅಂದಿನಿಂದ ಇಂದಿನವರಗೆ ಸುದೀಪ್ ಯಾವ ಪಾತ್ರ ಕೊಟ್ಟರು ಲೀಲಾಜಾಲವಾಗಿ ಅಭಿನಯಿಸುತ್ತಾರೆ.

ಪಿ ಎನ್ ಸತ್ಯ

ಪಿ ಎನ್ ಸತ್ಯ

ನಿರ್ದೇಶಕ ಪಿ.ಎನ್.ಸತ್ಯ ದರ್ಶನ್ ಅವರ ಮೊದಲ ಸಿನಿಮಾ 'ಮೆಜೆಸ್ಟಿಕ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಮೂಲಕ ಖಳನಾಯಕನ ಮಗನಾಗಿದ್ದ ದರ್ಶನ್ ಒಬ್ಬ ಹೀರೋ ಆಗಿ ಇಂಡಸ್ಟ್ರಿ ಯಲ್ಲಿ ಎದ್ದು ನಿಂತರು. ಮೊದಲ ಸಿನಿಮಾದಲ್ಲಿಯೇ ಮಾಸ್ ಅವತಾರದಲ್ಲಿ ದರ್ಶನ್ ಎಂಟ್ರಿ ಕೊಟ್ಟರು.

ಉಪೇಂದ್ರ

ಉಪೇಂದ್ರ

ನಟ ಉಪೇಂದ್ರ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದವರು. ನಿರ್ದೇಶಕನಾಗಿ ದೊಡ್ಡ ಯಶಸ್ಸು ಪಡೆದಿದ್ದ ಉಪ್ಪಿ 'ಎ' ಸಿನಿಮಾದ ಮೂಲಕ ನಾಯಕ ಕೂಡ ಆದರು. ಈ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ, ನಟನೆ ಎಲ್ಲ ಜವಾಬ್ದಾರಿಗಳನ್ನು ಉಪೇಂದ್ರ ನಿರ್ವಹಿಸಿದರು.

ಪೂರಿ ಜಗನ್ನಾಥ್

ಪೂರಿ ಜಗನ್ನಾಥ್

ಬಾಲ ನಟನಾಗಿದ್ದ ಪುನೀತ್ ರಾಜ್ ಕುಮಾರ್ 'ಅಪ್ಪು' ಸಿನಿಮಾದ ಮೂಲಕ ನಾಯಕ ನಟ ಆದರು. ಈ ಚಿತ್ರವನ್ನು ಪೂರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ಪುನೀತ್ ಅವರ ಮೊದಲ ಸಿನಿಮಾವಾದ 'ಅಪ್ಪು' ನೂರು ದಿನ ಪ್ರದರ್ಶನ ಕಂಡಿದೆ.

ಶಶಾಂಕ್

ಶಶಾಂಕ್

ರಾಕಿಂಗ್ ಸ್ಟಾರ್ ಯಶ್ 'ಜಂಬದ ಹುಡುಗಿ' ಸಿನಿಮಾದ ಒಂದು ಪಾತ್ರದಲ್ಲಿ ನಟಿಸಿದ್ದರು. ಹೀರೋ ಆಗಿ 'ಮೊಗ್ಗಿನ ಮನಸು' ಮೂಲಕ ಯಶ್ ಚಿತ್ರರಂಗಕ್ಕೆ ಬಂದರು. ಈ ಚಿತ್ರವನ್ನು ಶಶಾಂಕ್ ನಿರ್ದೇಶನ ಮಾಡಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರು ಇದೇ ಸಿನಿಮಾದ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದರು.

ಸೂರಿ

ಸೂರಿ

'ದುನಿಯಾ' ಸಿನಿಮಾದ ಮೂಲಕ ಹೀರೋ ಪಟ್ಟ ಪಡೆದ ನಟ ದುನಿಯಾ ವಿಜಯ್ ಇಂದು ಸ್ಟಾರ್ ನಟನಾಗಿದ್ದಾರೆ. 'ದುನಿಯಾ' ಸಿನಿಮಾವನ್ನು ಸೂರಿ ನಿರ್ದೇಶನ ಮಾಡಿದ್ದು, ಇದೇ ಶುಕ್ರವಾರ ಅಂದರೆ ಫೆಬ್ರವರಿ 23ಕ್ಕೆ ಸಿನಿಮಾ ಬಿಡುಗಡೆಯಾಗಿ 10 ವರ್ಷ ಪೂರೈಸಲಿದೆ. ವಿಶೇಷ ಅಂದರೆ ಅದೇ ದಿನ ಶಿವಣ್ಣ ಮತ್ತು ಸೂರಿ ಕಾಂಬಿನೇಶನ್ ನಲ್ಲಿ ಬರ್ತಿರುವ 'ಟಗರು' ಬಿಡುಗಡೆಯಾಗುತ್ತಿದೆ.

ಎಂ.ಡಿ. ಶ್ರೀಧರ್

ಎಂ.ಡಿ. ಶ್ರೀಧರ್

ನಟ ಗಣೇಶ್ 'ಚೆಲ್ಲಾಟ' ಚಿತ್ರದ ಮೂಲಕ ನಾಯಕ ನಟನಾದರು. ಈ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡಿದ್ದರು. 'ಚೆಲ್ಲಾಟ' ನಂತರ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿದ ಗಣೇಶ್ ನಂತರ ಗೋಲ್ಡನ್ ಸ್ಟಾರ್ ಆದರು.

English summary
List of kannada directors who introduced kannada star actors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X